ಮಾಗಡಿಯಲ್ಲಿ ಬೆಂಗಳೂರಿನ ತ್ಯಾಜ್ಯ ಸುರಿಯಬೇಡಿ
ಬೆಂಗಳೂರು, ನ.29 : ಮಾಗಡಿ ತಾಲೂಕಿನ ಗೊರೂರಿನಲ್ಲಿ ಕಸವಿಲೇವಾರಿ ಘಟಕದ ಸರ್ವೆಗೆ ಅಡ್ಡಿಪಡಿಸಿದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು ಕ್ರಮವನ್ನು ಜೆಡಿಎಸ್ ಖಂಡಿಸಿದೆ. ಸ್ಥಳೀಯ ಜನರ ಜೊತೆ ಚರ್ಚಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ.
ಯುವ
ಜೆಡಿಎಸ್
ಘಟಕ
ನಗರದ
ಆನಂದರಾವ್
ವೃತ್ತದ
ಬಳಿಯ
ಗಾಂಧಿ
ಪ್ರತಿಮೆ
ಬಳಿ
ಶನಿವಾರ
ಬೃಹತ್
ಪ್ರತಿಭಟನೆ
ನಡೆಸಿತು.
ಬಿಬಿಎಂಪಿ
ಯುವ
ಜೆಡಿಎಸ್
ಘಟಕದ
ಅಧ್ಯಕ್ಷ
ಹೆಚ್.ಎಂ.ರಮೇಶ್
ಗೌಡ
ನೇತೃತ್ವದಲ್ಲಿ
ನಡೆದ
ಪ್ರತಿಭಟನೆಯಲ್ಲಿ
ರಾಮನಗರ
ಜಿಲ್ಲಾ
ಉಸ್ತುವಾರಿ
ಸಚಿವ
ಡಿ.ಕೆ.ಶಿವಕುಮಾರ್
ಅವರ
ಪ್ರತಿಕೃತಿಯನ್ನು
ದಹಿಸಲಾಯಿತು.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದ ರಮೇಶ್ ಗೌಡ ಅವರು, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ಥಳೀಯ ಜನತೆ, ರೈತರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದರು. [ಕಸ ಹಾಕಿ ಗೊರೂರನ್ನು ಮಂಡೂರು ಮಾಡಬೇಡಿ]
ಸರ್ವೆ ಕಾರ್ಯ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ರಮೇಶ್ ಗೌಡ ಅವರು ಆರೋಪಿಸಿದರು. ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ತಪ್ಪು ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಯ ಗೊರೂರನ್ನು ಮತ್ತೊಂದು ಮಂಡೂರು ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಗೊರೂರಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಕ್ಕೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ ಬಗ್ಗೆ ರೈತರು, ಜನಪ್ರತಿನಿಧಿಗಳಿಗೆ ಸಮರ್ಪಕವಾದ ಮಾಹಿತಿ ನೀಡಿಲ್ಲ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದ ಸಾಧಕ ಭಾದಕಗಳ ಬಗ್ಗೆ ಸ್ಥಳೀಯ ಜನರಿಗೆ ವಿವರ ನೀಡಬೇಕು ಎಂದು ರಮೇಶ್ಗೌಡ ಅವರು ಒತ್ತಾಯಿಸಿದರು