ಧಾರವಾಡ ಕನ್ನಡದಾಗ ಏನಿಲ್ಲ?

ಅ
ಅಗದೀ, ಅಗದಿ = ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ.
ಅಡಸಳ, ಬಡಸಳ = ಅವ್ಯವಸ್ಥ
ಅಂವ = ಆತ. ಉದಾ: ಅಂವ ಇದ್ದಾನಲ್ಲ ಮಹಾ ಅರಿವುಗೇಡಿ ಅದಾನ.
ಅಚ್ಚಿಮೊನ್ನೆ = ಮೊನ್ನೆಯ ಹಿಂದಿನ ದಿನ (ಆಚೆಮೊನ್ನೆ ). ಉದಾ: ಅಚ್ಚಿಮೊನ್ನೆ ನಿತ್ಯಾನಂದಗ ಜಾಮೀನು ಸಿಕ್ಕಿತು.
ಅನಕಾತ = ಸದ್ಯಕ್ಕೆ. ಉದಾ: ಮ್ವಾಡೆಲ್ಲಾ ಚೆದುರಿ ಹೋದು ಅನಕಾತ ಮಳಿ ಬರೋಹಂಗ ಕಾಣಂಗಿಲ್ಲ.
ಅನಾತನಕ = ಅಲ್ಲಿವರೆಗೂ
ಅರಿಬಿ = ಬಟ್ಟೆ. ಉದಾ: ಹಳೇ ಅರಬಿ(ವಿ) ಹೊಸಾ ಭಾಂಡೀ.
ಅರಬಟ್ = ಬಲು ಹುರುಪು
ಅಂಜು = ಹೆದರು
ಅಡಕಲ ಖೋಲಿ = ಸ್ಟೋರ್ ರೂಂ
ಅಗಳಿ = ಬಾಗಿಲು ಮುಚ್ಚಿದ ನಂತರ ಹಾಕುವ ತಡೆ
ಅಗಸಿ ಬಾಗಿಲು = ಊರ ದ್ವಾರ ಬಾಗಿಲು. ಉದಾ: ಊರ ಕೊಳ್ಳಿ ಹೊಡದ ಮ್ಯಾಲ ಅಗಸಿ ಬಾಗಲಾ ಹಾಕಿದರೇನು ಬಂತು?
ಅಂಗಾರ = ಗುಡಿಯಲ್ಲಿ ಕೊಡುವ ಭಸ್ಮ
ಅತ್ಯಾ = ಅತ್ತೆ. ಉದಾ: ಮೂಡಲ ಮನೆ ಧಾರಾವಾಹಿದಾಗ ಅತ್ಯಾ ಹೆಸರು ಕೇಳಿರಬೇಕಲ್ಲ?
ಅಂಗಾತ = ಮುಖ ಮೇಲೆ ಮಾಡಿ ಬೆನ್ನು ಕೆಳಗೆ ಇರುವಂತೆ
ಅಂಗಳ = ಮನೆ ಮುಂದಿನ ಅಂಗಣ
ಅಂಜಪುಕ್ಕಳಿ = ಹೆದರುಪುಕ್ಕಲ
ಅಡ್ಡಮಳಿ = ಅಕಾಲ ಮಳೆ. ಉದಾ: ಅವನೌನ ಅಡ್ಡಮಳಿ ಹೊಡದ ಬೆಳಿ ಎಲ್ಲಾ ಹಾಳಾಗ್ಯಾವ.
ಅಚಾನಕ = ಅನೀರಿಕ್ಷಿತ
ಅಟ್ಟ = ಮನೆಯಲ್ಲಿ ಸಾಮಾನುಗಳನ್ನು ಇಡಲು ಛಾವಣಿ ಮೇಲೆ ಇರುವ ಅಂತಸ್ತು.. ಉದಾ: ಅಟ್ಟದ ಮ್ಯಾಲ ಮಂಗ್ಯಾ ಬಂದಾವ ಓಡಿಸಹೋಗ್ರಿ.
