ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ : ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ

By Staff
|
Google Oneindia Kannada News

BR Ambedkar
ಹುಬ್ಬಳ್ಳಿ, ನ. 24 : ನಾಮಫಲಕ ತೆರವು ಗಲಭೆ ಹಳೇಹುಬ್ಬಳ್ಳಿಯ ಹೆಗ್ಗೇರಿ ಮೈದಾನದಲ್ಲಿ ಅಳವಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಎಂಬ ನಾಮ ಫಲಕವನ್ನು ಭಾನುವಾರ ರಾತ್ರೋರಾತ್ರಿ ತೆರವುಗೊಳಿಸಿದ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ದಲಿತ ಮುಖಂಡರು ಹಾಗೂ ಸಮತಾ ಸೇನಾದ ಕಾರ್ಯ ಕರ್ತರು ರಸ್ತೆ ತಡೆ ನಡೆಸಿ ಕಲ್ಲು ತೂರಾಟ ನಡೆಸಿದ್ದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಸುಮಾರು ಮೂರು ತಾಸು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಸಾರಿಗೆ ಸಂಸ್ಥೆಯ 8 ಬಸ್, 3 ಲಾರಿ, 2 ಜೀಪುಗಳ ಗಾಜುಗಳು ಒಡೆದಿದ್ದು, ರಸ್ತೆ ಪಕ್ಕ ನಿಂತಿದ್ದ ಆರಕ್ಕೂ ಹೆಚ್ಚು ಬಸ್‌ಗಳ ಗಾಲಿಯ ಗಾಳಿ ತೆಗೆದಿದ್ದಾರೆ. ರಸ್ತೆ ತಡೆಯಿಂದ ವಾಹನ ಸಂಚಾರ ಸ್ಥಗಿತಗೊಂಡು ಕಾರವಾರ ರಸ್ತೆಯಲ್ಲಿ ಎರಡ್ಮೂರು ಕಿ.ಮೀ. ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕಾರವಾರ ರಸ್ತೆ ಮೂಲಕ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಯಾರೊಬ್ಬರ ಗಮನಕ್ಕೂ ಬಾರದಂತೆ ನಾಮಫಲಕ ತೆರವುಗೊಳಿಸಿದ್ದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕೊನೆಗೆ ದಲಿತ ಮುಖಂಡರ ತೀವ್ರ ಪ್ರತಿಭಟನೆಗೆ ಮಣಿದು, ಮಧ್ಯಾಹ್ನ 1.30ರ ಸುಮಾರಿಗೆ ಮೊದಲಿದ್ದ ಜಾಗದಲ್ಲಿಯೇ ಅಳವಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X