Get Updates
Get notified of breaking news, exclusive insights, and must-see stories!

ಚಿತ್ತೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರ ಸಾವು

ಕೋಲಾರ, ಮೇ 31: ಸಿಡಿಲು ಬಡಿದು ಒಂದೇ ಕುಟುಂಬದ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಸಮೀಪದ ಚಿತ್ತೂರಿನಲ್ಲಿ ನಡೆದಿದೆ.

ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರಿನ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ನಿನ್ನೆ, ಮೇ 30ರ ರಾತ್ರಿ ಈ ಘಟನೆ ನಡೆದಿದ್ದು, ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

Three Members Of Same Family Died By Lightning Strike In Kolar Border

ತಂದೆ ಮಕ್ಕಳು ತೋಟಕ್ಕೆ ಹೋಗಿದ್ದು, ಹಸುವಿನ ಹಾಲು ಕರೆಯುತ್ತಿದ್ದರು. ಈ ಸಂದರ್ಭ ಮಳೆ ಆರಂಭವಾದಂತಾಗಿ ಜೋರಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದು ರೈತ ರಾಮಕೃಷ್ಣ (52), ಮಕ್ಕಳಾದ ರಮಾದೇವಿ (24), ಮೀನಾ (22) ಸಾವನ್ನಪ್ಪಿದ್ದಾರೆ. ಹಸುವೂ ಮೃತಪಟ್ಟಿದೆ. ಸಿಡಿಲಾಘಾತದಿಂದ ಸಂಭವಿಸಿದ ಈ ಸಾವಿನಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+