ಶ್ರೀಮಂತ ಅಭ್ಯರ್ಥಿ ಪ್ರಿಯಕೃಷ್ಣ ಸೇರಿ 28 ಅಭ್ಯರ್ಥಿಗಳಿಗೆ ಬಿಪ್ಯಾಕ್ ಬಲ
ಬೆಂಗಳೂರು, ಮೇ 08: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(ಬಿ ಪ್ಯಾಕ್) ಪ್ರತಿ ಬಾರಿಯಂತೆ ಈಗಿನ ವಿಧಾನಸಭೆ ಚುನಾವಣೆ ಕಣದಲ್ಲಿರುವ ಬೆಂಗಳೂರಿನ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಈ ಚುನಾವಣೆಯಲ್ಲಿ 28 ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಬಿ.ಪ್ಯಾಕ್ ಪ್ರಕಟಿಸಿದೆ. ಈ ಪೈಕಿ ಈ ಬಾರಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ ಪ್ರಿಯಾಕೃಷ್ಣ ಅವರಿಗೂ ದುಡ್ಡು ಕೊಟ್ಟು, ಬಿಪ್ಯಾಕ್ ಬೆಂಬಲ ವ್ಯಕ್ತಪಡಿಸುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ.
1020 ಕೋಟಿ ರು ಆಸ್ತಿ ಹೊಂದಿರುವ ಪ್ರಿಯಾಕೃಷ್ಣ ಅವರಲ್ಲದೆ, ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಕ್ಕಿದೆ.
'ಬೆಂಗಳೂರಿನ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಅಪರಾಧ ಹಿನ್ನೆಲೆ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಹಿನ್ನೆಲೆ, ಶಾಸಕರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಈ ಸಮೀಕ್ಷೆ ವ್ಯಾಪ್ತಿಗೆ ಒಳಪಡಿಸಿಲ್ಲ' ಎಂದು ಬಿ.ಪ್ಯಾಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೇವತಿ ಅಶೋಕ್ ಹೇಳಿದ್ದಾರೆ.

'ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಬಲ್ಲ ಸಾಮರ್ಥ್ಯ, ವಿದ್ಯಾರ್ಹತೆ ಅಂಶಗಳನ್ನು ಆಯ್ಕೆ ಪ್ರಕ್ರಿಯೆಗೆ ಮಾನದಂಡವಾಗಿಸಿಕೊಂಡಿದ್ದೇವೆ. ನಾವು ಅನುಮೋದಿಸುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಎಎಪಿಯ 3 ಅಭ್ಯರ್ಥಿಗಳು ಸೇರಿದ್ದಾರೆ. ಪ್ರತಿ ಅಭ್ಯರ್ಥಿಗೆ 2 ಲಕ್ಷ ರು ನೀಡಲಾಗುವುದು' ಎಂದರು.
ಜಯನಗರ ಹಾಗೂ ಆನೇಕಲ್ ಕ್ಷೇತ್ರ ಸೇರಿ 8 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಗುತ್ತಿಲ್ಲ.
ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು:
| ಕ್ಷೇತ್ರ | ಅಭ್ಯರ್ಥಿ | ಪಕ್ಷ |
| ಬೊಮ್ಮನಹಳ್ಳಿ | ಸುಷ್ಮಾ ರಾಜಗೋಪಾಲ ರೆಡ್ಡಿ | ಕಾಂಗ್ರೆಸ್ |
| ಮಹದೇವಪುರ | ಅರವಿಂದ ಲಿಂಬಾವಳಿ ಪಿ ರಮೇಶಚಂದರ್ | ಬಿಜೆಪಿ ಸ್ವರಾಜ್ ಇಂಡಿಯಾ |
| ಬಿಟಿಎಂ ಲೇಔಟ್ | ರಾಮಲಿಂಗಾರೆಡ್ಡಿ | ಕಾಂಗ್ರೆಸ್ |
| ಯಲಹಂಕ | ಎಸ್. ಆರ್ ವಿಶ್ವನಾಥ್ | ಬಿಜೆಪಿ |
| ಕೆ.ಆರ್ ಪುರ | ಕೆ.ಆರ್ ಪುರ | ಎಎಪಿ |
| ಬ್ಯಾಟರಾಯನಪುರ | ಕೃಷ್ಣಬೈರೇಗೌಡ ನರೇಂದ್ರ ಕುಮಾರ್ | ಕಾಂಗ್ರೆಸ್ ಸ್ವತಂತ್ರ |
| ಯಶವಂತಪುರ | ಎಸ್. ಟಿ ಸೋಮಶೇಖರ್ | ಕಾಂಗ್ರೆಸ್ |
| ಮಹಾಲಕ್ಷ್ಮಿ ಲೇಔಟ್ | ಕೆ ಗೋಪಾಲಯ್ಯ ಎನ್ಎಲ್ ನರೇಂದ್ರ ಬಾಬು ಎಚ್.ಎಸ್ ಮಂಜುನಾಥ್ | ಜೆಡಿಎಸ್ ಬಿಜೆಪಿ ಕಾಂಗ್ರೆಸ್ |
| ಮಲ್ಲೇಶ್ವರ | ಡಾ. ಸಿ.ಎನ್ ಅಶ್ವಥನಾರಾಯಣ | ಬಿಜೆಪಿ |
| ಹೆಬ್ಬಾಳ | ವೈ .ಎ ನಾರಾಯಣ ಸ್ವಾಮಿ | ಬಿಜೆಪಿ |
| ಸರ್ವಜ್ಞನಗರ | ಕೆ.ಜೆ ಜಾರ್ಜ್ ಪೃಥ್ವಿರೆಡ್ಡಿ | ಕಾಂಗ್ರೆಸ್ ಎಎಪಿ |
| ಸಿವಿ ರಾಮನ್ ನಗರ | ಆರ್ ಸಂಪತ್ ರಾಜ್ | ಕಾಂಗ್ರೆಸ್ |
| ಶಾಂತಿನಗರ | ಎನ್.ಎ ಹ್ಯಾರೀಸ್ ರೇಣುಕಾ ವಿಶ್ವನಾಥನ್ ಪೀಟರ್ ಸ್ಯಾಮ್ಸನ್ ಬಾಬು | ಕಾಂಗ್ರೆಸ್ ಎಎಪಿ ಸ್ವತಂತ್ರ |
| ಗಾಂಧಿನಗರ | ದಿನೇಶ್ ಗುಂಡೂರಾವ್ ಎ.ಆರ್ ಸಪ್ತಗಿರಿಗೌಡ | ಕಾಂಗ್ರೆಸ್ ಬಿಜೆಪಿ |
| ರಾಜಾಜಿನಗರ | ಜಿ ಪದ್ಮಾವತಿ ಸುರೇಶ್ ಕುಮಾರ್ | ಕಾಂಗ್ರೆಸ್ ಬಿಜೆಪಿ |
| ಗೋವಿಂದರಾಜನಗರ | ಪ್ರಿಯಕೃಷ್ಣ | ಕಾಂಗ್ರೆಸ್ |
| ವಿಜಯನಗರ | ಎಂ ಕೃಷ್ಣಪ್ಪ | ಕಾಂಗ್ರೆಸ್ |
| ಬಸವನಗುಡಿ | ಎಲ್ ಎ ಸುಬ್ರಹ್ಮಣ್ಯ ಡಾ. ಎ.ಎಸ್ ಭಾನುಪ್ರಕಾಶ್ | ಬಿಜೆಪಿ ಪಿಪಿಐ |
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications