ತಲೆಮರೆಸಿಕೊಂಡ ರಾಮಲಿಂಗಾರಾಜು: ಸೆಬಿ
ಹೈದರಾಬಾದ್, ಜ.8: ಸತ್ಯಂ ಕಂಪ್ಯೂಟರ್ಸ್ ರಾಮಲಿಂಗಾರಾಜು ಭಾರಿ ಅವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕೆಂದು ಸೆಬಿ ನಿರ್ಣಯಿಸಿತ್ತು. ಈ ಸಂಬಂಧ ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಬೇಕೆಂದು ಸೆಬಿ ಅಧಿಕಾರಿಗಳು ಗುರುವಾರ ಮುಂಜಾನೆಯೇ ಹೈದಾರಾಬಾದ್ ಸೇರಿಕೊಂಡರು. ಆದರೆ ಸತ್ಯಂ ಕಂಪ್ಯೂಟರ್ಸ್ ನ ರಾಮಲಿಂಗಾರಾಜು ನಾಪತ್ತೆ!!!
ರಾಮಲಿಂಗಾರಾಜು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸತ್ಯಂ ಆಡಳಿತ ಮಂಡಳಿ ತಿಳಿಸಿದೆ. ರಾಜು ಬುಧವಾರ(ಜ.7) ಮುಂಜಾನೆಯೇ ಟೆಕ್ಸಾಸ್ ಗೆ ಹೊರಟು ಹೋದರು ಎನ್ನುತ್ತಿದ್ದಾರೆ ಹೈದರಾಬಾದ್ ಪೊಲೀಸರು. ಆದರೆ ರಾಮಲಿಂಗಾರಾಜು ಅವರು ದುಬೈನಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುತ್ತವೆ ಮತ್ತೊಂದು ಮೂಲಗಳು. ಅವರು ಮೊಬೈಲ್ ಫೋನಿಗೂ ಸಿಗುತ್ತಿಲ್ಲ, ಅವರ ಮೊಬೈಲ್ ನಾಟ್ ರೀಚಬಲ್! ಷೇರುದಾರರು ಅಥವಾ ನಿಯಂತ್ರಣಾಧಿಕಾರಿಗಳು ಒಂದು ವೇಳೆ ದೂರು ಕೊಟ್ಟರೆ ರಾಮಲಿಂಗಾರಾಜು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೈದಾರಾಬಾದ್ ಪೊಲೀಸರು ಭರವಸೆ ನೀಡಿದ್ದಾರೆ.
ಸತ್ಯಂ ಕಂಪ್ಯೂಟರ್ಸ್ ನ ರು.7000 ಕೋಟಿಗಳ ಅವ್ಯವಹಾರ ಬಯಲಾಗುತ್ತಿದ್ದಂತೆ ಕಂಪನಿಯ ಅಧ್ಯಕ್ಷ ರಾಮಲಿಂಗರಾಜು ನಾಪತ್ತೆಯಾಗಿದ್ದಾರೆ.ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅವರು ಬಂಧನಕ್ಕೆ ಒಳಗಾಗುವ ಮತ್ತು ಏಳು ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಗಳಿತ್ತು. ತಮ್ಮ ಕುಟುಂಬದ ಸಲುವಾಗಿ ಕಂಪನಿಯ ಹಿತಾಸಕ್ತಿಯನ್ನು ಬಲಿ ತೆಗೆದುಕೊಂಡಿದ್ದಾರೆ ಎಂದು ಆಡಳಿತ ಮಂಡಳಿ ಹಾಗೂ ಷೇರುದಾರರು ಸಹ ರಾಮಲಿಂಗರಾಜು ವಿರುದ್ಧ ತಿರುಗಿ ಬಿದ್ದಿದ್ದರು. ವಿಶ್ವಬ್ಯಾಂಕ್ ಕೂಡ ಸತ್ಯಂ ಕಂಪೆನಿ ಮೇಲೆ 10 ವರ್ಷಗಳ ಆರ್ಥಿಕ ನಿರ್ಬಂಧ ಹೇರಿತ್ತು.
ನ್ಯಾಸ್ ಕ್ಯಾಂ ಹಾಗೂ ನಿಫ್ಟಿಯಿಂದ ಕೂಡ ಸತ್ಯಂ ಕಂಪೆನಿಯನ್ನು ಹೊರಹಾಕಲಾಗಿದ್ದು, ನ್ಯೂಯಾರ್ಕ್ ಹಾಗೂ ಟೆಕ್ಸಾಸ್ ನಲ್ಲಿ ರಾಮಲಿಂಗರಾಜು ವಿರುದ್ಧ ಕೇಸ್ ದಾಖಲಿಸಲಾಗಿದೆ
(ಏಜೆನ್ಸೀಸ್)
ಪೂರಕ
ಓದಿಗೆ:
ಸತ್ಯಂ
ಖರೀದಿರುವ
ಆಲೋಚನೆ
ಇಲ್ಲ:
ಇನ್ಫಿ