ಉಗ್ರರಿಗೆ ಬರಾಕ್ ಒಬಾಮಾ ತಣ್ಣನೆಯ ಸಂದೇಶ

ತಾಜ್ ಹೊಟೇಲ್ ಎದುರಿರುವ ಗೇಟ್ ವೇ ಆಫ್ ಇಂಡಿಯಾದ ಎದುರಿಗೆ ಮಾಧ್ಯಮವನ್ನುದ್ದೇಶಿಸಿ ಸರಿಯಾಗಿ ಮಧ್ಯಾಹ್ನ 2.30ಕ್ಕೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಭಾಷಣ ಮಾಡಿದ ಒಬಾಮಾ, 2008ರ ನವೆಂಬರ್ 26ರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಯಾವುದೇ ಮಾತನ್ನು ಹೇಳಲಿಲ್ಲ.
ಉಗ್ರರ ದಾಳಿಗೆ ಅಂದು ಮಡಿದ ವಿವಿಧ ದೇಶಗಳ ನಾಗಕರಿಕನ್ನು, ಜನರನ್ನು ಕಾಪಾಡಲು ಸೆಣಸಿದ ಭದ್ರತಾ ಸಿಬ್ಬಂದಿಗಳನ್ನು, ಹಲವರ ಪ್ರಾಣ ಉಳಿಸಿದ ಹೀರೋಗಳನ್ನು, ಮಡಿದವರ ಕುಟುಂಬದವರನ್ನು, ಹೊಟೇಲ್ ಸಿಬ್ಬಂದಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಬರಾಕ್ ಒಬಾಮಾ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರತ ಮತ್ತು ಅಮೆರಿಕ ದೇಶಗಳೆರಡು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದಷ್ಟೇ ಹೇಳಿದರು.
ಉಗ್ರರು ಜನರನ್ನು ಹತ್ಯೆಗೈದಿದ್ದನ್ನು, ತಾಜ್ ಹೊಟೇಲಿನ ಕಿಟಕಿಗೆ ಹತ್ತಿಕೊಂಡ ಬೆಂಕಿ ಆ ರಾತ್ರಿಯ ಆಗಸವನ್ನು ಬೆಳಗಿದ್ದನ್ನು ನಾವು ಅಮೆರಿಕಾದವರೆಲ್ಲ ನೋಡಿದ್ದೇವೆ. ನಾವೆಲ್ಲ ದೇವರ ಮಕ್ಕಳು, ಎರಡೂ ರಾಷ್ಟ್ರಗಳ ನಾಗರಿಕರಿಗೆ ಸುಭದ್ರತೆ ಒದಗಿಸಲು ನಾವಿಬ್ಬರೂ ಸಹಕಾರ ಒದಗಿಸಬೇಕಿದೆ. ಇದು ಸ್ಪಷ್ಟ ನಿರ್ಧಾರದಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಅವರಿಗೆ ನೀಡಿದ ಭವ್ಯ ಸ್ವಾಗತ, ಅಭೂತಪೂರ್ವ ಭದ್ರತೆ, ಎರಡು ವರ್ಷಗಳ ಹಿಂದಿನ ದಾಳಿಯ ಆಘಾತದಿಂದ ಹೊರಬಂದಿದ್ದನ್ನು ಶ್ಲಾಘಿಸಿದ ಒಬಾಮಾ, ಮುಂಬೈ ನಗರ ಒಂದು ಡೈನಾಮಿಕ್ ನಗರ, ಇದು ದೃಢವಿಶ್ವಾಸ, ಆಶಾವದ ಮತ್ತು ಶಕ್ತಿಯ ಸಂಕೇತ ಎಂದು ಹೊಗಳಿದರು. ಭಾಷಣಕ್ಕೂ ಮೊದಲು ಮುಂಬೈ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ, ಎಡಚರಾಗಿರುವ ಒಬಾಮಾ ಗೆಸ್ಟ್ ಬುಕ್ಕಿನಲ್ಲಿ ಸಹಿ ಮಾಡಿದರು. ಬರಾಕ್ ಒಬಾಮಾ ಮತ್ತು ಮಿಷೆಲ್ ಒಬಾಮಾರನ್ನು ತಾಜ್ ಹೊಟೇಲಿನೆದುರಿಗೆ ತಾಜ್ ಗ್ರೂಪ್ ನ ಚೇರ್ಮನ್ ರತನ್ ಟಾಟಾ ಬರಮಾಡಿಕೊಂಡರು.
English news:
American President Barack Obama said that US and India stand together in the fight against global terror. The perpetrators of the 26/11 attacks should be punished. He also called the Hotel Taj, a major site of the 26/11 attacks, a symbol of the strength and resilience of the Indian people.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications