ಶ್ರೀಮಂತ ಅಭ್ಯರ್ಥಿ ಪ್ರಿಯಕೃಷ್ಣ ಸೇರಿ 28 ಅಭ್ಯರ್ಥಿಗಳಿಗೆ ಬಿಪ್ಯಾಕ್ ಬಲ
ಬೆಂಗಳೂರು, ಮೇ 08: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(ಬಿ ಪ್ಯಾಕ್) ಪ್ರತಿ ಬಾರಿಯಂತೆ ಈಗಿನ ವಿಧಾನಸಭೆ ಚುನಾವಣೆ ಕಣದಲ್ಲಿರುವ ಬೆಂಗಳೂರಿನ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಈ ಚುನಾವಣೆಯಲ್ಲಿ 28 ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಬಿ.ಪ್ಯಾಕ್ ಪ್ರಕಟಿಸಿದೆ. ಈ ಪೈಕಿ ಈ ಬಾರಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ ಪ್ರಿಯಾಕೃಷ್ಣ ಅವರಿಗೂ ದುಡ್ಡು ಕೊಟ್ಟು, ಬಿಪ್ಯಾಕ್ ಬೆಂಬಲ ವ್ಯಕ್ತಪಡಿಸುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ.
1020 ಕೋಟಿ ರು ಆಸ್ತಿ ಹೊಂದಿರುವ ಪ್ರಿಯಾಕೃಷ್ಣ ಅವರಲ್ಲದೆ, ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಕ್ಕಿದೆ.
'ಬೆಂಗಳೂರಿನ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಅಪರಾಧ ಹಿನ್ನೆಲೆ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಹಿನ್ನೆಲೆ, ಶಾಸಕರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಈ ಸಮೀಕ್ಷೆ ವ್ಯಾಪ್ತಿಗೆ ಒಳಪಡಿಸಿಲ್ಲ' ಎಂದು ಬಿ.ಪ್ಯಾಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೇವತಿ ಅಶೋಕ್ ಹೇಳಿದ್ದಾರೆ.

'ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಬಲ್ಲ ಸಾಮರ್ಥ್ಯ, ವಿದ್ಯಾರ್ಹತೆ ಅಂಶಗಳನ್ನು ಆಯ್ಕೆ ಪ್ರಕ್ರಿಯೆಗೆ ಮಾನದಂಡವಾಗಿಸಿಕೊಂಡಿದ್ದೇವೆ. ನಾವು ಅನುಮೋದಿಸುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಎಎಪಿಯ 3 ಅಭ್ಯರ್ಥಿಗಳು ಸೇರಿದ್ದಾರೆ. ಪ್ರತಿ ಅಭ್ಯರ್ಥಿಗೆ 2 ಲಕ್ಷ ರು ನೀಡಲಾಗುವುದು' ಎಂದರು.
ಜಯನಗರ ಹಾಗೂ ಆನೇಕಲ್ ಕ್ಷೇತ್ರ ಸೇರಿ 8 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಗುತ್ತಿಲ್ಲ.
ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು:
| ಕ್ಷೇತ್ರ | ಅಭ್ಯರ್ಥಿ | ಪಕ್ಷ |
| ಬೊಮ್ಮನಹಳ್ಳಿ | ಸುಷ್ಮಾ ರಾಜಗೋಪಾಲ ರೆಡ್ಡಿ | ಕಾಂಗ್ರೆಸ್ |
| ಮಹದೇವಪುರ | ಅರವಿಂದ ಲಿಂಬಾವಳಿ ಪಿ ರಮೇಶಚಂದರ್ | ಬಿಜೆಪಿ ಸ್ವರಾಜ್ ಇಂಡಿಯಾ |
| ಬಿಟಿಎಂ ಲೇಔಟ್ | ರಾಮಲಿಂಗಾರೆಡ್ಡಿ | ಕಾಂಗ್ರೆಸ್ |
| ಯಲಹಂಕ | ಎಸ್. ಆರ್ ವಿಶ್ವನಾಥ್ | ಬಿಜೆಪಿ |
| ಕೆ.ಆರ್ ಪುರ | ಕೆ.ಆರ್ ಪುರ | ಎಎಪಿ |
| ಬ್ಯಾಟರಾಯನಪುರ | ಕೃಷ್ಣಬೈರೇಗೌಡ ನರೇಂದ್ರ ಕುಮಾರ್ | ಕಾಂಗ್ರೆಸ್ ಸ್ವತಂತ್ರ |
| ಯಶವಂತಪುರ | ಎಸ್. ಟಿ ಸೋಮಶೇಖರ್ | ಕಾಂಗ್ರೆಸ್ |
| ಮಹಾಲಕ್ಷ್ಮಿ ಲೇಔಟ್ | ಕೆ ಗೋಪಾಲಯ್ಯ ಎನ್ಎಲ್ ನರೇಂದ್ರ ಬಾಬು ಎಚ್.ಎಸ್ ಮಂಜುನಾಥ್ | ಜೆಡಿಎಸ್ ಬಿಜೆಪಿ ಕಾಂಗ್ರೆಸ್ |
| ಮಲ್ಲೇಶ್ವರ | ಡಾ. ಸಿ.ಎನ್ ಅಶ್ವಥನಾರಾಯಣ | ಬಿಜೆಪಿ |
| ಹೆಬ್ಬಾಳ | ವೈ .ಎ ನಾರಾಯಣ ಸ್ವಾಮಿ | ಬಿಜೆಪಿ |
| ಸರ್ವಜ್ಞನಗರ | ಕೆ.ಜೆ ಜಾರ್ಜ್ ಪೃಥ್ವಿರೆಡ್ಡಿ | ಕಾಂಗ್ರೆಸ್ ಎಎಪಿ |
| ಸಿವಿ ರಾಮನ್ ನಗರ | ಆರ್ ಸಂಪತ್ ರಾಜ್ | ಕಾಂಗ್ರೆಸ್ |
| ಶಾಂತಿನಗರ | ಎನ್.ಎ ಹ್ಯಾರೀಸ್ ರೇಣುಕಾ ವಿಶ್ವನಾಥನ್ ಪೀಟರ್ ಸ್ಯಾಮ್ಸನ್ ಬಾಬು | ಕಾಂಗ್ರೆಸ್ ಎಎಪಿ ಸ್ವತಂತ್ರ |
| ಗಾಂಧಿನಗರ | ದಿನೇಶ್ ಗುಂಡೂರಾವ್ ಎ.ಆರ್ ಸಪ್ತಗಿರಿಗೌಡ | ಕಾಂಗ್ರೆಸ್ ಬಿಜೆಪಿ |
| ರಾಜಾಜಿನಗರ | ಜಿ ಪದ್ಮಾವತಿ ಸುರೇಶ್ ಕುಮಾರ್ | ಕಾಂಗ್ರೆಸ್ ಬಿಜೆಪಿ |
| ಗೋವಿಂದರಾಜನಗರ | ಪ್ರಿಯಕೃಷ್ಣ | ಕಾಂಗ್ರೆಸ್ |
| ವಿಜಯನಗರ | ಎಂ ಕೃಷ್ಣಪ್ಪ | ಕಾಂಗ್ರೆಸ್ |
| ಬಸವನಗುಡಿ | ಎಲ್ ಎ ಸುಬ್ರಹ್ಮಣ್ಯ ಡಾ. ಎ.ಎಸ್ ಭಾನುಪ್ರಕಾಶ್ | ಬಿಜೆಪಿ ಪಿಪಿಐ |
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications