ಕೇದಾರನಾಥ ನೋಡಲು ಇಂದಿನಿಂದ ಅವಕಾಶ: ದೇವಾಲಯ ಹೇಗೆ ತಲುಪಬೇಕು ತಿಳಿಯಿರಿ
ಕೇದರನಾಥ ಮೇ 6: ಆರು ತಿಂಗಳ ಚಳಿಗಾಲದ ಅವಧಿಯ ನಂತರ ಇಂದು ಬೆಳಗ್ಗೆ ಐದು ಗಂಟೆಗೆ ವಿಶ್ವಪ್ರಸಿದ್ಧ ಕೇದಾರನಾಥದ ಬಾಗಿಲು ತೆರೆಯಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಧಾಮದ ಬಾಗಿಲುಗಳು ಮೇ 6ರಿಂದ ತೆರೆಯಲಿವೆ.
ಚಾರ್ ಧಾಮ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬದ್ರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದ್ವಾರಗಳನ್ನು ಆರು ತಿಂಗಳ ಚಳಿಗಾಲದ ನಂತರ ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಭಕ್ತರಿಗೆ ಪ್ರವೇಶ ಪಡೆಯಲು ಅವಕಾಶವನ್ನು ನೀಡಲಾಗುತ್ತದೆ.
ಮಂದಾಕಿನಿ ನದಿಯ ದಡದಲ್ಲಿ ನೆಲೆಗೊಂಡಿರುವ ಈ ಧಾಮ್ನಲ್ಲಿ ಶಿವನ ಒಂದು ದೊಡ್ಡ ದೇವಾಲಯವಿದೆ. ಇದನ್ನು ಕಲ್ಲಿನಲ್ಲಿ ಬಂಡೆಗಳ ಮೂಲಕ ತಯಾರಿಸಲಾಗಿದೆ. ಈ ಜ್ಯೋತಿರ್ಲಿಂಗವು ಭಿನ್ನ ಹಾಗೂ ವಿಶೇಷವಾಹಿದೆ. ಏಕೆಂದರೆ ಅದು ತ್ರಿಕೋನ ಆಕಾರದಲ್ಲಿದೆ. ಕೇದಾರನಾಥನು ಶಿವನ ಮುಖ್ಯ ದ್ವಾದಶ ಜ್ಯೋತಿರ್ಲಿಂಗದ 11 ನೇ ಜ್ಯೋತಿರ್ಲಿಂಗ. ಇಲ್ಲಿ ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ವಿಗ್ರಹವು ಎತ್ತಿನ ಬೆನ್ನಿನಂತೆ ಉಬ್ಬಿಕೊಂಡ ತ್ರಿಕೋನ ರೂಪದಲ್ಲಿರುತ್ತದೆ. ದೇವಾಲಯದ ಬಾಗಿಲುಗಳನ್ನು ಮುಚ್ಚುವಾಗ ದೀಪವನ್ನು ಹೊತ್ತಿಸಲಾಗುತ್ತದೆ ಮತ್ತು ನಂತರ 6 ತಿಂಗಳ ನಂತರ ದೇವಾಲಯದ ಬಾಗಿಲು ತೆರೆದಾಗ ದೀಪವು ಉರಿಯುತ್ತಿರುವುದು ಕಂಡುಬರುತ್ತದೆ. ಈ 6 ತಿಂಗಳಲ್ಲಿ ದೇವತೆಗಳು ಕೇದಾರಧಾಮದಲ್ಲಿ ಶಿವನನ್ನು ಪೂಜಿಸುತ್ತಾರೆ ಮತ್ತು ಈ ದೀಪವನ್ನು ಬೆಳಗಿಸುತ್ತಾರೆ ಎಂದು ನಂಬಲಾಗಿದೆ. ಬಾಗಿಲನ್ನು ತೆರೆದ ನಂತರ ಈ ಬೆಳಗಿದ ದೀಪವನ್ನು ಭೇಟಿ ಮಾಡುವುದು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

ಇಷ್ಟಾರ್ಥಗಳನ್ನು ಈಡೇರಿಸುವ ಶಿವ
ಈ ದೇವಾಲಯದಲ್ಲಿ ಸಾಕಷ್ಟು ನಂಬಿಕೆ ಇದೆ. ಯಾರು ಇಲ್ಲಿಗೆ ಹೋದರೂ, ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನಲಾಗುತ್ತದೆ. ಈ ದೇವಾಲಯವನ್ನು 6 ಅಡಿ ಎತ್ತರದ ವೇದಿಕೆಯಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಮುಖ್ಯ ಭಾಗದಲ್ಲಿ ಮಂಟಪ ಮತ್ತು ಗರ್ಭಗೃಹವಿದೆ. ಇಲ್ಲಿ ನಂದಿ ಅಂಗಳದಲ್ಲಿ ಕುಳಿತಿದ್ದಾನೆ. ಈ ದೇವಾಲಯವನ್ನು ಯಾರು ನಿರ್ಮಿಸಿದರು ಬಗ್ಗೆ ಯಾವುದೇ ಅಧಿಕೃತ ಉಲ್ಲೇಖವಿಲ್ಲ. ಆದರೆ ಇದನ್ನು ಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎಂದು ಕೆಲವರು ನಂಬುತ್ತಾರೆ.

