ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಉದ್ಯೋಗ ಕಡಿತ ಒಂದು ಸಾಮಾನ್ಯವಾಗಿ ಹೋಗಿದೆ. ಪ್ರಮುಖ ಐಟಿ ದೈತ್ಯ ಕಂಪನಿಯಾದ ಒರಾಕಲ್ (Oracle) ಕೂಡ ಜಾಗತಿಕವಾಗಿ ಬೃಹತ್ ಪುನರ್ರಚನಾ ಪ್ರಕ್ರಿಯೆಯ ಭಾಗವಾಗಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಕೆಲಸ ಕಳೆದುಕೊಂಡ ಅನೇಕರು ತಮ್ಮ ಕಷ್ಟದ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇವೆಲ್ಲದರ ನಡುವೆ ವೈರಲ್ ಆಗಿರುವ ಒಂದು ಪೋಸ್ಟ್, ಕಷ್ಟದ ಸಮಯದಲ್ಲಿ ಹೇಗೆ ಶಾಂತ ಹಾಗೂ ಪ್ರಾಯೋಗಿಕವಾಗಿ ಯೋಚಿಸಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಟೆಕ್ ಉದ್ಯಮದಲ್ಲಿ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ಒರಾಕಲ್ನ ಉದ್ಯೋಗಿಯೊಬ್ಬರು, ಏಕಾಏಕಿ ಕೆಲಸ ಕಳೆದುಕೊಂಡಾಗ ಗಾಬರಿಯಾಗದೆ ಅಥವಾ ಆತಂಕಕ್ಕೆ ಒಳಗಾಗದೆ, ತಮ್ಮ ಹುಟ್ಟೂರಾದ ಭುವನೇಶ್ವರಕ್ಕೆ ಮರಳಲು ನಿರ್ಧರಿಸಿದರು. ಈ ಟೆಕ್ಕಿಯ ಆಪ್ತ ಸ್ನೇಹಿತ ನಾಯಕ್ ಸತ್ಯ ಎನ್ನುವವರು ಎಕ್ಸ್ ಖಾತೆಯಲ್ಲಿ ಈ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.

"ಯಾವುದೇ ಆತಂಕವಿಲ್ಲ, ಯಾವುದೇ ಒತ್ತಡವಿಲ್ಲ. ಆತ ನೇರವಾಗಿ ತನ್ನ ಹುಟ್ಟೂರಾದ ಭುವನೇಶ್ವರಕ್ಕೆ ಮರಳಿದ," ಎಂದು ಸತ್ಯ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಹಣಕಾಸಿನ ಶಿಸ್ತು ತಂದುಕೊಟ್ಟ ನೆಮ್ಮದಿ
ಪೋಸ್ಟ್ನಲ್ಲಿ ವಿವರಿಸಿರುವಂತೆ, ಆ ಟೆಕ್ಕಿಯು ಅಂಚೆ ಕಚೇರಿಯಲ್ಲಿ ಎರಡು ಜಂಟಿ ಖಾತೆಗಳನ್ನು ಹೊಂದಿದ್ದು, ತಲಾ 15 ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟಿದ್ದರು. ಒಂದು ಖಾತೆ ಪೋಷಕರ ಹೆಸರಿನಲ್ಲಿದ್ದರೆ, ಮತ್ತೊಂದು ಪತ್ನಿಯ ಹೆಸರಿನಲ್ಲಿದೆ. ಜೊತೆಗೆ ಮಗುವಿನ ಹೆಸರಿನಲ್ಲಿಯೂ ಸಣ್ಣ ಖಾತೆಯೊಂದನ್ನು ತೆರೆದಿದ್ದಾರೆ. ಈ ಖಾತೆಗಳಿಂದಲೇ ಅವರಿಗೆ ಪ್ರತಿ ತಿಂಗಳು ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಇದಲ್ಲದೆ, ವಿವಿಧ ಬ್ಯಾಂಕ್ಗಳಲ್ಲಿ ಮಾಡಿರುವ ಸುಮಾರು 30 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ನಿಂದ (FD) ಹೆಚ್ಚುವರಿಯಾಗಿ 15,000 ರೂ. ಬಡ್ಡಿ ದೊರೆಯುತ್ತಿದೆ.
ಮೆಟ್ರೋ ನಗರಗಳಲ್ಲಿ ಫ್ಲಾಟ್ ಖರೀದಿಸಲು ಯಾವುದೇ ಇಎಂಐ ಅಥವಾ ಸಾಲದ ಸುಳಿಗೆ ಸಿಲುಕದ ಈತ, ಈಗ ತಮ್ಮ ಪೋಷಕರ ಮನೆಯಲ್ಲಿ ಅತ್ಯಂತ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.
ಉಬರ್ ಚಾಲಕನಾಗಿ ಹೊಸ ಹೆಜ್ಜೆ
ಉತ್ತಮವಾಗಿ ಕಾರು ಚಾಲನೆ ಮಾಡುವುದು ತಿಳಿದಿದ್ದ ಈತ, ಊರಿಗೆ ಬಂದ ಕೂಡಲೇ ಉಬರ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ತನ್ನದೇ ಆದ ಸಮಯದಲ್ಲಿ, ಯಾವುದೇ ಒತ್ತಡವಿಲ್ಲದೆ ವಾಹನ ಓಡಿಸುತ್ತಾ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾನೆ. ಇದರ ಜೊತೆಗೆ, ಪೋಷಕರ ಬೆಂಬಲದೊಂದಿಗೆ ಸಣ್ಣ ವ್ಯಾಪಾರವೊಂದನ್ನು ಪ್ರಾರಂಭಿಸುವ ಬಗ್ಗೆಯೂ ಆತ ಶಾಂತಚಿತ್ತದಿಂದ ಯೋಚಿಸುತ್ತಿದ್ದಾನೆ.
"ಅವನಿಗೆ ಕಾರು ಓಡಿಸಲು ಬರುತ್ತಿದ್ದ ಕಾರಣ, ತನ್ನದೇ ಅನುಕೂಲಕ್ಕೆ ತಕ್ಕಂತೆ ತಕ್ಷಣವೇ ಉಬರ್ ಚಾಲಕನಾಗಿ ಕೆಲಸ ಶುರುಮಾಡಿ, ಉತ್ತಮ ಸಂಪಾದನೆ ಮಾಡುತ್ತಿದ್ದಾನೆ" ಎಂದು ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಮ್ಯೂಚುಯಲ್ ಫಂಡ್ಗಳು, ಎಸ್ಐಪಿ (SIP) ಅಥವಾ ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ಗಳ ಆರ್ಥಿಕ ಸಲಹೆಗಳ ಹಿಂದೆ ಹೋಗದ ಈತ, ಸಾಂಪ್ರದಾಯಿಕ ಉಳಿತಾಯದ ಅಭ್ಯಾಸಗಳು, ತಾಳ್ಮೆ ಮತ್ತು ಶಿಸ್ತನ್ನು ಮಾತ್ರ ನಂಬಿದ್ದ. ಇದೇ ಆತನ ನೆಮ್ಮದಿಯ ಜೀವನಕ್ಕೆ ಕಾರಣ ಎನ್ನಲಾಗಿದೆ. ಈ "ಹಳೆಯ ಶೈಲಿಯ" ಆರ್ಥಿಕ ಯೋಜನೆಯೇ ಆತನಿಗೆ ಹಠಾತ್ ಉದ್ಯೋಗ ನಷ್ಟವನ್ನು ಎದುರಿಸಲು ನೆರವಾಗಿದೆ.
One of my close friends was fired from Oracle Bangalore.
— Nayak Satya (@NayakSatya_SG) April 5, 2026
No panic, no stress, and no crying on social media.
He straight away came back to his hometown Bhubaneswar
He had postal fixed deposits in two joint accounts ₹15 lakh each. One with his parents, and the other in his…
ನೆಟ್ಟಿಗರ ಮೆಚ್ಚುಗೆ
ಈ ಪೋಸ್ಟ್ಗೆ ಎಕ್ಸ್ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆತನ ಶಿಸ್ತುಬದ್ಧ ಹಣಕಾಸು ಯೋಜನೆ ಮತ್ತು ಸಾಂಪ್ರದಾಯಿಕ ಉಳಿತಾಯದ ಪ್ರಾಮುಖ್ಯತೆಯನ್ನು ಅನೇಕರು ಕೊಂಡಾಡಿದ್ದಾರೆ. ಹಠಾತ್ ಎದುರಾದ ಸಂಕಷ್ಟವನ್ನು ಆತಂಕವಿಲ್ಲದೆ ಹೇಗೆ ಅವಕಾಶವನ್ನಾಗಿ ಪರಿವರ್ತಿಸಬಹುದು ಎಂಬುದಕ್ಕೆ ಈತನೇ ನಿದರ್ಶನ ಎಂದಿದ್ದಾರೆ.
ಬಳಕೆದಾರರೊಬ್ಬರು "ಮೊದಲ ದಿನದಿಂದಲೇ ನಮಗೆ ಬ್ಯಾಕಪ್ ಇರಬೇಕು" ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು "ಮೊದಲು ಉಳಿಸಿ, ನಂತರ ಖರ್ಚು ಮಾಡಿ ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ" ಎಂದು ಪ್ರಶಂಸಿಸಿದ್ದಾರೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ














Click it and Unblock the Notifications