ರಾಮದಾಸ್ ಇಂದ ಜಿಲ್ಲೆಯ ಅಭಿವೃದ್ಧಿ ಶೂನ್ಯ; ಸೋಮಶೇಖರ್ ಆರೋಪ
ಮೈಸೂರು, ಮೇ 12: ಶಾಸಕ ರಾಮದಾಸ್ ಅವರಿಂದ ಜಿಲ್ಲೆಯ ಅಭಿವೃದ್ಧಿ ಶೂನ್ಯ. ರಾಮದಾಸ್ ಅವರು ಮೈಸೂರಿಗೆ ಒಂದೇ ಒಂದು ಯೋಜನೆಯನ್ನೂ ಈವರೆಗೆ ತಂದಿಲ್ಲ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆರೋಪಿಸಿದ್ದಾರೆ.
ಇಂದು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಮದಾಸ್ ಅವರು ಕೆಲಸ ಮಾಡಿದ್ದಾರೆ ಅನ್ನೋದಾದರೆ ಅವರ ಕೆಲಸದ ಬಗ್ಗೆ ಮುಕ್ತ ಚರ್ಚೆಗೆ ಬರಲಿ. ನಾನು ನನ್ನ ಕೆಲಸ ಬಗ್ಗೆ ಮುಕ್ತ ಚರ್ಚೆಗೆ ಬರುತ್ತೇನೆ. ಅವರು ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿಗೂ ಸಹಕಾರ ನೀಡಿಲ್ಲ. ಯಾವುದನ್ನೂ ಗೊತ್ತಿಲ್ಲ ಅಂತಾರೆ. ಇವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಮಾಡಿದ್ದು ಏನೂ ಇಲ್ಲ" ಎಂದು ಆರೋಪಿಸಿದರು. ಇವರು ಸಾರ್ವಜನಿಕ ಜೀವನದಲ್ಲಿ ಇದ್ದು, ಸೇವೆ ಮಾಡುವ ಅವಕಾಶ ಇದ್ದರೂ ಏನೂ ಮಾಡದೆ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ದಿನಗಳಿಂದ ಮೈಸೂರು ನಗರದಲ್ಲಿ ದೊಡ್ಡ ನಾಟಕ ನಡೆಯುತ್ತಿದೆ. ರಾಮದಾಸ್ ಯಾವತ್ತೂ ಅಭಿವೃದ್ಧಿ ಕೆಲಸದ ಪರ ಇದ್ದವರಲ್ಲ. ಚುನಾವಣೆ ಸಂದರ್ಭದಲ್ಲಿ ಇವರು ಹಿಂದೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಸುಯೇಜ್ ಫಾರಂ ಮುಂದೆ ನಾಟಕ ಮಾಡಿದ್ದರು. ಈಗ ಅವರು ಗೆದ್ದು ಎರಡು ವರ್ಷ ಆಗಿದೆ. ಅಷ್ಟು ದಿನಗಳಿಂದ ಏನ್ ಮಾಡ್ತಿದ್ರು, ಅವರು ಈಗ ಎಲ್ಲವನ್ನು ಮರೆತಿದ್ದಾರೆ.

ರಾಮದಾಸ್ ಸುದೀರ್ಘ ನಿದ್ರೆಯಲ್ಲಿದ್ದು, ಈಗ ಎದ್ದು ಬಂದು ಸಭೆ ಸಮಾರಂಭ ಅಂತಿದ್ದಾರೆ. ಶಾಸಕನಾಗಲು ಇವರು ಅರ್ಹರಲ್ಲ. ನಗರಪಾಲಿಕೆಯಿಂದ ನನಗೆ ಯಾವುದೇ ಪತ್ರ ಬಂದಿಲ್ಲ ಅಂತಾರೆ. ಒಬ್ಬ ಶಾಸಕನಾಗಿ ತಮ್ಮ ಕ್ಷೇತ್ರದ ಸಭೆಗೆ ಪತ್ರ ಬಂದಿಲ್ಲ ಅಂತಾರೆ. ಇದು ನಂಬುವ ಮಾತಾ? ಎಂದು ವಾಗ್ದಾಳಿ ನಡೆಸಿದರು. ರಾಮದಾಸ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಅವರು ಒತ್ತಾಯಿಸಿದರು.