ಪಾಂಡವರ ಕಥೆ
ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಾಭಾರತ ಯುದ್ಧದಲ್ಲಿ ಪಾಂಡವರು ಕೌರವರನ್ನು ಮೋಸದಿಂದ ಕೊನೆಗಾಣಿಸಿದ ಕಾರಣ ಭಗವಾನ್ ಶಂಕರನಿಗೆ ಪಾಂಡವರ ಮುಖ ನೋಡಲು ಇಷ್ಟವಾಗುವುದಿಲ್ಲ. ಆದರೆ ಪಾಂಡವರು ಶಿವನ ಆಶೀರ್ವಾದವನ್ನು ಪಡೆದುಕೊಳ್ಳಲು ಶಿವನನ್ನು ಬೆನ್ನಟ್ಟುತ್ತಾರೆ ಆ ಸಮಯದಲ್ಲಿ ಶಿವನು ಅವರಿಂದ ತಪ್ಪಿಸಿಕೊಂಡು ಕೇದಾರನಾಥದಲ್ಲಿ ನೆಲೆಸುತ್ತಾನೆ. ಪಾಂಡವರು ಅವರನ್ನು ಕೇದಾರಧಾಮಕ್ಕೆ ಹಿಂಬಾಲಿಸಿದರು. ಶಿವನು ಪಾಂಡವರನ್ನು ನೋಡುತ್ತಿದ್ದಂತೆ ಶಿವನು ಎತ್ತಿನ ರೂಪವನ್ನು ತೆಗೆದುಕೊಂಡನು ಮತ್ತು ಇತರ ಪ್ರಾಣಿಗಳ ಹಿಂದೆ ಅಡಗಿಕೊಂಡರು.
ಪಾಂಡವರಿಗೆ ಅನುಮಾನ ಬಂದಾಗ, ಭೀಮನು ದೈತ್ಯ ದೇಹವನ್ನು ತೆಗೆದುಕೊಂಡು ತನ್ನ ಎರಡೂ ಕಾಲುಗಳನ್ನು ಎರಡು ಪರ್ವತಗಳ ಮಧ್ಯದಲ್ಲಿ ಇರಿಸಿದನು. ಉಳಿದ ಎಲ್ಲಾ ಹಸುಗಳು ಭೀಮನ ಪಾದಗಳ ಮಧ್ಯದಿಂದ ಹೊರಗೆ ಹೋದವು ಆದರೆ ಎತ್ತಿನ ರೂಪದಲ್ಲಿದ್ದ ಶಿವನು ಹೋಗಲು ಸಿದ್ಧನಾಗಿರಲಿಲ್ಲ. ಇದು ಶಿವನೆಂದು ಭೀಮನಿಗೆ ಅರ್ಥವಾಯಿತು, ಆದ್ದರಿಂದ ಭೀಮನು ಎತ್ತಿನ ಬೆನ್ನಿನ ತ್ರಿಕೋನ ಭಾಗವನ್ನು ಹಿಡಿದನು. ಶಿವನು ಪಾಂಡವರ ಭಕ್ತಿ ಮತ್ತು ದೃಢನಿಶ್ಚಯವನ್ನು ನೋಡಿ ಸಂತೋಷಪಟ್ಟನು. ಅವನು ಪಾಂಡವರಿಗೆ ಕಾಣಿಸಿಕೊಂಡು ಅವರನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸಿದನು. ಅಂದಿನಿಂದ, ಇಲ್ಲಿ ಎತ್ತಿನ ಬೆನ್ನಿನ ತ್ರಿಕೋನ ರೂಪದ ಶಿವಲಿಂಗವನ್ನು ಪೂಜಿಸಲಾಗುತ್ತದೆ.

ಕೇದಾರನಾಥ್ಗೆ ಪ್ರಯಾಣಿಸುವುದು ಹೇಗೆ?
