ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಷ್ ಕಂಪೆನಿ ಘಟಕ ಲಾಕೌಟ್
ಕಂಪೆನಿಯ ಕಾರ್ಮಿಕರು ವ್ಯವಸ್ಥಾಪಕರಿಗೆ ದೈಹಿಕ ಬೆದರಿಕೆ ಹಾಕಿ ವೇತನ ಪರಿಷ್ಕರಣೆಗೆ ಆಗ್ರಹಿಸಿ ಟೂಲ್ ಡೌನ್ ಮುಷ್ಕರ ಘೋಷಿಸಿದ್ದರು. ಈ ಮುಷ್ಕರದಿಂದಾಗಿ ಘಟಕಗಳಲ್ಲಿರುವ ಯಂತ್ರಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಕಳೆದ ಫೆಬ್ರವರಿ ತಿಂಗಳಲ್ಲಿ ಸುಮಾರು ಆರು ಕೋಟಿ ರೂಪಾಯಿ ಆದಾಯ ಕಡಿಮೆ ಗಳಿಸಿದೆ. ಇದರಿಂದ ಕಾರ್ಮಿಕರು ಕೂಡ ಭತ್ಯೆ ಮತ್ತು ಇತರ ಸೌಲಭ್ಯಗಳನ್ನೂ ಕಳೆದು ಕೊಂಡಿದ್ದರೂ ತಮ್ಮ ಮುಷ್ಕರವನ್ನು ಮುಂದುವರಿಸಿದ್ದರು.
ಇಲ್ಲಿನ ಘಟಕದ ಕಾರ್ಮಿಕರು ದೇಶದಲ್ಲಿರುವ ತನ್ನ ಇತರ ಘಟಕಗಳಲ್ಲಿನ ಕಾರ್ಮಿಕರಿಗಿಂತ ಅಧಿಕ ವೇತನ ಪಡೆಯುತ್ತಿದ್ದಾರೆ. ನಾಗನಾಥಪುರ ಘಟಕದ ಕಾರ್ಮಿಕನ್ನೊಬ್ಬನ ಸರಾಸರಿ ತಿಂಗಳಿಗೆ 37 ಸಾವಿರ ವೇತನ ಪಡೆಯುತ್ತಿದ್ದಾರೆ ಎಂದು ಆಡಳಿತ ಮಂಡಳಿಸ್ಪಷ್ಟೀಕರಣ ನೀಡಿದೆ.
Comments
Story first published: Wednesday, March 10, 2010, 14:35 [IST]