Bengaluru: "ದಿನಕ್ಕೆ 16 ಗಂಟೆ ದುಡಿದ್ರೂ ಕೈಗೆ ಸಿಗೋದು 1 ಸಾವಿರ", ಕ್ಯಾಬ್ ಚಾಲಕನ ಪೋಸ್ಟ್ ವೈರಲ್
ಬೆಂಗಳೂರು: "ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಆ್ಯಪ್ ಹಿಂದೆ ದುಡಿಯುವ ನಮ್ಮಂತಹವರ ಬದುಕು ನಾಯಿಪಾಡಾಗಿದೆ..." - ಇದು ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಸಾಮಾಜಿಕ ಜಾಲತಾಣ 'ರೆಡ್ಡಿಟ್'ನಲ್ಲಿ ತೋಡಿಕೊಂಡಿರುವ ಅಳಲು. ಸುಮಾರು ಒಂದೂವರೆ ವರ್ಷ ನಿರುದ್ಯೋಗಿಯಾಗಿದ್ದ ಪದವೀಧರರೊಬ್ಬರು, ಅನಿವಾರ್ಯವಾಗಿ ಕ್ಯಾಬ್ ಏರಿ, ದಿನಕ್ಕೆ 16 ಗಂಟೆ ದುಡಿದರೂ ಹೇಗೆ ಸಾಲದ ಸುಳಿಯಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
"ದಿ ರ್ರ್ಯಾಂಟ್ ಆಫ್ ಎ ರಿವರ್" (The rant of a river) ಎಂಬ ಶೀರ್ಷಿಕೆಯಡಿ ಅವರು ಬರೆದಿರುವ ಪೋಸ್ಟ್ ಈಗ ವೈರಲ್ ಆಗಿದೆ. ವ್ಯಾಪಾರದಲ್ಲಿ ಕೈಸುಟ್ಟುಕೊಂಡು, ಸಾಲದ ಹೊರೆ ಹೊತ್ತಿರುವ ಇವರು, ಜೀವನ ನಿರ್ವಹಣೆಗಾಗಿ ಬಾಡಿಗೆ ಕಾರನ್ನು ಪಡೆದು ಊಬರ್ ಮತ್ತು ರ್ಯಾಪಿಡೋಗಳಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಲೆಕ್ಕಾಚಾರದ ವ್ಯಥೆ:
ಅವರು ನೀಡಿದ ಮಾಹಿತಿಯ ಪ್ರಕಾರ, ದಿನಕ್ಕೆ ಸುಮಾರು 4,000 ರೂ.ಗಳಷ್ಟು ವಹಿವಾಟು ನಡೆಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ:
1. ಕಾರಿನ ಬಾಡಿಗೆ: 1,500 ರೂ.
2. ಸಿಎನ್ಜಿ : 1,200 ರೂ.
3. ಊಟ ಮತ್ತು ತಿಂಡಿ: 200 ರೂ.
ಎಲ್ಲಾ ಖರ್ಚು ಕಳೆದು, 16 ಗಂಟೆಗಳ ಟ್ರಾಫಿಕ್ ಜಂಜಾಟದ ನಂತರ ಅವರ ಕೈಗೆ ಸಿಗುವುದು ಕೇವಲ 1,000 ರೂ. (ಅಂದಾಜು) ಮಾತ್ರ. "ಈ ದುಡಿಮೆಯಲ್ಲಿ ಉಳಿತಾಯ ಮಾಡುವುದು ಅಸಾಧ್ಯ, ಕೇವಲ ಬದುಕನ್ನು ದೂಡುತ್ತಿದ್ದೇವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲ, ಆಪ್ ಆಧಾರಿತ ಕೆಲಸದ ಒತ್ತಡವನ್ನೂ ಅವರು ವಿವರಿಸಿದ್ದಾರೆ. "ಬುಕ್ಕಿಂಗ್ ಬಂದ 5-6 ಸೆಕೆಂಡುಗಳಲ್ಲಿ ಸ್ವೀಕರಿಸದಿದ್ದರೆ ಬೇರೆಯವರು ಅದನ್ನು ಪಡೆದುಕೊಳ್ಳುತ್ತಾರೆ. ಇದರಿಂದ ನಮ್ಮ ರೇಟಿಂಗ್ ಕಡಿಮೆಯಾಗುತ್ತದೆ. ದಿನಕ್ಕೆ ಕೇವಲ 6 ಗಂಟೆ ನಿದ್ದೆ ಮಾಡುತ್ತೇನೆ. ಕಾಲು ನೋವು, ಮಂಡಿ ನೋವು ನಿತ್ಯದ ಸಂಗತಿಯಾಗಿದೆ," ಎಂದು ಅವರು ಹೇಳಿಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ:
ಚಾಲಕನ ಈ ಪೋಸ್ಟ್ ಓದಿದ ಅನೇಕರು ಮರುಗಿದ್ದಾರೆ. "ಕ್ಯಾಬ್ ಮತ್ತು ಆಟೋ ಚಾಲಕರು ಯಾಕೆ ಸದಾ ಸಿಟ್ಟಿನಿಂದ ಇರುತ್ತಾರೆ, ಟ್ರಾಫಿಕ್ ನಿಯಮ ಮುರಿಯುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ. ಅವರ ಈ ಕಷ್ಟದ ಮುಂದೆ ನಮ್ಮ ಸಮಸ್ಯೆಗಳು ಗೌಣ," ಎಂದು ಹಲವರು ಕಮೆಂಟ್ ಮಾಡಿದ್ದಾರೆ. "ಶೋಷಕನಾಗು ಅಥವಾ ಶೋಷಿತನಾಗು, ಇದೇ ಇಂದಿನ ಸತ್ಯ," ಎಂಬ ಚಾಲಕನ ಮಾತು ಐಟಿ ಸಿಟಿಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.
-
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications