ಕಲಾಪಗಳಿಗೆ ಸತತ ಗೈರಾಗುವ ಬಿಜೆಪಿ ಸಂಸದರಿಗೆ ಕಾದಿದೆ ಶಿಕ್ಷೆ!
ಸಂಸತ್ ಕಲಾಪಗಳಿಗೆ ಸತತವಾಗಿ ಗೈರಾಗುವ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ ಮೋದಿ. ಸತತ ಗೈರಾಗುವ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಕೆ.
ನವದೆಹಲಿ, ಆಗಸ್ಟ್ 11: ಸಂಸತ್ತಿನ ಕಲಾಪಗಳಿಗೆ ಸತತವಾಗಿ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಅಸಹಿಷ್ಣುತೆ ವಿವಾದ: ಅನ್ಸಾರಿಗೆ ಮಾತಿನಲ್ಲೇ ಚಾಟಿ ಬೀಸಿದ ಮೋದಿ
ರಾಜ್ಯಸಭೆಯಲ್ಲಿ ಗುರುವಾರ ಈ ವಿಚಾರ ಪ್ರಸ್ತಾಪಿಸಿದ ಮೋದಿ, ''ನಿಮ್ಮ (ಬಿಜೆಪಿ ಸಂಸದರು) ಇಚ್ಛೆಯಂತೆ ನಡೆಯುತ್ತಿದ್ದೀರಿ. ಪರವಾಗಿಲ್ಲ ಹಾಗೇ ನಡೆದುಕೊಳ್ಳಿ. ಆದರೆ, ನಾನು ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ'' ಎಂದಿದ್ದಾರೆ.
''ನಾನು ಈಗ ಮಾತನಾಡುವುದಿಲ್ಲ. 2019ರ ಮಹಾ ಚುನಾವಣೆ ವೇಳೆ ಮಾತನಾಡುತ್ತೇನೆ'' ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ರಾಜ್ಯ ಸಭೆ ಮಾತ್ರವಲ್ಲ, ಲೋಕಸಭೆಯಲ್ಲಿರುವ ಬಿಜೆಪಿ ಸಂಸದರಿಗೂ ಅನ್ವಯಿಸಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಬದಲು? ಮುರಳೀಧರ ರಾವ್ ಗೆ ಕೊಕ್?
ಪ್ರಧಾನಿಯವರ ಈ ಹೇಳಿಕೆಯು ಈಗಾಗಲೇ ಬಿಜೆಪಿ ಸಂಸದರಲ್ಲಿ ಆತಂಕ ಸೃಷ್ಟಿಸಿದ್ದು, ಸತತ ಗೈರು ಹಾಜರಾದವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.