ಅಡ್ಡೆಸ್ರು, ಅಡ್ದಹೆಸರು = ಮನೆತನದ ಹೆಸರು
ಅತ್ತರ್ = ಸುಗಂಧ ದ್ರವ್ಯ. ಉದಾ: ಮದವಿ ಗಂಡು ಬಂದ ಅತ್ತರ ತೊಗೊಂಡು ಬರ್ರಿ.
ಅಳುಬುರಕ = ಸದಾ ಅಳುತ್ತಿರುವವ
ಅಳುಬುರುಕಿ = ಸದಾ ಅಳುತ್ತಿರುವವಳು
ಅರಚು = ಕೂಗಾಡು
ಅದಾನ = ಇದ್ದಾನೆ
ಅದಾರ = ಇದ್ದಾರೆ. ಉದಾ: ಸಾಹೇಬ್ರು ಅದಾರೋ ಇಸ್ಪೇಟಾಡಾಕ ಹೋಗ್ಯಾರೋ?
ಅಳ್ಳು = ಪಾಪ್-ಕಾರ್ನ್
ಆ
ಆಕಿ = ಅವಳು. ಉದಾ: ಏ ಇವನ, ನಿಮ್ಮಾಕಿ ಗುಡಿಗೆ ಹೋಗ್ಯಾಳೇನು?
ಆಜೂಬಾಜು = ಅಕ್ಕಪಕ್ಕ. ಉದಾ: ಪರೀಕ್ಷಾಕ್ಕ ಕೂತಾಗ ಆಜೂಬಾಜೂ ನೋಡಬ್ಯಾಡ.
ಆತು = ಆಯಿತು. ಉದಾ: ಆತ ಬಿಡಪಾ, ಇವತ್ತಿಗೆ ನಂದೂ ನಿಂದೂ ದೋಸ್ತಿ ಮುಗೀತು.
ಆಯಿ = ಅಜ್ಜಿ.
ಅಂಬರಾ, ಅಂಬಲಿ = ಮಜ್ಜಿಗೆಗೆ ಜೋಳದ ಹಿಟ್ಟು ಕಲಸಿ, ಬಿಸಿ ಮಾಡಿ ಕೊತ್ತಂಬರಿ ಹಾಕಿ ಮಾಡಿದ ಗಂಜಿ.
ಆಕಳು = ಹಸು, ಗೋಮಾತೆ (ಹಸು ಎನ್ನುವ ಶಬ್ದ ಬಳಕೆಯಲ್ಲಿ ಇಲ್ಲ)
ಆಣಿ = ಆಣೆ. ಉದಾ: ಆಣಿ ಮಾಡಿ ಹೇಳು ಕಿಶೇದಾಗಿಂತ ಪೈಸಿ ಕದ್ದಿಲ್ಲಂತ.
ಆನಿ = ಆನೆ. ಉದಾ: ಅಡಕಿಗೆ ಹೋದ ಮಾನ ಆನಿ ಕೊಟ್ರೂ ಬರಂಗಿಲ್ಲ.
ಇ
ಇಯತ್ತೆ = ತರಗತಿ("ಉದಾ: ಬಿನ್ನೆತ್ತೆ(ಬಾಲವಾಡಿ), ಐದನೆತ್ತೆ , ಹತ್ತನೆತ್ತೆ)
ಇಣಚಿ = ಅಳಿಲು.
ಇನಾಂದಾರ = ಜಮೀನ್ದಾರ.
ಈ
ಈರ್ಷೆ = ಹಗೆ, ದ್ವೇಷ. ಉದಾ: ಯಾರ ಈರ್ಷಾ ಕಟಗೊಂಡು ಏನ ಆಗಬೇಕಾಗೇದ ಹೇಳು?
ಉ
ಉಳ್ಳಾಗಡ್ಡಿ = ಈರುಳ್ಳಿ(ಈರುಳ್ಳಿ ಶಬ್ದ ಬಳಕೆಯಲ್ಲಿ ಇಲ್ಲ). ಉದಾ: ಉಳ್ಳಾಗಡ್ಯಂತೇಳಿ ಕುಡಕಾ ತತ್ತಿ ತಿನಿಸಿದಲ್ಯೋ!
ಉತ್ತತ್ತಿ = ಒಣ ಖರ್ಜೂರ. ಉದಾ: ಬಂದ ನೋಡು ಉತ್ತತ್ತಿ ಗಿಡ್ಡ (ತಮಾಷೆಗೆ)
ಉಂಡಿ = ಲಾಡು.
ಉಂಬೋದು = ಉಣ್ಣುವುದು. ಉದಾ: ಉಂಬೋದಿಲ್ಲ, ತಿಂಬೋದಿಲ್ಲ ಹೆಂಗ ಸಣಕಲ ಕಡ್ಡಿ ಆಗ್ಯಾನೋಡು.
ಉಡಾಳ = ತುಂಟ, ಪೋಕರಿ. ಉದಾ: ಮಗಾ ಏನ ಉಡಾಳ ಆಗ್ಯಾನಂತೀ, ಹಿಡ್ಯೋದ ಆಗವಲ್ತು.
ಉಡಗೋಲು = ಪೊರಕೆ, ಕಸಬರಿಗೆ
ಉಸುಕು = ಮರಳು.
ಉಸಾಬರಿ = ಜವಾಬ್ದಾರಿ. ಉದಾ: ಯಾವನಿಗೆ ಬೇಕಾಗೇದ ಅವನ ಉಸಾಬರಿ.
ಉಡಿ = ಮಡಿಲು. ಉದಾ: ಮನಿಗೆ ಹೆಣಮಗಳು ಬಂದಾಳ, ಉಡಿ ತುಂಬ್ರಿ.
ಉಡದಾರ = ಸೊಂಟಕ್ಕೆ ಕಟ್ಟೊ ದಾರ.
ಉಣ್ಣು = ತಿನ್ನು (ಬೆಂಗಳೂರಿನಲ್ಲಿ ಈ ಶಬ್ದ ತನ್ನ ಮೌಲ್ಯ ಕಳೆದುಕೊಂಡಿದೆ). ಉದಾ: ಬ್ಯಾಡಬಿಡ್ರೀಯಪ್ಪಾ!
ಉದ್ರಿ, ಉದ್ದರಿ = ಅಂಗಡಿಯಲ್ಲಿ ಸಾಲ.
ಉದ್ರಿ ಸಲಹೆ = ಬಿಟ್ಟಿ ಸಲಹೆ-ಉಪದೇಶ. ಉದಾ: ಉದ್ರಿ ಸಲಹೆ ಕೊಡಾಕ ಅಷ್ಟ ಬರೋಬ್ಬರಿ ಅದಾನ ಅವಾ.
ಉದುರು ಅನ್ನ = ಒಂದಕ್ಕೊಂದು ಅಗಳು ಅಂಟಿಕೊಳ್ಳದೆ ಇರುವ ಅನ್ನ.
ಉದ್ದು = ಉದ್ದಿನ ಬೇಳೆ (ಬೈಗಳಿನಲ್ಲಿ ಉದ್ದು ಹರಿತಾ ಇದ್ದಿ ಏನಲೇ? ಅಂತಾ ಬೈದ್ರೆ ಖಾಲಿ ಬಿದ್ದಿದಿಯಾ ಏನು? ಅಂತಾ ಅರ್ಥ)
ಉರೋಲು = ಸೌದೆ (ಸೌದೆ ಶಬ್ದ ಬಳಕೆಯಲ್ಲಿ ಇಲ್ಲ)
ಊ
ಊದಣಿಕೆ, ಊದವಣಿಕೆ, ಊದನಳಿಕೆ = ಒಲೆಯಲ್ಲಿ ಕೆಂಡ ಊದಲೂ ಬಳಸುವ ನಳಿಕೆ, ಊದುಕೊಳವೆ
ಊದ್ದಿನಕಡ್ಡಿ, ಊದಕಡ್ಡಿ = ಅಗರಬತ್ತಿ. ಉದಾ: ಯಾವಲೇ ಅವ ಹೂಸ ಬಿಟ್ಟಾಂವ. ಊದಿನಕಡ್ಡಿ ಹಚ್ರಿ.
ಎ
ಎರಿನೆಲ = ಬಿತ್ತಲು ತಯಾರಾದ ನೆಲ.
ಎಲಿ = ಎಲೆ. ಉದಾ: ಊಟಕ್ಕ ತಡಾ ಆಗೇತಿ ಎಲಿ ಹಾಕ್ರ್ಯಪಾ.
ಎಸಿ = ಎಸೆ.
ಎಳಿ = ಎಳೆ. ಉದಾ: ಬಾಗಿಲ ಜೋರಾಗಿ ಎಳಿ.
ಎಬಡ = ದಡ್ಡ. ಉದಾ: ಏನ್ ಎಬಡ ಅದಾನಲೇ ಅವಾ.
ಎದಿ = ಎದೆ. ಉದಾ: ಇದ್ದದ್ದಿಂಗ ಹೇಳಿದ್ರ ಎದ್ದು ಬಂದು ಎದಿಗೆ ಒದ್ದಂಗಾತು.
ಎಸರು = ಕುದಿನೀರು. ಉದಾ: ಸ್ನಾನಕ್ಕ ನೀರು ಎಸರು ಆಗ್ಯಾವಿಲ್ಲಪಾ?
ಎಳಕ್ = ಎಳೆಯದಾದ.
ಏ
ಏಕದಂ, ಏಗದಂ = ಇದ್ದಕ್ಕಿದ್ದಂತೆ, ಒಮ್ಮಿಂದೊಮ್ಮಲೆ. ಉದಾ: ಹೀಂಗ ಹೊಂಟಿನ್ನಿ, ಏಕದಂ ಅಡ್ಡಬಂದ ನೋಡ.
ಐ
ಐತಿ = ಇದೆ. ಉದಾ : ಮಾವಾ ನಿನ್ನ ಮಗಳ ಹತ್ತಿರ ಏನೈತಿ?
ಒ
ಒಲ್ಲೆ = ಬೇಡ. ಉದಾ : ದೇವರ ಪ್ರಸಾದ ಒಲ್ಲೆ ಅನಬಾರದು.
ಒದರು = ಕೂಗಾಡು. ಉದಾ : ಹಿಂಗ್ಯಾಕ ಕಿವ್ಯಾಗ ಒದರಾಕತ್ತೀ?
ಒರಸು = ಬಳೆ, ಸ್ವಚ್ಚಗೊಳಿಸು. (ಇದಕ್ಕೆ 'ಸಾಪ ಮಾಡು' ಅನ್ನುವ ಬಳಕೆಯೂ ಇದೆ. ಉದಾ : ಏ ಟೇಬಲ್ ಸಾಪ ಮಾಡೋ ಮಾಣಿ.)
ಒಳ್ಳೆಣ್ಣೆ = ಅಡಿಗೆಗೆ ಉಪಯೋಗಿಸುವ ಎಣ್ಣೆ.
ಓ
ಓಣಿ = ಬಡಾವಣೆಯ ರಸ್ತೆ , ಗಲ್ಲಿ, ವಠಾರ. ಉದಾ : ಕೊಟಾರಗೇರಿ ಓಣಿದಾಗ ರಂಗಿನಾಟ ನಡದೈತಿ.
ಗಮನಕ್ಕೆ ಬಂದಿರುವ ಪದಗಳನ್ನು ಇಲ್ಲಿ ನೀಡಲಾಗಿದೆ. ಬಿಟ್ಟು ಹೋದ ಪದಗಳನ್ನು ಓದುಗರು ತುಂಬಬಹುದು. ಜೊತೆಗೆ ಇತರ ಜಿಲ್ಲೆಗಳಲ್ಲಿ ಬಳಸಲಾಗುವ ವಿಶಿಷ್ಟ ಪದಬಳಕೆಯ ಬಗ್ಗೆಯೂ ಓದುಗರು ಬೆಳಕು ಚೆಲ್ಲಬಹುದು, ಲೇಖನ ಬರೆಯುವ ಮೂಲಕ. 'ಕ'ದಿಂದ 'ಹ'ವರೆಗಿನ ಪದಗಳು ಮತ್ತು ಅರ್ಥಗಳಿಗಾಗಿ ನಿರೀಕ್ಷಿಸಿ.
ಮುಂದಿನ ಪದಸಂಗ್ರಹ : ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು »
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications