ಸದಾನಂದಗೌಡ ಅಕ್ರಮ ಕಟ್ಟಡ ವಿವಾದ ಮುಂದೂಡಿಕೆ
ಪತ್ರಕರ್ತೆ ನಾಗಲಕ್ಷಿ ಬಾಯಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೈಲೇಂದ್ರಕುಮರ್ ಮತ್ತು ಕೆಂಪಣ್ಣ ಅವರ ವಿಭಾಗೀಯ ಪೀಠ ಸದಾನಂದಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ,ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಮತ್ತು ಬಿಡಿಎ, ಬಿಬಿಎಂಪಿ ಆಯುಕ್ತ ಪೊಲೀಸ್ ಕಮೀಷನರ್ ಅವರ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಗಡುವು ನೀಡಿ ವಿಚಾರಣೆಯನ್ನು ಮುಂದೂಡಿದರು.
ನಾಗಲಕ್ಷಿ ಬಾಯಿಯವರು ತಮ್ಮ ಅರ್ಜಿಯಲ್ಲಿ ಹೆಚ್ಎಸ್ಆರ್ ಲೇಔಟ್ನಲ್ಲಿ ಡಿ.ವಿ.ಸದಾನಂದಗೌಡ ಅವರು ಜಿ-ಕ್ಯಾಟಗರಿ ಸೈಟ್ ಪಡೆದಿದ್ದರು. ಈ ಜಾಗದ ಪಕ್ಷದಲ್ಲೇ ಶಾಸಕ ಜೀವರಾಜ್ಗೆ ಸೇರಿದ ಜಾಗವೂ ಇದೆ. ವಸತಿ ಉದ್ದೇಶಕ್ಕೆ ಸೈಟ್ ತೆಗೆದುಕೊಂಡು ಕಾನೂನು ಬಾಹಿರವಾಗಿ ಎರಡು ನಿವೇಶನಗಳನ್ನು ಒಂದುಗೂಡಿಸಿ ವಾಣಿಜ್ಯ ಕಟ್ಟಡ ಕಟ್ಟಿದ್ದು ಬಿಡಿಎ ನಿಯಮವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅಲ್ಲದೇ ಈ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬಿಡಿಎಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. (ಒನ್ಇಂಡಿಯಾ ಕನ್ನಡ)