ಪದ್ಮ ಪ್ರಶಸ್ತಿ : ತೂರಿಬಂದ ವಿಡಂಬನೆಯ ಟ್ವೀಕಾಸ್ತ್ರಗಳು
ಬೆಂಗಳೂರು, ಜನವರಿ 25 : ಚರ್ಚೆಯ ವಿಷಯ ಯಾವುದೇ ಇರಲಿ, ಪರ ವಿರೋಧ, ವ್ಯಂಗ್ಯ ವಿಡಂಬನೆ, ಹಾಸ್ಯ ಪರಿಹಾಸ್ಯ, ಎತ್ತು ಏರಿಗೆ ಎಮ್ಮೆ ನೀರಿಗೆ ಎನ್ನುವಂತಹ ಕಟು ಟೀಕೆಟಿಪ್ಪಣಿಗಳಿಲ್ಲದಿದ್ದರೆ ಟ್ವಿಟ್ಟರ್ ಸಪ್ಪೆ ವಾರ್ತಾಪತ್ರದಂತಿರುತ್ತದೆ. ಇದೀಗ ತಾನೆ ಪ್ರಕಟವಾಗಿರುವ ಪದ್ಮ ಪ್ರಶಸ್ತಿಗಳು ಕೂಡ ಇದಕ್ಕೆ ಹೊರತಲ್ಲ.
"ಅಂತೂ ನಮ್ಮ 'ಬಾಸ್' ಪ್ರಶಸ್ತಿಗೆ ಪಾತ್ರರಾದರು..." ಎಂಬಂತಹ ಹೊಗಳಿಕೆಯ ಮಾತುಗಳಿಂದ ಹಿಡಿದು "ಪ್ರಶಸ್ತಿ ಪಡೆದವರು, ಈ ಪ್ರಶಸ್ತಿ ವಾಪಸ್ ಮಾಡಲ್ಲ ಎಂದು ಸರಕಾರಕ್ಕೆ ಅಫಿಡವಿಟ್ ಬರೆದುಕೊಡಬೇಕು..." ಎಂಬಂತಹ ವಿಡಂಬನಾತ್ಮಕ ಚೂಪಾದ ವಾಗ್ಬಾಣಗಳು ಟ್ವಿಟ್ಟರಲ್ಲಿ ಹರಿದಾಡುತ್ತಿವೆ.
ಕೇಂದ್ರ ಸರಕಾರವನ್ನು ಉಘೇ ಉಘೇ ಎಂದವರಿಗೆ ಪದ್ಮ ಪ್ರಶಸ್ತಿ ಹುಡುಕುಡುಕಿಕೊಂಡು ಬಂದಿವೆ ಎಂದು ಹಲವಾರು ಟ್ವೀಟುಗಳು ಕುಟುಕುತ್ತಿದ್ದು, #PadmaAward4Bhakts ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.
ಇದನ್ನೆಲ್ಲ ನೋಡಿದ ಪ್ರಶಸ್ತಿ ಸ್ವೀಕರಿಸುವವರಿಗೆ ಮಾತ್ರ ಧರ್ಮಸಂಕಟ. ಇಸ್ಕೊಳ್ಳೋ ಬೇಡ್ವೋ, ಮುಂದೆ ಟೀಕೆಗಳು ಬಂದರೆ ಏನು ಗತಿ ಎಂಬಂತಹ ಪರಿಸ್ಥಿತಿ. ಇಷ್ಟರಲ್ಲೇ ಕೆಲವೊಂದು ವಾಪಸಾತಿಗಳು ಆದರೂ ಅಚ್ಚರಿಯಿಲ್ಲ. ಏನೇ ಆಗಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಸತ್ಪಾತ್ರರಿಗೆ ಅಭಿನಂದನೆಗಳು, ತಪ್ಪಿಸಿಕೊಂಡವರಿಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್!
