ಚುನಾವಣೆಯಲ್ಲಿ ದೊಡ್ಡ ರೋಗವನ್ನು ಹೊಡೆದೋಡಿಸೋಣ: ಪ್ರಕಾಶ್ ರೈ
ಶಿರಸಿ, ಜನವರಿ 13 : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತುಂಬಾ ಅಪಾಯಕಾರಿ ಆದಂಥ ದೊಡ್ಡ ರೋಗವನ್ನು ಹೊಡೆದೋಡಿಸೋಣ. ಆ ನಂತರ ಉಳಿಯುವ ಕೆಮ್ಮು, ನೆಗಡಿ ಅಂಥದ್ದನ್ನು ನಿವಾರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡೋಣ ಎಂದು ಬಹು ಭಾಷಾ ನಟ, ನಿರ್ಮಾಪಕ ಹಾಗೂ ಅಂಕಣಕಾರರಾದ ಪ್ರಕಾಶ್ ರೈ ಇಲ್ಲಿ ಹೇಳಿದ್ದಾರೆ.
ಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನ
ಆ ನಂತರ ಮುಂದುವರಿದು, ಯಾವ ರಾಜಕೀಯ ನಾಯಕರೂ ಸರಿಯಿಲ್ಲ. ಇನ್ನು ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರನಲ್ಲ. ನಾನೊಬ್ಬ ಸಾಮಾನ್ಯ ಪ್ರಜೆ. ನನಗೆ ಸಿಕ್ಕ ಪ್ರೀತಿ, ಆದರ, ಗೌರವ- ಮನ್ನಣೆಗಳು ಈ ಸಮಾಜದಿಂದ ಹಾಗೂ ಜನರಿಂದ. ಅದನ್ನು ಸಮುದಾಯಕ್ಕೆ, ಸಮಾಜಕ್ಕೆ ವಾಪಸ್ ಕೊಡುವ ಉದ್ದೇಶದಿಂದ ಬಂದಿದ್ದೇನೆ ಎಂದಿದ್ದಾರೆ.
ವಿವೇಚನೆ, ವಿಚಾರದ ಕುರಿತಾಗಿ ಇರುವ ಕಾರ್ಯಕ್ರಮಗಳು ಎಲ್ಲೇ ಇದ್ದರೂ ನನ್ನನ್ನು ಆ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಬಂದೇ ಬರುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಬಿಜೆಪಿಯವರು ಕೋಮುವಾದ ರಾಜಕಾರಣ ಮಾಡುತ್ತಿದ್ದಾರೆ. ಅದರ ನಾಯಕರು-ಮುಖಂಡರು ಜನರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಆರೋಪಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.