Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ
Gold Silver Price Today: ಜನರು ಯುಗಾದಿ ಹಬ್ಬದ (Ugadi 2026) ಸಂಭ್ರಮದಲ್ಲಿದ್ದಾರೆ. ಹೊಸ ವರ್ಷದ ಈ ಹಬ್ಬದ ವೇಳೆ ಚಿನ್ನ ಬೆಳ್ಳಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಸತತ ಎರಡನೇ ದಿನವೂ ಚಿನ್ನದ ಹಾಗೂ ಬೆಳ್ಳಿಯ ದರದಲ್ಲಿ ಭರ್ಜರಿ ಕುಸಿತವಾಗಿದೆ. ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿರುವ ಈ ಎರಡು ಲೋಹಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇಂದು ಮಾರ್ಚ್ 19ರಂದು ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ನಗರಗಳಲ್ಲಿ ದರ ಎಷ್ಟಿದೆ, ಇಳಿಕೆ ಆಗಿದ್ದೆಷ್ಟು ಎಂಬ ವಿವರ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧಗಳು, ಡಾಲರ್ ಮೌಲ್ಯ ಇಳಿಕೆ ಹಾಗೂ ಇನ್ನಿತರ ಜಾಗತಿಕ ಕಾರಣಗಳಿಂದಾಗಿ ಚಿನ್ನ ಬೆಳ್ಳಿ ದರ ಏರಿಕೆ ಆಗಲಿದೆ ಎನ್ನಲಾಗಿತ್ತು. ಆದರೆ ವಿರುದ್ಧವೆಂಬಂತೆ ನಿರಂತರ ಇಳಿಕೆ ಆಗುತ್ತಿವೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 2,780 ರೂಪಾಯಿ ಇಳಿಕೆ ಆಗುವ ಮೂಲಕ ದರ 1,54,640 ರೂಪಾಯಿ ಮುಟ್ಟಿದೆ. ಇದೇ ರೀತಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು 2550 ರೂಪಾಯಿ ಇಳಿಕೆ ಆಗಿ 1,41,750 ರೂಪಾಯಿ ತಲುಪಿದೆ.

ವಾರದಲ್ಲಿ ಒಮ್ಮೆ ಮಾತ್ರ ದರ ಏರಿಕೆ
ಸತತ ಎರಡನೇ ದಿನವು ಇಳಿಕೆಯಾದ ಚಿನ್ನದ ಬೆಲೆ ನೆನ್ನೆ 24 ಕ್ಯಾರಟ್ಗೆ 660 ರೂಪಾಯಿ ಹಾಗೂ 22 ಕ್ಯಾರಟ್ಗೆ 600 ರೂಪಾಯಿಗೆ ಕುಸಿದಿದೆ. ಕಳೆದ ಒಂದು ವಾರದಲ್ಲಿ ಮಾರ್ಚ್ 17ರಂದು ಕೊಂಚ ಏರಿಕೆ ಆಗಿದ್ದ ಚಿನ್ನವು ದಿನೇ ದಿನೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ, ಖರೀದಿ ಹೆಚ್ಚಾಗುವ ನಿರೀಕ್ಷೆ ಇದೆ.
ಬೆಳ್ಳಿ ಬೆಲೆ 15,000 ರೂ. ಇಳಿಕೆ
ಇನ್ನೂ ಬೆಳ್ಳಿಯು ಸಹಿತ ಮಾರ್ಚ್ 17ರಂದು ಬಿಟ್ಟರೆ ಬೇರೆಲ್ಲ ದಿನ ನಿರಂತರವಾಗಿ ಇಳಿಕೆ ಕಂಡಿದೆ. ಇಂದು 1 ಕೆಜಿ ಬೆಳ್ಳಿ ದರ 5,000 ರೂಪಾಯಿ ಕುಸಿದಿದ್ದು 2,60,000 ರೂಪಾಯಿಗೆ ಮುಟ್ಟಿದೆ. ನೆನ್ನೆ ಇದೇ ಬೆಳ್ಳಿ ಬೆಲೆಯು 10,000 ಇಳಿಕೆ ಆಗಿತ್ತು. ಎರಡೇ ದಿನಕ್ಕೆ 15,000 ರೂ. ಇಳಿಕೆ ಆಗಿದ್ದು, ಒಂದು ವಾರದಿಂದ ಗಣನೀಯವಾಗಿ ಕುಸಿಯುತ್ತಿದೆ. ಇದು ಖರೀದಿದಾರರ ಹರ್ಷ ನೀಡಿದರೆ, ಲಾಭದ ಆಸೆಯಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರನ್ನು ಚಿಂತೆಗೆ ನೂಕಿದೆ.
ನಗರವಾರು 22k 10 ಗ್ರಾಂ ಚಿನ್ನದ ಮಾಹಿತಿ ಇಲ್ಲಿದೆ
ಬೆಂಗಳೂರು: 1,47,200 ರೂಪಾಯಿ
ಹೈದರಾಬಾದ್: 1,47,200 ರೂಪಾಯಿ
ಚೆನ್ನೈ: 1,49,000 ರೂಪಾಯಿ
ದೆಹಲಿ: 1,47,350 ರೂಪಾಯಿ
ಪಾಟ್ನಾ: 1,47,250 ರೂಪಾಯಿ
ಜೈಪುರ : 1,47,350 ರೂಪಾಯಿ
ಮುಂಬೈ: 1,47,200 ರೂಪಾಯಿ
ಕೋಲ್ಕತ್ತಾ: 1,47,200 ರೂಪಾಯಿ
ಅಹಮದಾಬಾದ್: 1,47,250 ರೂಪಾಯಿ
ಪುಣೆ: 1,47,200 ರೂಪಾಯಿ
-
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Gold Price Update: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications