ದಲಿತರು ಇಲ್ಲಿ ಬ್ರಾಹ್ಮಣರಾಗುತ್ತಾರೆ!
ಉಜ್ಜನಿ ಗ್ರಾಮದ ಜೌಡೇಶ್ವರಿ ಜಾತ್ರೆಗಾಗಿ ಕಂಬ ಹಾಕಲಾಗಿದ್ದು, ಕಂಬ ಹಾಕುತ್ತಿದ್ದಂತೆಯೇ ಆರು ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. ದಲಿತರು ಬ್ರಾಹ್ಮಣರಂತೆಯೇ ಜನಿವಾರ ಧರಿಸಿ ಬ್ರಾಹ್ಮಣರಂತೆ ಸಂಸ್ಕಾರ, ಕಟ್ಟು ಪಾಡುಗಳನ್ನು ಪಾಲಿಸಲು ಆರಂಭಿಸುತ್ತಾರೆ. ಈ ಆಚರಣೆ ಉಜ್ಜಿನಿ ಗ್ರಾಮದಲ್ಲಿ ಸುಮಾರು 8 ಶತಮಾನಗಳಿಂದಲೂ ಮುಂದುವರೆಸಿಕೊಂಡು ಬಂದಿದೆ. 21 ದಿನಗಳ ಕಾಲ ದಲಿತರ ಜನಾಂಗದ ಆರು ಮಂದಿ ಬ್ರಾಹ್ಮಣರಾಗಿರುತ್ತಾರೆ.
ಈ ಆರು ಜನಿವಾರ ಬ್ರಾಹ್ಮಣರು ಹೆಬ್ಬಾರಮ್ಮನಿಗೆ ಪೂಜೆ ಸಲ್ಲಿಸಿದ ನಂತರ ಇವರು ನೀಡಿದ ಪ್ರಸಾದವನ್ನು ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು, ಸ್ವೀಕರಿಸುತ್ತಾರೆ. ದಲಿತ ಜನಾಂಗ ಬ್ರಾಹ್ಮಣರಾಗಿ ಪರಿವರ್ತನೆಯಾಗದಿದ್ದರೆ ಈ ಗ್ರಾಮದಲ್ಲಿ ಚೌಡೇಶ್ವರಿ ಜಾತ್ರೆ ನಡೆಯುವುದಿಲ್ಲ.
ಹಿನ್ನೆಲೆ:
800
ವರ್ಷಗಳ
ಹಿಂದೆ
ಉಜ್ಜಿನಿ
ಗ್ರಾಮದ
ಬ್ರಾಹ್ಮಣ
ಯುವತಿಯೊಬ್ಬಳನ್ನು
ದಲಿತ
ಯುವಕ
ಬ್ರಾಹ್ಮಣನೆಂದು
ಸುಳ್ಳು
ಹೇಳಿ
ಮದುವೆಯಾಗಿರುತ್ತಾನೆ.
ಇವರ
ದಾಂಪತ್ಯಕ್ಕೆ
ಐದು
ಮಂದಿ
ಮಕ್ಕಳು
ಜನಿಸಿರುತ್ತಾರೆ.
ಆದರೆ,
ಕೊನೆಗೊಂದು
ದಿನ
ಯುವತಿಗೆ
ತಾನು
ಮದುವೆಯಾಗಿರುವುದು
ದಲಿತ
ಯುವಕನನ್ನು
ಎಂಬ
ಸತ್ಯ
ತಿಳಿಯುತ್ತಿದ್ದಂತೆಯೇ
ಮನನೊಂದು
ಅಗ್ನಿ
ಪ್ರವೇಶ
ಮಾಡುವ
ನಿರ್ಧಾರ
ಮಾಡುತ್ತಾಳೆ.
ಆಗ ಮಕ್ಕಳು ಮತ್ತು ಗಂಡನ ಮನವಿಯಿಂದಾಗಿ ತನ್ನ ಐದು ಮಂದಿ ಮಕ್ಕಳು ಜಾತ್ರೆ ಸಂದರ್ಭದಲ್ಲಿ ಬ್ರಾಹ್ಮಣರಾಗಿ ಪರಿವರ್ತನೆ ಹೊಂದಿ ನೀತಿ, ನಿಯಮ ಪಾಲಿಸಬೇಕೆಂದು ಶಾಪ ಕೊಡುತ್ತಾಳೆ. ಇದರಿಂದಾಗಿ 6 ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. 6 ಮಂದಿ ದಲಿತರು ಹೆಬ್ಬಾರಮ್ಮನ ಪ್ರತೀಕವನ್ನು ಹೊತ್ತು ಅಗ್ನಿ ಕುಂಡದ ಮೇಲೆ ನಡೆಯುತ್ತಾರೆ.