ಟಿಕೆಟ್ ಕೈ ತಪ್ಪಿದರೂ ಸದಾನಂದಗೌಡ್ರು ಬಂಡಾಯ ಏಳದೇ ಸೈಲೆಂಟ್ ಯಾಕೆ ಗೊತ್ತಾ?
ಡಿವಿ ಸದಾನಂದಗೌಡ.. ಹಸನ್ಮುಖಿ ರಾಜಕಾರಣಿ.. ಎಲ್ಲ ಗದ್ದುಗೆಗಳನ್ನು ಸಲೀಸಾಗಿ ಏರಿದವರು. ರಾಜ್ಯದಲ್ಲಿ ಮಂತ್ರಿ ಆಗುವ ಕನಸು ಕಂಡವರು ಧಿಡೀರ್ ಮುಖ್ಯಮಂತ್ರಿ ಆದರು. ರಾಜಕೀಯ ನಡೆಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಡಿವಿಎಸ್, ತಾವು ಸಂಸದರಾಗಿದ್ದ ಬೆಂಗಳೂರು ಉತ್ತರಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಬಂಡಾಯ ಏಳುವ ಸೂಚನೆ ನೀಡಿದ್ದರು.
ಆದರೆ ಆಗಿದ್ದೆ ಬೇರೆ. ಡಿವಿ ಸದಾನಂದಗೌಡರಿಗೆ ಬಂಡಾಯ ಎದ್ದರೆ ಏನಾಗುತ್ತದೆ ಎಂಬ ಬಗ್ಗೆ ಚೆನ್ನಾಗಿ ಅರಿವಿತ್ತು. ಅಲ್ಲದೆ ತುಂಬಾ ಹತ್ತಿರದಿಂದಲೂ ನೋಡಿದ್ದರು. ಇವರು ಸಹದ್ಯೋಗಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಜಗದೀಶ್ ಶೆಟ್ಟರ್, ವಿಧಾನಸಭಾ ಇಲೆಕ್ಷನ್ ವೇಳೆ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಕೈ ಹಿಡಿದರು. ವಿಧಾನಸಭೆಯ ಚುನಾವಣೆಯಲ್ಲಿ ಶೆಟ್ಟರ್, ತಮ್ಮ ಶಿಷ್ಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡರು. ಈ ಪಾಠ ಡಿವಿಎಸ್ ಕಣ್ಣ ಮುಂದೆ ಹಾದು ಹೋದ ಹಾಗೆ ಇತ್ತು. ಹೀಗಾಗಿ ಅವರು ಕಮಲದ ಮನೆಯಿಂದ ಕಾಲು ಕೀಳುವ ಯೋಚನೆಯನ್ನು ಸಹ ಮಾಡಲಿಲ್ಲ.

ಆದರೆ, ಈಗ ಡಿವಿ ಸದಾನಂದಗೌಡ ಬೇರೆ ಪಕ್ಷಕ್ಕೆ ಹೋದಲ್ಲಿ ಅವರಿಗೆ ಸಿಗುವ ಮರ್ಯಾದೆ ಆದರೂ ಏನು. ಒಂದು ಬಾರಿ ಟಿಕೆಟ್ ನೀಡದೇ ಇದಿದ್ದಕ್ಕೆ ಅವರು ಪಕ್ಷವನ್ನ ಬಿಟ್ಟು ಬಿಡುವಷ್ಟು ಕೆಟ್ಟವರಂತೂ ಅಲ್ಲವೆ ಅಲ್ಲ.ಕಟ್ಟಿ ಬೆಳೆಸಿದ ಪಕ್ಷವನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಆಫರ್
ಇನ್ನು ಬಿಜೆಪಿಯಿಂದ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಮಿಸ್ ಆಗುತ್ತಾ ಇದ್ದಂತೆ, ಕಾಂಗ್ರೆಸ್ ಡಿವಿ ಸದಾನಂದ್ ಗೌಡರಿಗೆ ಗಾಳ ಹಾಕಲು ಪ್ಲ್ಯಾನ್ ಮಾಡಿತು. ಆದರೆ ಕಾಂಗ್ರೆಸ್ ಇವರಿಗೆ ಬೇಕಾದ ಕ್ಷೇತ್ರವನ್ನು ನೀಡಲಿಲ್ಲ ಎಂಬ ಸುದ್ದಿ ಇದೆ. ಡಿವಿ ಸದಾನಂದ್ ಗೌಡ ಕೈ ಹಿಡಿಯುವ ಪ್ರಯತ್ನವನ್ನು ಕೈ ಬಿಟ್ಟರು.
ಎಲ್ಲ ನೀಡಿದ್ದ ಪಕ್ಷ
ಬಿಜೆಪಿ ಪಕ್ಷ ಡಿವಿಎಸ್ ಅವರಿಗೆ ಎಲ್ಲವನ್ನೂ ನೀಡಿದೆ. ಕರ್ನಟಕದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಕೇಂದ್ರ ಸರ್ಕಾರದಲ್ಲಿ ಇವರಿಗೆ ರೈಲ್ವೆ ಇಲಾಖೆಯ ಸಚಿವರನ್ನಾಗಿ ಮಾಡಿತ್ತು. ಅಲ್ಲಿ ತಮ್ಮಗೆ ಘನತೆಗೆ ತಕ್ಕ ಕಾರ್ಯವನ್ನು ಮಾಡದೆ ಹೈಕಮಾಂಡ್ ಕೈಂಗಣ್ಣಿಗೆ ಸದಾನಂದಗೌಡ ಗುರಿಯಾದರು. ನಂತರ ಡಿವಿಎಸ್ ಅವರನ್ನು ಸೈಡ್ ಲೈನ್ ಮಾಡುತ್ತಲೆ ಬಂದಂತೆ ಕಾಣುತ್ತಿತ್ತು. ಆಗಲೇ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡದಂತೆ ತಡೆಯಲು ಪ್ಲ್ಯಾನ್ ಮಾಡಿಕೊಂಡಿತ್ತು.

ಇದನ್ನೆಲ್ಲಾ ಮೊದಲೇ ಊಹಿಸಿಬಿಟ್ಟಿದ್ದ ಸದಾನಂದ ಗೌಡ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಮತ್ತೆ ರಾಜನಾಯಕರು ಅವರ ಮನೆಗೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರಮಿಸಿದರು. ಅಲ್ಲಿಂದ ಡಿವಿಎಸ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.
ಒಂದು ವೇಳೆ ಡಿವಿಎಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳಿಗೆ ಹೋದರೆ ಮುಂದಾಗುವ ಆತಂಕದ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಸದಾನಂದಗೌಡ ಬಿಜೆಪಿಯಲ್ಲಿ ಇದ್ದಂತೆ ಕಾಣುತ್ತಿದೆ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ











Click it and Unblock the Notifications