-
Silver Price: ಬೆಳ್ಳಿ ದರದಲ್ಲಿ ಮಹಾಕುಸಿತ! ಬರೋಬ್ಬರಿ 60,000 ಇಳಿಕೆ, ಇಂದಿನ ಬೆಳ್ಳಿ ದರ ಅಪ್ಡೇಟ್ -
Karnataka Weather: ಮುಂದಿನ 7 ದಿನ ವ್ಯಾಪಕ ಬಿಸಿಲು ಮುನ್ಸೂಚನೆ, ಕನಿಷ್ಠ ತಾಪಮಾನಲ್ಲಿ 3-5 ಡಿಸೆ ಇಳಿಕೆ -
Gold: ದಾಖಲೆ ಮಟ್ಟಕ್ಕೆ ಏರಿದ ಬೆಲೆ; ಈ ವರ್ಷ ಚಿನ್ನದ ಬೇಡಿಕೆ ಕುಸಿಯುವ ಸಾಧ್ಯತೆ -
ಜನವರಿ 31 ರ ದಿನ ಭವಿಷ್ಯ; ಈ ರಾಶಿಗೆ ಲಕ್ಷ್ಮಿಯ ಆಶೀರ್ವಾದದಿಂದ ಧನಲಾಭ -
Union Budget 2026: 75 ವರ್ಷಗಳ ಬಜೆಟ್ ಪರಂಪರೆಗೆ ಬ್ರೇಕ್: ಹೊಸ ಹೆಜ್ಜೆ ಇಡಲಿದ್ದಾರೆ ನಿರ್ಮಲಾ ಸೀತಾರಾಮನ್ -
Bengaluru: "ದಿನಕ್ಕೆ 16 ಗಂಟೆ ದುಡಿದ್ರೂ ಕೈಗೆ ಸಿಗೋದು 1 ಸಾವಿರ", ಕ್ಯಾಬ್ ಚಾಲಕನ ಪೋಸ್ಟ್ ವೈರಲ್ -
CJ Roy: ಸಿಜೆ ರಾಯ್ ಸಾವಿಗೆ ಕುರಿಗಾಯಿ ಹನುಮಂತ ಲಮಾಣಿ ಸಂತಾಪ, ಉದ್ಯಮಿ ಸಹಾಯ ನೆನೆದು ಕಣ್ಣೀರು -
Sabarimala Gold Case: ಶಬರಿಮಲೆ ಚಿನ್ನ ಕಳವು ಪ್ರಕರಣ: ಕಾಂತಾರ: ಚಾಪ್ಟರ್ 1 ನಟ ಜಯರಾಮ್ ವಿಚಾರಣೆ -
Global Massive Lay Offs: ವಿಶ್ವದಾದ್ಯಂತ ಪ್ರತಿಷ್ಠಿತ 23 ಐಟಿ ಕಂಪನಿಗಳಿಂದ ಲಕ್ಷಾಂತರ ಉದ್ಯೋಗ ವಜಾ ಘೋಷಣೆ! ಪಟ್ಟಿ ಇಲ್ಲಿದೆ -
Gold Rate Today: ಬಂಗಾರದ ದರದಲ್ಲಿ ದಾಖಲೆಯ 33,000 ರೂಪಾಯಿ ಇಳಿಕೆ: ಯಾವ ನಗರದಲ್ಲಿ ಬೆಲೆ ಎಷ್ಟಿದೆ ತಿಳಿಯಿರಿ -
"ಬಾಸ್ ಇದು ಆಫೀಸಾ ಅಥವಾ ರೆಸ್ಟೋರೆಂಟಾ?": ಗೂಗಲ್ ಆಫೀಸ್ ಊಟ ನೋಡಿ ದಂಗಾದ ಮೆಟಾ ಉದ್ಯೋಗಿ Video Viral -
IAS Transfer: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ, ಸಿಎಂ ಸಭೆಗೆ ಗೈರಾಗಿದ್ದು ಮುಳುವಾಯಿತೇ?












Click it and Unblock the Notifications