ಕೇದರನಾಥ ದೇವಸ್ಥಾನವನ್ನು ತಲುಪಲು ಗೌರಿಕುಂಡ್ ನಿಂದ 15 ಕಿ.ಮೀ ದೂರದಲ್ಲಿ ನಡೆಯಬೇಕು. ಏಕೆಂದರೆ ಅಲ್ಲಿಂದ ಮಾತ್ರ ಸಲಭವಾಗಿ ತಲುಪಬಹುದು. ಕೇದರನಾಥ್ ನ ಧಾಮ್ ಅನ್ನು ಕಟ್ಯುಹಾರಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಕಂದು ಮತ್ತು ದೊಡ್ಡ ಕಲ್ಲುಗಳನ್ನು ಬಳಸಲಾಗಿದೆ ಮತ್ತು ದೇವಾಲಯದ ಮೇಲ್ ಛಾವಣಿಯನ್ನು ಮರದಿಂದ ತಯಾರಿಸಲಾಗಿದೆ. ಕಲಾಶ್ ಶಿಖರದಲ್ಲಿ ಚಿನ್ನದಿಂದ ಮಾಡಲ್ಪಟ್ಟಿದೆ. ಮೇ 6 ರ ಶುಕ್ರವಾರದಂದು ಬೆಳಗ್ಗೆ 6.25 ಕ್ಕೆ ಕೇದರನಾಥ್ ಧಾಮ್ ಬಾಗಿಲುಗಳು ಭಕ್ತರಿಗಾಗಿ ತೆರೆಯಲಿವೆ.
ಕೇದರನಾಥ್ನಲ್ಲಿ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ರಿಶಿಕೇಶ್ ರೈಲ್ವೆ ನಿಲ್ದಾಣವು ಕೇದಾರ್ನಾಥದಿಂದ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಋಷಿಕೇಶದಿಂದ ಗೌರಿಕಂಡ್ಗೆ ಬಸ್ ತೆಗೆದುಕೊಳ್ಳಬಹುದು. ಬಸ್ ಪ್ರಯಾಣ ಸುಮಾರು 201 ಕಿ.ಮೀ.ದೂರವಾಗಬಹುದು.

6 ತಿಂಗಳು ಮಾತ್ರ ತೆರೆಯುವ ಕೇದಾರನಾಥ್ ಧಾಮ್
ಕೇದರನಾಥ್ ದೇವಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಮೊದಲನೆಯದು - ಗರ್ಭಗೃಹದ ಗರ್ಭಗುಡಿ, ಎರಡನೆಯದು - ದರ್ಶನ ಮಂಟಪ ಮತ್ತು ಮೂರನೇ ಸಭಾ ಮಂಟಪ. ಸಂದರ್ಶಕರು ದರ್ಶನ ಮಂಡಲದಲ್ಲಿ ಪೂಜಿಸುತ್ತಾರೆ ಮತ್ತು ಯಾತ್ರಿಕರು ಸಭಾಪಾದಲ್ಲಿ ಸಭೆ ಸೇರುತ್ತಾರೆ. ಗರ್ಭಗೃಹವು ದೇವಾಲಯದ ಒಳ ಭಾಗವಾಗಿದೆ.
ಕೇದರನಾಥ್ ದೇವಾಲಯವು ಸಂದರ್ಶಕರಿಗೆ ಒಂದು ವರ್ಷದಲ್ಲಿ ಕೇವಲ 6 ತಿಂಗಳುಗಳವರೆಗೆ ಮಾತ್ರ ತೆರೆದಿರುತ್ತದೆ ಮತ್ತು ಉಳಿದ 6 ತಿಂಗಳುಗಳವರೆಗೆ ಮುಚ್ಚಲ್ಪಟ್ಟಿರುತ್ತದೆ. ಏಕೆಂದರೆ ಇಲ್ಲಿ ಆರು ತಿಂಗಳು ಸಾಕಷ್ಟು ಹಿಮಪಾತವಾಗುತ್ತದೆ ಮತ್ತು ಇಡೀ ದೇವಾಲಯವು ಹಿಮದಿಂದ ಆವೃತವಾಗಿರುತ್ತದೆ. ಈ ದೇವಾಲಯವನ್ನು ವೈಶಾಖಿಯ ನಂತರ ತೆರೆಯಲಾಗುತ್ತದೆ ಮತ್ತು ದೀಪಾವಳಿಯ ನಂತರ ಪಡ್ವಾ ತಿಥಿಯನ್ನು ಮುಚ್ಚಲಾಗುತ್ತದೆ. 6 ತಿಂಗಳುಗಳು ಪೂರ್ಣಗೊಂಡ ನಂತರ, ದೇವಾಲಯದ ಪುರೋಹಿತರು ಇಲ್ಲಿ ಒಂದು ದೀಪವನ್ನು ಬೆಳಗಿಸುತ್ತಾರೆ ಮತ್ತು 6 ತಿಂಗಳ ನಂತರ ಈ ಬಾಗಿಲು ತೆರೆದಾಗ, ಈ ದೀಪ ಇನ್ನೂ ಉರಿಯುತ್ತಿರುತ್ತದೆ ಎಂದು ನಂಬಲಾಗಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications