ಫೆ. 10, 11ರಂದು ಬೆಂಗಳೂರಿನಲ್ಲಿ ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ
ಬೆಂಗಳೂರು, ಫೆಬ್ರವರಿ 7: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿಯವರ ಸಂಜೋಗ್ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ಟಾಟಾ ಕ್ಯಾಪಿಟಲ್ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸಂಗೀತ ಸಮ್ಮೇಳ ಆಯೋಜಿಸಲಾಗಿದೆ. ಫೆ. 10, 11 ರಂದು ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಜ್ನಾನ ಜ್ಯೋತಿ ಸಭಾಂಗಣದಲ್ಲಿ ಈ ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ ನಡೆಯಲಿದೆ.
ಖ್ಯಾತ ನಾಮರಾದ ಉಸ್ತಾದ ಶಾಹಿದ್ ಪರ್ವೇಜ್, ಪಂಡಿತ್ ವೆಂಕಟೇಶ ಕುಮಾರ್, ಪ್ರವೀಣ ಗೋಡ್ಖಿಂಡಿ, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ, ಪಂಡಿತ್ ಯೋಗೇಶ್ ಸಂಸಿ, ಪಂಡಿತ್ ಶುಭಂಕರ ಬ್ಯಾನರ್ಜಿ, ರಾಜೇಂದ್ರ ಗಂಗಾನಿ-ರುಜುತಾ ಸೋಮನ್(ನೃತ್ಯ), ಶಡಜ್ ಗೋಡ್ಖಿಂಡಿ ಮತ್ತು ಇನ್ನೂ ಅನೇಕ ಕಲಾವಿದರು ಈ ಎರಡು ದಿವಸದ ಸಂಗೀತ-ನೃತ್ಯ ಮಹೋತ್ಸವದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಈ ಸಮ್ಮೇಳನದ ಆಕರ್ಷಣೆಯಾಗಿ ಅನೇಕ ಸೋಲೋ, ಜುಗಲ್ಬಂದಿ ಹಾಗೂ ವಿಶಿಷ್ಟ ನೃತ್ಯ ಕಾರ್ಯಕ್ರಮಗಳು ಇರಲಿವೆ. ಮುಂದಿನ ವರ್ಷಗಳಲ್ಲಿ ಈ 'ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ'ವನ್ನು ರಾಷ್ಟ್ರ ಮಟ್ಟದ ಪ್ರಮುಖ ಕಲಾ ಸಮ್ಮೇಳನವಾಗಿಸುವುದು ಪ್ರವೀಣ್ ಗೋಡ್ಖಿಂಡಿಯವರ ಕನಸಾಗಿದೆ.
ಉಚಿತ ಪ್ರವೇಶ
ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ - 9845329954 ಸಂಪರ್ಕಿಸಬಹುದಾಗಿದೆ. ಜತೆಗೆ ಸಂಜೋಗ್ ಚ್ಯಾರಿಟೇಬಲ್ ಟ್ರಸ್ಟ್ ನ ಫೇಸ್ಬುಕ್ ಪೇಜನ್ನೂ ಸಂಪರ್ಕಿಸಬಹುದು.
ಸ್ಥಳ: ಜ್ನಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಬೆಂಗಳೂರು
ದಿನಾಂಕ: 10 ಮತ್ತು 11 ಫೆಬ್ರುವರಿ 2018.
ಸಮಯ: ಸಂಜೆ 5 ಗಂಟೆ