ಆರ್ಎಸ್ಎಸ್ ಕಚೇರಿ ಸ್ಫೋಟಿಸುವ ಬೆದರಿಕೆ: ದೂರು, ಬಂಧನ
ಲಕ್ನೋ, ಜೂ. 7: ಲಕ್ನೋ ಮತ್ತು ಉನ್ನಾವೊದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಚೇರಿಗಳನ್ನು ಸ್ಫೋಟಿಸುವ ಬೆದರಿಕೆಯೊಡ್ಡಿ ವಾಟ್ಸಾಪ್ ಸಂದೇಶ ಬಂದ ಒಂದು ದಿನದ ಬಳಿಕ ಲಕ್ನೋ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಧಾರೆ.
ಸೋಮವಾರ ರಾತ್ರಿ 8 ಗಂಟೆಗೆ ವಾಟ್ಸಾಪ್ನಲ್ಲಿ ಲಕ್ನೋ ಮತ್ತು ಉನ್ನಾವ್ನಲ್ಲಿರುವ ಆರ್ಎಸ್ಎಸ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಈ ಬಗ್ಗೆ ಮಡಿಯಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಹಚ್ಚಲಾಗುವುದು ಎಂದು ಲಕ್ನೋ ಪೊಲೀಸರು ತಿಳಿಸಿದ್ದರು.
ನಾನು ಮೊದಲಿಂದಲೂ ಆರ್ಎಸ್ಎಸ್ ವಿರೋಧಿ: ಸಿದ್ದರಾಮಯ್ಯ
ಲಕ್ನೋ ಮತ್ತು ಉನ್ನಾವೋದಲ್ಲಿನ ಆರ್ಎಸ್ಎಸ್ ಕಚೇರಿಗೆ ಬಾಂಬ್ ಬೆದರಿಕೆಯ ಸಂಬಂಧ ಮಡಿಯಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಆರ್ಎಸ್ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ಸಂದೇಶ ರವಾನಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಮಾಡಲಾಗುವುದು ಎಂದು ಲಕ್ನೋ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡಿನ ಪುದುಕುಡಿಯಲ್ಲಿ ಉತ್ತರಪ್ರದೇಶ ಮತ್ತು ಕರ್ನಾಟಕದ 6 ಆರ್ಎಸ್ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಎರಡು ಮತ್ತು ಕರ್ನಾಟಕದ ನಾಲ್ಕು ಸೇರಿದಂತೆ ಕನಿಷ್ಠ ಆರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಚೇರಿಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ತಮಿಳುನಾಡಿನ ಪುದುಕುಡಿಯಲ್ಲಿ ಬಂಧಿಸಲಾಗಿದೆ. ವ್ಯಕ್ತಿಯನ್ನು ರಾಜ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
Raj Mohammad, the man who had threatened to blow up RSS offices at six locations, including two in Uttar Pradesh, detained in Pudukudi, Tamil Nadu. pic.twitter.com/vsKkz0eZCD
— ANI UP/Uttarakhand (@ANINewsUP) June 7, 2022
ಪ್ರಮುಖವಾಗಿ ಲಕ್ನೋ ಮತ್ತು ಉನ್ನಾವೊದಲ್ಲಿನ ಆರ್ಎಸ್ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆಯ ವಾಟ್ಸಾಪ್ ಸಂದೇಶ ಸೋಮವಾರ ತಡರಾತ್ರಿ ಬಂದಿತ್ತು. ಈ ಸಂಬಂಧ ಲಕ್ನೋ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದರು. ಸೋಮವಾರ ರಾತ್ರಿ 8 ಗಂಟೆಗೆ ವಾಟ್ಸಾಪ್ನಲ್ಲಿ ಲಕ್ನೋ ಮತ್ತು ಉನ್ನಾವ್ನಲ್ಲಿರುವ ಆರ್ಎಸ್ಎಸ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಈ ಬಗ್ಗೆ ಮಡಿಯಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಹಚ್ಚಲಾಗುವುದು ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೋಮು ಸೌಹಾರ್ದತೆಗಾಗಿ ಕರೆ ನೀಡಿರುವ ಸಂದರ್ಭದಲ್ಲೇ ಈ ಬೆದರಿಕೆ ಬಂದಿದೆ. ನಾಗ್ಪುರದಲ್ಲಿ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗದ (ಅಧಿಕಾರಿಗಳ ತರಬೇತಿ ಶಿಬಿರ) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆರ್ಎಸ್ಎಸ್ ಮೋಹನ್ ಭಾಗವತ್, ಮುಸ್ಲಿಮರು ತಮ್ಮ ಸ್ವಂತ ಪೂರ್ವಜರ ವಂಶಸ್ಥರು ಮತ್ತು ರಕ್ತಸಂಬಂಧದಿಂದ ತಮ್ಮ ಸಹೋದರರು ಎಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು ಎಂದು ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)