ಮಧುಗಿರಿ : ಜಯದ ಹಾದಿಯಲ್ಲಿ ಅನಿತಾ ಕುಮಾರಸ್ವಾಮಿ
ಮಧುಗಿರಿ, ಡಿ. 30 : ಆಪರೇಷನ್ ಕಮಲ ಸಕ್ಸಸ್ಫುಲ್ ಬಟ್ ದಿ ಪೇಷಂಟ್ ಈಸ್ ಡೆಡ್.
ಇದು ಮಧುಗಿರಿಯಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಸತ್ಯವಾಗಿದೆಯಾ? ಆಪರೇಷನ್ ಕಮಲದ ಮುಖಾಂತರ ಜೆಡಿಎಸ್ ನಲ್ಲಿದ್ದ ಸಿ. ಚೆನ್ನಿಗಪ್ಪ ಅವರನ್ನು ಸೆಳೆದಿದ್ದ ಡಾ. ಯಡಿಯೂರಪ್ಪ ಅವರ ಆಪರೇಷನ್ ಇಲ್ಲಿ ಕೈಕೊಟ್ಟಿದೆ. ಎಲ್ಲೆಂದರಲ್ಲಿ ಹಣ ಬಿಸಾಡಿದ್ದರಿಂದ ಸೊಂಕು ತಗುಲಿ ಆಪರೇಷನ್ ವಿಫಲವಾಗುವ ಹಂತದಲ್ಲಿದೆ.
ಪ್ರತಿಷ್ಠಿತ ಕಣವಾಗಿದ್ದ ಮಧುಗಿರಿಯಲ್ಲಿ ಕುರುಡು ಕಾಂಚಾಣದ ಮುಂದೆ ಹುಲ್ಲು ಹೊತ್ತ ಮಹಿಳೆ ಪರಾರಿಯಾಗುತ್ತಾಳೆಂದು ಬಿಜೆಪಿ ಬಗೆದಿದ್ದು. ಹಾಗೆಯೇ ಕಂಡೂಕೇಳರಿಯದಂತೆ ಹಣ ಮತ್ತು ಹೆಂಡ ಇಲ್ಲಿ ಹರಿದಿತ್ತು. ಕೆಸರಿನಲ್ಲಿ ಬೆಳೆಯುವ ಕಮಲ ಹೆಂಡದ ಹೊಳೆಯಲ್ಲಿ ಅರಳೀತೆ?
ಮನೆಮನೆಗೆ ಬಂದು ಮತಯಾಚಿಸಿದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಅರಿಷಿಣ ಕುಂಕುಮ, ರವಿಕೆ ನೀಡಿದ ಮಹಿಳೆಯರು ಈಗ ಉಡಿ ತುಂಬಿದ್ದಾರೆ. ದೇವೆಗೌಡರ ಕುಟುಂಬದ ಮುಖಾಂತರ ಕಣಕ್ಕಿಳಿದಿದ್ದ ಪ್ರಥಮ ಮಹಿಳೆ ಜಯದ ಹಾದಿಯಲ್ಲಿದ್ದಾರೆ.. ಒಂದು ಅಂದಾಜಿನ ಪ್ರಕಾರ ಅನಿತಾ ಕುಮಾರಸ್ವಾಮಿಗೆ 25 ಸಾವಿರಕ್ಕೂ ಹೆಚ್ಚಿನ ರವಿಕೆ ಉಡುಗೊರೆಯಾಗಿ ಬಂದಿತ್ತೆಂದರೆ ಮಹಿಳೆಯರು ಅನಿತಾ ಮೇಲೆ ಇಟ್ಟ ಭರವಸೆಯನ್ನು ಹುಸಿಗೊಳಿಸಿಲ್ಲ.
ಆರಂಭದ ಮತಎಣಿಕೆಯಲ್ಲಿ ಕಾಂಗ್ರೆಸ್ ನ ರಾಜಣ್ಣ ಮುಂದಿದ್ದರೂ ನಂತರದಲ್ಲಿ ಅವರ ಎಣಿಕೆ ತಿರುವುಮುರುವಾಗಿದೆ. ಹದಿಮೂರನೇ ಸುತ್ತಿನ ಮತ ಎಣಿಕೆಯ ನಂತರ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅನಿತಾ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದರು.
ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರರಲ್ಲಿ ಮತಎಣಿಕೆ ಮುಕ್ತಾಯವಾಗಿದ್ದು, ಮಧುಗಿರಿ ಮತ್ತು ತುರುವೇಕೆರೆ ಫಲಿತಾಂಶ ಮಾತ್ರ ಬಾಕಿಯಿದೆ. ಅರಭಾವಿ(ಬಾಲಚಂದ್ರ ಜಾರಕಿಹೊಳಿ), ಹುಕ್ಕೇರಿ(ಉಮೇಶ್ ಕತ್ತಿ), ಕಾರವಾರ(ಆನಂದ್ ಆಸ್ನೋಟಿಕರ್), ದೇವದುರ್ಗ(ಶಿವನಗೌಡ) ಮತ್ತು ದೊಡ್ಡಬಳ್ಳಾಪುರ(ಜೆ ನರಸಿಂಹಸ್ವಾಮಿ)ದಲ್ಲಿ ಬಿಜೆಪಿ ನಿಚ್ಚಳ ಗೆಲುವು ಸಾಧಿಸಿದೆ. ಮದ್ದೂರಿನಲ್ಲಿ ಜೆಡಿಎಸ್ ನ ಕಲ್ಪನಾ ಸಿದ್ದರಾಜು ಜಯಭೇರಿ ಬಾರಿಸಿದ್ದಾರೆ. ಮಧುಗಿರಿ ಮತ್ತು ತುರುವೇಕೆರೆ ಕ್ಷೇತ್ರಗಳಲ್ಲಿ ಎಣಿಕೆ ಜಾರಿಯಲ್ಲಿದೆ.
(ದಟ್ಸ್ ಕನ್ನಡ ವಾರ್ತೆ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications