ಮಾರ್ಚ್ 31ರವರೆಗೂ ಎಲ್ಎಲ್, ಡಿಎಲ್ ಪ್ರಕ್ರಿಯೆ ಸ್ಥಗಿತ
ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಮಾರ್ಚ್ 31ರವರೆಗೂ ಮಾಲ್, ಚಿತ್ರಮಂದಿರ, ಪಬ್, ರೆಸ್ಟೋರೆಂಟ್, ಕ್ಲಬ್, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿದೆ.
ಇದೀಗ, ಬೆಂಗಳೂರಿನ ಆರ್ ಟಿ ಒ ಕಚೇರಿಗೂ ಕೊರೊನಾ ಭೀತಿ ತಟ್ಟಿದೆ. ಬೆಂಗಳೂರುನ ನಗರ ವ್ಯಾಪ್ತಿಯಲ್ಲಿ ಬರುವ ಆರ್ ಟಿ ಒ ಕಚೇರಿಗಳಲ್ಲಿ ಡಿಎಲ್ ಮತ್ತು ಎಲ್ ಎಲ್ ಪರೀಕ್ಷೆ ಪ್ರಕ್ರಿಯೆ ಶುಕ್ರವಾರದಿಂದ (ಮಾರ್ಚ್ 20) ಸ್ಥಗಿತಗೊಂಡಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆ
ಆರ್ ಟಿ ಒ ಕಚೇರಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದರಿಂದ ಕೊರೊನಾ ಹರಡಬಹುದು ಎಂಬ ಮುಂಜಾಗ್ರತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಯಶವಂತಪುರ, ಜಯನಗರ, ರಾಜರಾಜೇಶ್ವರಿ ನಗರ, ಯಲಹಂಕ, ಬನ್ನೇರುಘಟ್ಟ, ನೆಲಮಂಗಲದಲ್ಲಿ ಆರ್ ಟಿ ಒ ಕಚೇರಿಗಳಿದ್ದು ಎಲ್ಲ ಕಚೇರಿಯಲ್ಲು ಡಿಎಲ್ ಮತ್ತು ಎಲ್ಎಲ್ ಪರೀಕ್ಷೆ ಮಾರ್ಚ್ 31ರವರೆಗೂ ನಡೆಯಲ್ಲ ಎಂದು ತಿಳಿಸಲಾಗಿದೆ.
ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ
ದಿನನಿತ್ಯ 5 ಸಾವಿರಕ್ಕೂ ಹೆಚ್ಚು ಜನರು ಆರ್ ಟಿ ಒ ಕಚೇರಿಗಳಿಗೆ ಭೇಟಿ ಕೊಡುತ್ತಾರೆ. ಹೆಚ್ಚು ಜನರು ಸೇರುವುದರಿಂದ ಸೋಂಕು ಹರುಡಬಹುದು. ಹೀಗಾಗಿ ಮುಂದಿನ ಆದೇಶದವರೆಗೂ ಆರ್ ಟಿ ಒ ಕಚೇರಿಗಳಿಗೆ ಸಿಂಧುತ್ವವಿರುವ ಕಲಿಕಾ ಅನುಜ್ಞಾ ಪತ್ರ ಹೊಂದಿರುವವರನ್ನು ಹೊರತುಪಡಿಸಿ ಉಳದಿವರನ್ನು ಕಚೇರಿಗೆ ಬರದಂತೆ ನಿಯಂತ್ರಿಸಬೇಕು ಎಂದು ಹೊಸದಾಗಿ ಯಾವುದೇ ಪರವಾನಗಿ ಮಾಡಿಕೊಡದಂತೆ ಸೂಚಿಸಲಾಗಿದೆ.