ಇನ್ನು, ಎಂತೆಂತಹ ಟ್ವೀಟೋಕ್ತಿಗಳು, ವಾಗ್ಝರಿಗಳು, ಕಾಲೆಳೆಯುವ ಮಾತುಗಳು, ಚಾಟಿಏಟುಗಳು ಬಂದಿವೆ ಎಂಬುದನ್ನು ಮುಂದೆ ಓದಿರಿ. [ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ]
|
ರಾಮದೇವ್, ಅರ್ನಬ್ ಅವರಿಗೆ ಭಾರತರತ್ನ
ಬಾಬಾ ರಾಮದೇವ್ ಮತ್ತು ಅರ್ನಬ್ ಅವರನ್ನು ಪದ್ಮ ಪಟ್ಟಿಯಿಂದ ಹೊರಗಿರುವುದು ಆಶ್ಚರ್ಯಕರ. ಬಹುಶಃ ಅವರಿಗೆ ಭಾರತ ರತ್ನ ನೀಡಬಹುದೇನೋ!
|
ಪದ್ಮ ಪ್ರಶಸ್ತಿ ಪಟ್ಟಿ ನೋಡಿ ಆಶ್ಚರ್ಯವಾಗಿಲ್ಲ
ಪದ್ಮ ಪ್ರಶಸ್ತಿ ಪಟ್ಟಿ ನೋಡಿ ಆಶ್ಚರ್ಯವಾಗಿಲ್ಲ. ಮೋದಿ ಸರಕಾರ ಯುಪಿಎ ಸರಕಾರವನ್ನೇ ಅನುಸರಿಸುತ್ತಿದೆ. ತನ್ನ ಸೆಲೆಬ್ರಿಟಿ ಬೆಂಬಲಿಗರಿಗೆ ನೀಡಬೇಕಾದ್ದನ್ನು ನೀಡುತ್ತಿದೆ.
|
ಅತ್ಯಾಚಾರ ಆರೋಪಿ ಮಧುರ್ ಅವರಿಗೆ ಪದ್ಮ
ಅತ್ಯಾಚಾರ ಆರೋಪಿ ಮಧುರ್ ಭಂಡಾರ್ಕರ್ ಅವರಿಗೆ ಪದ್ಮ ಪ್ರಶಸ್ತಿ ಸಿಕ್ಕಿದೆ. ಇದು ಮೋದಿ ಸರಕಾರದಿಂದ ಮಾತ್ರ ಸಾಧ್ಯ!
|
ಅಪ್ಪ (ರಜನಿಕಾಂತ್) ಈಗ ಪದ್ಮ ವಿಭೂಷಣ
ಹೆಮ್ಮೆಯ ಮಗಳು! ಅಪ್ಪ (ರಜನಿಕಾಂತ್) ಈಗ ಪದ್ಮ ವಿಭೂಷಣ
|
ಪದ್ಮ ಇನ್ನು ಮುಂದೆ ಸಹಿಷ್ಣುತೆ ಪ್ರಶಸ್ತಿ
ಪದ್ಮ ಪ್ರಶಸ್ತಿಗಳನ್ನು ಇನ್ನು ಮುಂದೆ ಸಹಿಷ್ಣುತೆ ಪ್ರಶಸ್ತಿ ಎಂದು ಮರುನಾಮಕರಣ ಮಾಡಬೇಕು! ರವೀನಾ ಟಂಡನ್ ಅವರನ್ನೇಕೆ ಕಡೆಗಣಿಸಲಾಗಿದೆ? ಇದು ಸರಿಯಲ್ಲ. ಅನುಪಮ್ ಖೇರ್ ಮತ್ತು ಮಧುರ್ ಭಂಡಾರ್ಕರ್ ಅವರು 'ಬಾಸ್' ಶಾ ಅವರನ್ನೇ ಕೇಳಬೇಕು.
|
ಏನು ಬೇಕಾದ್ದರೂ ಆಗಬಹುದು!
ಏನು ಬೇಕಾದ್ದರೂ ಆಗಬಹುದು! ಇದು, ಪದ್ಮ ಪ್ರಶಸ್ತಿ ಘೋಷಣೆಯಾದ ನಂತರ ಅನುಪಮ್ ಖೇರ್ ಅವರ ಪ್ರತಿಕ್ರಿಯೆ!!
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications