Summer Vacation: ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ; ಹರಿಕೃಷ್ಣ ಹೊಳ್ಳ ಬರಹ
ಈ ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ , ಮಾನಸಿಕ ಆರೋಗ್ಯ ಇತ್ಯಾದಿಗಳ ಬಗ್ಗೆ ಟಿವಿಯಲ್ಲಿ , ಪೇಪರಿನಲ್ಲಿ , ವಾಟ್ಸಪ್ಪು ಮೊದಲಾದ ಜಾಲ ತಾಣಗಳಲ್ಲಿ ತಜ್ಞರು ಎಂದು ಕರೆಸಿಕೊಂಡವರು ಹಾಕುವ ಲೇಖನಗಳನ್ನು ಓದಿ ಅದೆಷ್ಟೋ ತಂದೆ ತಾಯಿಯರಿಗೆ ತಲೆ ಕೆಟ್ಟುಹೋಗಿದೆ ಪಾಪ. ಯಾರೂ ಕೂಡಾ ಈ ಕುರಿತು ಅತಿಯಾಗಿ ಚಿಂತಿಸಬೇಕಾದ ಅಗತ್ಯ ಇಲ್ಲ. ಇದು ಆ ಮಕ್ಕಳಿಗೆ ರಜೆಯ ಸಮಯ. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ. ಹೀಗಾಗಿ ರಜೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಕೂಡಾ ಮನೆಯಲ್ಲೇ ಇರಲಿ. ಅವರಷ್ಟಕ್ಕೆ ಅವರನ್ನು ಆರಾಮಾಗಿ ಇರಲು ಬಿಡಿ.
ಈ ರಜಾ ಸಮಯದಲ್ಲಿಯಾದರೂ ನೀವು ತಂದೆ ತಾಯಿಯರು ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಿರಿ. ನಿಮ್ಮ ಮಕ್ಕಳಿಗೆ ಮನಸ್ಸಿದ್ದರೆ ಅವರನ್ನು ನಿಮ್ಮ ಜೊತೆ ಕೆಲಸಕ್ಕೆ ಕರೆದುಕೊಂಡು ಹೋಗಿ. ಅವರು ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿ. ಅಥವಾ ಈ ರಜೆಯಲ್ಲಿ ಮಕ್ಕಳು ಅವರಾಗಿಯೇ ಬೇರೆ ಏನಾದರೂ ಕೆಲಸ ಮಾಡಿ ಸಂಪಾದಿಸಲು ಬಯಸಿದರೆ ಅದಕ್ಕೆ ಅನುವು ಮಾಡಿಕೊಡಿ. ಬೇಡ ಅನ್ನಬೇಡಿ. ಅದರಿಂದ ಅವರಿಗೂ ಜೀವನಾನುಭವ ಸಿಗುತ್ತದೆ.

ಹಲವು ವಿದ್ಯಾರ್ಥಿಗಳು ಈ ಹಿಂದೆ ರಜೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮನೆಯಲ್ಲಿ ಇದ್ದುಕೊಂಡೇ ಕಂಪ್ಯೂಟರ್ ಕಲಿತವರಿದ್ದಾರೆ , ಹೊಲಿಗೆ ಕಲಿತವರಿದ್ದಾರೆ , ಯಕ್ಷಗಾನ ಕಲಿತವರಿದ್ದಾರೆ. ಸಾಧ್ಯವಾದರೆ ನೀವೇ ನಿಮ್ಮ ಮಕ್ಕಳಿಗೆ ಇಂತಹ ಕೌಶಲ್ಯಗಳ ತರಬೇತಿ ಕೊಡಿಸಿ, ನೀವೇ ಅವರಿಗೆ ಯಾವುದಾದರೂ ಕೆಲಸಗಳನ್ನು ಹೇಳಿಕೊಟ್ಟು ಭವಿಷ್ಯದಲ್ಲಿ ಅವರನ್ನು ಸ್ವಾವಲಂಬಿಗಳಾಗುವಂತೆ ಮಾಡಿ.
ಮನೆಯಲ್ಲೇ ಇದ್ದರೆ ತಂಟೆ ಮಾಡ್ತಾರೆ ಅಂದುಕೊಂಡು ಒತ್ತಾಯಪೂರ್ವಕವಾಗಿ ಅವರನ್ನು ಯಾವ್ಯಾವುದೋ ಶಿಬಿರಗಳಿಗೆ ದೂಡಿ ಬರಬೇಡಿ. ಮನೆಯಲ್ಲೇ ಇದ್ದು ತಂಟೆ ಮಾಡಿದರೆ ಮಾಡಲಿ. ಮಕ್ಕಳು ತುಂಟಾಟ ಮಾಡದೇ ಇನ್ಯಾರು ಮಾಡೋದು? ಅವರ ತುಂಟಾಟ ನೋಡೋದಕ್ಕೂ ಭಾಗ್ಯ ಬೇಕು ಎಂಬುದಾಗಿ ತಿಳಿಯಿರಿ.
ಮಕ್ಕಳು ಅಜ್ಜಿಯ ಮನೆಗೋ ಅಜ್ಜನ ಮನೆಗೋ ಅಥವಾ ಇನ್ಯಾರಾದರೂ ನೆಂಟರು , ಇಷ್ಟರು , ಸಂಬಂಧಿಕರ ಮನೆಗಳಿಗೆ ಹೋಗಲು ಬಯಸಿದರೆ ಕಳುಹಿಸಿಕೊಡಿ , ಒಂದೆರಡು ದಿನ ಇದ್ದು ಬರಲಿ.
ಪುನಃ ಶಾಲೆ ಪ್ರಾರಂಭ ಆದೊಡನೆ ಅವರು ತಾವಾಗಿಯೇ ಶಾಲೆಗೆ ಹೋಗ್ತಾರೆ. ಅಲ್ಲಿಯ ತನಕ ಅವರನ್ನು ಅವರಷ್ಟಕ್ಕೆ ಇರಲು ಬಿಟ್ಟು ಬಿಡಿ. ಒಂದು ತಿಂಗಳು ರಜೆ ಇದ್ದ ಕೂಡಲೇ ಅವರ ಕಲಿಕೆಯಲ್ಲಿ ಏನೂ ನಷ್ಟ ಆಗೋದಿಲ್ಲ. ಹೀಗಾಗಿ ಈ ರಜೆಯಲ್ಲಿಯೂ ಕೂಡಾ ಅವರಿಗೆ ಕಲಿಕೆಯ ಟೈಮ್ ಟೇಬಲ್ ಮಾಡಿ ಕೊಟ್ಟು , ಇಡೀ ದಿನ "ಕಲಿ , ಬರೆ , ಓದು" ಅಂತ ಅವರ ತಲೆ ತಿನ್ನಬೇಡಿ. ಅವರು ಟಿವಿ ನೋಡಲಿ , ಮೊಬೈಲ್ ನೋಡಲಿ , ಏನಾದರೂ ಮಾಡಿಕೊಳ್ಳಲಿ ಬಿಡಿ. ಪ್ರತಿಯೊಂದರಲ್ಲೂ ಕಲಿಯಲು ತುಂಬಾ ಇದೆ. ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರಾಗಿರುತ್ತಾರೆ. ಈಗಿನ ಕಾಲಕ್ಕೆ ಸರಿಯಾಗಿ ಏನನ್ನು ಕಲಿಯಬೇಕೋ ಅದನ್ನು ಅವರೇ ಕಲಿತುಕೊಳ್ತಾರೆ.
ಕಲಿಕೆ ಅಂದರೆ ಬರೇ ಪುಸ್ತಕದ ಬದನೇಕಾಯಿ ಅಲ್ಲ ಅನ್ನೋದನ್ನು ಮರೆಯಬೇಡಿ. ಪುಸ್ತಕದಲ್ಲಿ ಇರುವುದನ್ನು ಕಲಿಯುವುದು ಯಾಕೆ ? ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ತಾನೇ ? ಅದಕ್ಕೆ ಮುಂದಿನ ವರ್ಷ ಶಾಲೆ ಆರಂಭ ಆದಮೇಲೆ ಶಾಲೆಯಲ್ಲೇ ಅವರ ಅಧ್ಯಾಪಕರು ಪಾಠ ಮಾಡ್ತಾರೆ, ಆಗ ಇವರು ಕಲಿತುಕೊಳ್ತಾರೆ. ಈಗಲೇ ಈ ರಜೆಯಲ್ಲೇ ನೀವು ಅವರನ್ನು ಟ್ಯೂಶನ್ ಕ್ಲಾಸಿಗೆ ಕಳಿಸೋದು ಬೇಕಾಗಿಲ್ಲ.
ಈ ಬೇಸಿಗೆಯ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ , ಅವರಿಗೆ ರಜೆಯನ್ನು ಆನಂದಿಸಲು ಬಿಟ್ಟುಬಿಡಿ ಅಷ್ಟೇ ಸಾಕು.
-
Waterfalls: ಜೋಗದಿಂದ ಚುಂಚಿವರೆಗೆ; ಈ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕಾದ 10 ಜಲಪಾತಗಳಿವು -
Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ 'ರಾಗಿ ಅಂಬಲಿ'; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ? -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ














Click it and Unblock the Notifications