ಚುನಾವಣೆ ನಂತರ ರಾಜ್ಯ ಸಂಪುಟ ವಿಸ್ತರಣೆ
ವಿರೋಧ ಪಕ್ಷಗಳ ಅಸಹಕಾರದ ನಡುವೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನವಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಭಾರತೀಯ ಜನತಾ ಪಕ್ಷ ಈ ಚುನಾವಣೆಯಲ್ಲಿ ದಾಖಲೆ ಜಯಗಳಿಸಲಿದೆ. ಕನಿಷ್ಠ 24 ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಯಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ಆಸಕ್ತಿಯಿಂದ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ನಾವು ನೋಡುತ್ತಿದ್ದೇವೆ. ಉತ್ತಮ ಕಾರ್ಯನಿರ್ವಹಣೆ ತೋರಿಸದ ಸಚಿವರಿಗೆ ಕೊಕ್ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಆಪರೇಷನ್ ಕಮಲ ಎಂದು ಬೆರಳು ತೋರಿಸುತ್ತಾರೆ. ಕಾಂಗ್ರೆಸ್ ವಲಸೆಗಾರರ ಪಕ್ಷ ಅಲ್ಲವೇ? ಸಿದ್ದರಾಮಯ್ಯ, ದೇಶಪಾಂಡೆ, ಉಗ್ರಪ್ಪ ಸೇರಿ ಅನೇಕರು ಎಲ್ಲಿಂದ ಬಂದವರು ಎಂಬುದನ್ನು ನೆನಪಿಸಿಕೊಂಡು ಆರೋಪ ಮಾಡಬೇಕು ಎಂದು ಯಡಿಯೂರಪ್ಪ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ವಿ ಸೋಮಣ್ಣ ಅವರು ಸಂಪುಟ ಸಚಿವರಾಗುವ ಸಾಧ್ಯತೆಗಳಿವೆ. ಸಿಪಿ ಯೋಗೀಶ್ವರ ಗೆದ್ದರೆ ದೆಹಲಿಗೆ, ಸೋತರೆ?
(ದಟ್ಸ್ ಕನ್ನಡ ವಾರ್ತೆ)