ಮುಚ್ಚುವ ಸ್ಥಿತಿಗೆ ಬಂದು ನಿಂತಿರುವ ವಿಜಯ ಮಲ್ಯ ಕುದುರೆ ಲಾಯ
ಕುಣಿಗಲ್ ನಲ್ಲಿರುವ ವಿಜಯ ಮಲ್ಯ ಅವರ ಕುದುರೆ ಲಾಯ ಮುಚ್ಚುವ ಸ್ಥಿತಿಯಲ್ಲಿ. ಮಲ್ಯ ದೇಶಬಿಟ್ಟು ಹೋಗಿರುವುದರಿಂದ ಇಲ್ಲಿ ಆಡಳಿತದ ಮೇಲೆ ಪರಿಣಾಮ.
ಬೆಂಗಳೂರು, ಜುಲೈ 20: ಇದರ ಮಾಲೀಕ ಇಲ್ಲಿಲ್ಲ. ಹಾಗಾಗಿ, ಇಲ್ಲಿನ ಆಡಳಿತ ತಾಳ ತಪ್ಪಿದೆ. ನಿರ್ವಹಣೆಗೆ ಕಾಸಿಲ್ಲ. ಮಾಲೀಕನೇ ಸಾಲಗಾರನಾಗಿರುವಾಗ ಇಲ್ಲಿನ ಕೆಲಸಗಾರರಿಗೆ ವೇತನವೇ ಬಂದಿಲ್ಲ!
ಹೌದು. ಇದಿಷ್ಟೂ ತುಮಕೂರಿನ ಕುಣಿಗಲ್ ಬಳಿಯಿರುವ 'ಯುನೈಟೆಡ್ ರೇಸಿಂಗ್ ಆ್ಯಂಡ್ ಬ್ಲಡ್ ಸ್ಟಾಕ್' ಸಂಸ್ಥೆಯ ದುಸ್ಥಿತಿ. ಇದಕ್ಕೆ ಕಾರಣ, ಇದರ ಮಾಲೀಕರಾದ ವಿಜಯ್ ಮಲ್ಯ ಅವರು ದೇಶ ತೊರೆದು ದೂರದ ಲಂಡನ್ ನಲ್ಲಿ ನೆಲೆಸಿರುವುದು.

ರೇಸ್ ಕುದುರೆಗಳ ತಳಿಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಕ್ಕಾಗಿಯೇ ಅಶ್ವ ಪ್ರಿಯರೂ ಆದ ವಿಜಯ್ ಮಲ್ಯ ಅವರು ಈ ಸಂಸ್ಥೆಯನ್ನು ಆರಂಭಿಸಿದ್ದರು. ಈಗ, ಅವರೇ ಸಾಲದ ಸುಳಿಯಲ್ಲಿ ಸಿಲುಕಿ ದೇಶ ತೊರೆದಿದ್ದಾರೆ.
ಹಾಗಾಗಿ, ಇಲ್ಲಿನ ಚಟುವಟಿಕೆಗಳು ಕುಂದಿವೆ. ಸಂಸ್ಥೆಯ ಉದ್ದೇಶದಂತ, ತಳಿಗಳ ಅಭಿವೃದ್ಧಿ ಕಾರ್ಯಕ್ಕೆ ಮಂದಗತಿಯಲ್ಲಿ ಸಾಗುತ್ತಿದೆ. ಆದಾಯದ ಕೊರತೆಯಿಂದಾಗಿ ಕಳೆದ ತಿಂಗಳು ಇಲ್ಲಿ ಕೆಲಸ ಮಾಡುವವರಿಗೆ ವೇತನವನ್ನೂ ನೀಡಿಲ್ಲವೆಂಬ ದೂರು ಕೇಳಿಬಂದಿದೆ.
ಈ ವಿಚಾರ ಮಲ್ಯರಿಗೆ ಗೊತ್ತಿಲ್ಲವೆಂದೇನಲ್ಲ. ಅವರ ಆಣತಿಯ ಮೇರೆಗೆ ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಗಳು ಇತ್ತೀಚೆಗೆ ಈ ಸಂಸ್ಥೆಗೆ ಭೇಟಿ ಕೊಟ್ಟು ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಆದರೆ, ಕೆಲವಾರು ವಿಚಾರಗಳನ್ನು ನಿರ್ಧರಿಸಲು ಖುದ್ದು ಮಲ್ಯ ಅವರೇ ಇಲ್ಲಿಗೆ ಬರಬೇಕಿರುವುದರಿಂದ ಈ ಸಂಸ್ಥೆಯ ಅಭಿವೃದ್ಧಿ ಮತ್ತೆ ನೆನೆಗುದಿಗೆ ಬಿದ್ದಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications