ನಿಧಿಗಾಗಿ ದೇವರ ಗುಡಿಯನ್ನೇ ನಾಶ ಮಾಡಿದ ದುಷ್ಕರ್ಮಿಗಳು
ಮಡಿಕೇರಿ, ಫೆಬ್ರವರಿ 22 : ದುಷ್ಕರ್ಮಿಗಳ ನಿಧಿ ಆಸೆಗೆ ಪುರಾತನ ದೇವರ ಗುಡಿಯೊಂದನ್ನು ಅಗೆದು ನಾಶ ಮಾಡಿ ನಿಧಿ ಸಿಗದೆ ಖಾಲಿ ಕೈನಲ್ಲಿ ಪರಾರಿಯಾಗಿರುವ ಘಟನೆಯೊಂದು ತಾಲೂಕಿನ ಮೂರ್ನಾಡು ಬಳಿ ಬೆಳಕಿಗೆ ಬಂದಿದೆ.
ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ಉಪ್ಪುಗುಂಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪುರಾತನ ಕಾಲದ್ದು ಎನ್ನಲಾದ ಲವಣೇಶ್ವರ ದೇವರ ಗುಡಿ ಸಂಪೂರ್ಣ ನಾಶವಾಗಿದ್ದು, ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕಾಡಿನೊಳಗೆ ಇರುವ ದೇವರ ಗುಂಡಿಯ ಲಿಂಗಗಳ ಕೆಳಗೆ ನಿಧಿಯಿರುತ್ತದೆ ಎಂಬ ಮಾತುಗಳನ್ನು ವಯಸ್ಸಾದವರು ಹೇಳುತ್ತಿರುತ್ತಾರೆ. ಬಹುಶಃ ಇದನ್ನೇ ನಂಬಿದ ಯಾರೋ ದುಷ್ಕರ್ಮಿಗಳು ಈ ಕೃತ್ಯಕ್ಕೆ ಕೈಹಾಕಿರಬಹುದೆಂದು ಶಂಕಿಸಲಾಗಿದೆ.

ಇದೀಗ ನಾಶವಾಗಿರುವ ಗುಡಿ ಸಾರ್ವಜನಿಕರಿಂದ ದೂರವಾಗಿ ಕಾವೇರಿ ನದಿ ತಟದ ಕಾಡಿನಲ್ಲಿತ್ತು. ಸ್ಕಂದ ಪುರಾಣದ ಮಾಹಿತಿ ಪ್ರಕಾರ ಕಾವೇರಿ ನದಿ ಉಗಮಿಸುವುದಕ್ಕಿಂತ ಮೊದಲೇ ಈ ದೇವರ ಗುಡಿ ಇತ್ತು ಎನ್ನಲಾಗುತ್ತಿದೆ. ಈ ಗುಡಿಗೆ ಕಾವೇರಿ ಪ್ರದಕ್ಷಿಣೆ ಹಾಕಿದ್ದಳು ಎಂಬ ದಂತಕಥೆಯೂ ಇದೆ.
ಈ ಗುಡಿಯನ್ನು ಶಿವರಾತ್ರಿ ಅಂಗವಾಗಿ ಸಂಘಟನೆಯೊಂದರ ಕಾರ್ಯಕರ್ತರು ಸ್ಪಚ್ಛಗೊಳಿಸಿ ಪೂಜೆ ಸಲ್ಲಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅದನ್ನು ಪ್ರಚಾರ ಮಾಡಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಬಹುಶಃ ಇಲ್ಲಿನ ಒಡಲನ್ನು ಬಗೆದರೆ ನಿಧಿ ಸಿಕ್ಕರೂ ಸಿಗಬಹುದೆಂಬ ಆಸೆಯಿಂದ ಶಿವಲಿಂಗವನ್ನು ಕಿತ್ತು ಹಾಕಿ ನೆಲವನ್ನು ಅಗೆದು ನೋಡಿದ್ದಾರೆ.
ಆದರೆ ಅವರಿಗೆ ಅಲ್ಲಿ ಯಾವುದೇ ರೀತಿಯ ನಿಧಿ ಸಿಕ್ಕಿರುವ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಅವರು ಖಾಲಿ ಕೈನಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗಿದ್ದಾರೆ. ಆದರೆ ಪುರಾತನ ಗುಡಿಯೊಂದು ದುಷ್ಕರ್ಮಿಗಳ ನಿಧಿ ಆಸೆಗೆ ನಾಶವಾಗಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿಯಾಗಿದೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications