ಟಿಕೆಟ್ ಕೈ ತಪ್ಪಿದರೂ ಸದಾನಂದಗೌಡ್ರು ಬಂಡಾಯ ಏಳದೇ ಸೈಲೆಂಟ್ ಯಾಕೆ ಗೊತ್ತಾ?
ಡಿವಿ ಸದಾನಂದಗೌಡ.. ಹಸನ್ಮುಖಿ ರಾಜಕಾರಣಿ.. ಎಲ್ಲ ಗದ್ದುಗೆಗಳನ್ನು ಸಲೀಸಾಗಿ ಏರಿದವರು. ರಾಜ್ಯದಲ್ಲಿ ಮಂತ್ರಿ ಆಗುವ ಕನಸು ಕಂಡವರು ಧಿಡೀರ್ ಮುಖ್ಯಮಂತ್ರಿ ಆದರು. ರಾಜಕೀಯ ನಡೆಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಡಿವಿಎಸ್, ತಾವು ಸಂಸದರಾಗಿದ್ದ ಬೆಂಗಳೂರು ಉತ್ತರಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಬಂಡಾಯ ಏಳುವ ಸೂಚನೆ ನೀಡಿದ್ದರು.
ಆದರೆ ಆಗಿದ್ದೆ ಬೇರೆ. ಡಿವಿ ಸದಾನಂದಗೌಡರಿಗೆ ಬಂಡಾಯ ಎದ್ದರೆ ಏನಾಗುತ್ತದೆ ಎಂಬ ಬಗ್ಗೆ ಚೆನ್ನಾಗಿ ಅರಿವಿತ್ತು. ಅಲ್ಲದೆ ತುಂಬಾ ಹತ್ತಿರದಿಂದಲೂ ನೋಡಿದ್ದರು. ಇವರು ಸಹದ್ಯೋಗಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಜಗದೀಶ್ ಶೆಟ್ಟರ್, ವಿಧಾನಸಭಾ ಇಲೆಕ್ಷನ್ ವೇಳೆ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಕೈ ಹಿಡಿದರು. ವಿಧಾನಸಭೆಯ ಚುನಾವಣೆಯಲ್ಲಿ ಶೆಟ್ಟರ್, ತಮ್ಮ ಶಿಷ್ಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡರು. ಈ ಪಾಠ ಡಿವಿಎಸ್ ಕಣ್ಣ ಮುಂದೆ ಹಾದು ಹೋದ ಹಾಗೆ ಇತ್ತು. ಹೀಗಾಗಿ ಅವರು ಕಮಲದ ಮನೆಯಿಂದ ಕಾಲು ಕೀಳುವ ಯೋಚನೆಯನ್ನು ಸಹ ಮಾಡಲಿಲ್ಲ.

ಆದರೆ, ಈಗ ಡಿವಿ ಸದಾನಂದಗೌಡ ಬೇರೆ ಪಕ್ಷಕ್ಕೆ ಹೋದಲ್ಲಿ ಅವರಿಗೆ ಸಿಗುವ ಮರ್ಯಾದೆ ಆದರೂ ಏನು. ಒಂದು ಬಾರಿ ಟಿಕೆಟ್ ನೀಡದೇ ಇದಿದ್ದಕ್ಕೆ ಅವರು ಪಕ್ಷವನ್ನ ಬಿಟ್ಟು ಬಿಡುವಷ್ಟು ಕೆಟ್ಟವರಂತೂ ಅಲ್ಲವೆ ಅಲ್ಲ.ಕಟ್ಟಿ ಬೆಳೆಸಿದ ಪಕ್ಷವನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಆಫರ್
ಇನ್ನು ಬಿಜೆಪಿಯಿಂದ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಮಿಸ್ ಆಗುತ್ತಾ ಇದ್ದಂತೆ, ಕಾಂಗ್ರೆಸ್ ಡಿವಿ ಸದಾನಂದ್ ಗೌಡರಿಗೆ ಗಾಳ ಹಾಕಲು ಪ್ಲ್ಯಾನ್ ಮಾಡಿತು. ಆದರೆ ಕಾಂಗ್ರೆಸ್ ಇವರಿಗೆ ಬೇಕಾದ ಕ್ಷೇತ್ರವನ್ನು ನೀಡಲಿಲ್ಲ ಎಂಬ ಸುದ್ದಿ ಇದೆ. ಡಿವಿ ಸದಾನಂದ್ ಗೌಡ ಕೈ ಹಿಡಿಯುವ ಪ್ರಯತ್ನವನ್ನು ಕೈ ಬಿಟ್ಟರು.
ಎಲ್ಲ ನೀಡಿದ್ದ ಪಕ್ಷ
ಬಿಜೆಪಿ ಪಕ್ಷ ಡಿವಿಎಸ್ ಅವರಿಗೆ ಎಲ್ಲವನ್ನೂ ನೀಡಿದೆ. ಕರ್ನಟಕದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಕೇಂದ್ರ ಸರ್ಕಾರದಲ್ಲಿ ಇವರಿಗೆ ರೈಲ್ವೆ ಇಲಾಖೆಯ ಸಚಿವರನ್ನಾಗಿ ಮಾಡಿತ್ತು. ಅಲ್ಲಿ ತಮ್ಮಗೆ ಘನತೆಗೆ ತಕ್ಕ ಕಾರ್ಯವನ್ನು ಮಾಡದೆ ಹೈಕಮಾಂಡ್ ಕೈಂಗಣ್ಣಿಗೆ ಸದಾನಂದಗೌಡ ಗುರಿಯಾದರು. ನಂತರ ಡಿವಿಎಸ್ ಅವರನ್ನು ಸೈಡ್ ಲೈನ್ ಮಾಡುತ್ತಲೆ ಬಂದಂತೆ ಕಾಣುತ್ತಿತ್ತು. ಆಗಲೇ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡದಂತೆ ತಡೆಯಲು ಪ್ಲ್ಯಾನ್ ಮಾಡಿಕೊಂಡಿತ್ತು.

ಇದನ್ನೆಲ್ಲಾ ಮೊದಲೇ ಊಹಿಸಿಬಿಟ್ಟಿದ್ದ ಸದಾನಂದ ಗೌಡ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಮತ್ತೆ ರಾಜನಾಯಕರು ಅವರ ಮನೆಗೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರಮಿಸಿದರು. ಅಲ್ಲಿಂದ ಡಿವಿಎಸ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.
ಒಂದು ವೇಳೆ ಡಿವಿಎಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳಿಗೆ ಹೋದರೆ ಮುಂದಾಗುವ ಆತಂಕದ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಸದಾನಂದಗೌಡ ಬಿಜೆಪಿಯಲ್ಲಿ ಇದ್ದಂತೆ ಕಾಣುತ್ತಿದೆ.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ











Click it and Unblock the Notifications