Waterfalls: ಜೋಗದಿಂದ ಚುಂಚಿವರೆಗೆ; ಈ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕಾದ 10 ಜಲಪಾತಗಳಿವು
ಕರ್ನಾಟಕದ ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಮಡಿಲಿನಲ್ಲಿ ಮೈದುಂಬಿ ಹರಿಯುವ ಜಲಪಾತಗಳು ಪ್ರವಾಸಿಗರನ್ನು ಸದಾ ಕೈಬೀಸಿ ಕರೆಯುತ್ತವೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಈ ಬೇಸಿಗೆಯಲ್ಲಿ, ಹಸಿರು ಕಾಡುಗಳು ಮತ್ತು ಮಂಜು ಮುಸಿಕಿದ ಬೆಟ್ಟಗಳ ನಡುವೆ ಧುಮ್ಮಿಕ್ಕುವ ಜಲಪಾತಗಳಲ್ಲಿ ವಿಹರಿಸುವುದು ಮನಸ್ಸಿಗೆ ಹಾಗೂ ದೇಹಕ್ಕೆ ಅತ್ಯಂತ ಮುದ ನೀಡುತ್ತದೆ. ಜೋಗ ಜಲಪಾತದಿಂದ ಹೀಡಿದು ಪ್ರಶಾಂತವಾದ ಅಬ್ಬೆ ಜಲಪಾತದವರೆಗೆ, ಕರ್ನಾಟಕವು ಪ್ರಕೃತಿ ಪ್ರೀಯರಿಗೆ ಹೇಳಿ ಮಾಡಿಸದಂತಹ ಹಲವಾರು ಜಲಪಾತಗಳನ್ನು ಹೊಂದಿದೆ. ಬೇಸಿಗೆಯ ಪ್ರವಾಸಕ್ಕೆ ಸೂಕ್ತವಾದ, ಕರ್ನಾಟಕದ ಟಾಪ್ 10 ಸುಂದರ ಹಾಗೂ ಯಾರಿಗೂ ತಿಳಿಯದ ಒಂದಿಷ್ಟು ಜಲಪಾತಗಳ ಪಟ್ಟಿ ಇಲ್ಲಿದೆ.
1. ಜೋಗ ಜಲಪಾತ, ಶಿವಮೊಗ್ಗ
ಕರ್ನಾಟಕದ ಅತಿ ಎತ್ತರದ ಜಲಪಾತ ಎಂದು ಕರೆಯಲ್ಪಡುವ ಜೋಗ ಜಲಪಾತವು ವಿಶ್ವವಿಖ್ಯಾತವಾಗಿದೆ. ಶರಾವತಿ ನದಿಯಿಂದ ಸೃಷ್ಟಿಯಾಗಿರುವ ಈ ಜಲಪಾತವು ಸುಮಾರು 830 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಕವಲುಗಳಾಗಿ ನೀರು ಕೆಳಗೆ ಬೀಳುವ ದೃಶ್ಯ ಕಣ್ಮನ ಸೆಳೆಯುತ್ತದೆ. ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಇಲ್ಲಿನ ದೃಶ್ಯಾವಳಿಗಳನ್ನು ವೀಕ್ಷಿಸುವುದು ಅತ್ಯುತ್ತಮ ಅನುಭವ.

2. ಅಬ್ಬೆ ಜಲಪಾತ, ಕೊಡಗು
ಮಡಿಕೇರಿ ಸಮೀಪದ ಖಾಸಗಿ ಕಾಫಿ ಎಸ್ಟೇಟ್ನ ಮಧ್ಯದಲ್ಲಿರುವ ಅಬ್ಬೆ ಜಲಪಾತ (ಅಬ್ಬಿ ಫಾಲ್ಸ್) ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಬಂಡೆಗಳ ಮೇಲಿಂದ ಕೊಳಕ್ಕೆ ಧುಮ್ಮಿಕ್ಕುವ ನೀರು ಮತ್ತು ಅಲ್ಲಿರುವ ತೂಗುಸೇತುವೆಯು ಛಾಯಾಗ್ರಹಣಕ್ಕೆ ಹೇಳಿಮಾಡಿಸಿದಂತಿದೆ. ಕಾಫಿ ಮತ್ತು ಮಸಾಲೆ ತೋಟಗಳ ನಡುವೆ ಇರುವ ಈ ಜಲಪಾತವನ್ನು ಸುಲಭವಾಗಿ ತಲುಪಬಹುದು.
3. ಹೆಬ್ಬೆ ಜಲಪಾತ, ಚಿಕ್ಕಮಗಳೂರು
ಚಿಕ್ಕಮಗಳೂರಿನ ಗಿರಿಧಾಮದಲ್ಲಿರುವ ಹೆಬ್ಬೆ ಜಲಪಾತವು ಒಂದು ನಿಗೂಢ ರತ್ನದಂತಾಗಿದೆ. ಇದನ್ನು ಕಡಿದಾದ ಜೀಪ್ ಟ್ರ್ಯಾಕ್ ಅಥವಾ ಚಾರಣದ ಮೂಲಕ ಮಾತ್ರ ತಲುಪಲು ಸಾಧ್ಯ. ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂಬ ಎರಡು ಹಂತಗಳಲ್ಲಿ ಧುಮ್ಮಿಕ್ಕುವ ಈ ಜಲಪಾತವು ಭದ್ರಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿದ್ದು, ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತದೆ.
4. ಗೋಕಾಕ್ ಜಲಪಾತ, ಬೆಳಗಾವಿ
"ಕರ್ನಾಟಕದ ನಯಾಗರ" ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತವು ಘಟಪ್ರಭಾ ನದಿಯಿಂದ ರೂಪುಗೊಂಡಿದೆ. ಕುದುರೆಲಾಳದ ಆಕಾರದಲ್ಲಿರುವ ಈ ಜಲಪಾತವು 171 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇಲ್ಲಿನ ತೂಗುಸೇತುವೆ ಮತ್ತು ಬ್ರಿಟಿಷ್ ಕಾಲದ ಜಲವಿದ್ಯುತ್ ಸ್ಥಾವರವು ಈ ಸ್ಥಳದ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿವೆ.
5. ಸಾತೋಡಿ ಜಲಪಾತ, ಉತ್ತರ ಕನ್ನಡ
ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಸಾತೋಡಿ ಜಲಪಾತವು ಅತ್ಯಂತ ಪ್ರಶಾಂತವಾದ ತಾಣವಾಗಿದೆ. ಹಲವಾರು ಸಣ್ಣ ತೊರೆಗಳು ಸೇರಿ ಸುಮಾರು 50 ಅಡಿ ಎತ್ತರದಿಂದ ಬೀಳುವ ಈ ಜಲಪಾತ, ಜನದಟ್ಟಣೆಯಿಲ್ಲದ ಪಿಕ್ನಿಕ್ ಅಥವಾ ಈಜಲು (ಈಜುವುದಕ್ಕೆ ಸುರಕ್ಷಿತವಾದ ಜಾಗಗಳಲ್ಲಿ ಮಾತ್ರ) ಸೂಕ್ತವಾಗಿದೆ.
6. ಉಂಚಳ್ಳಿ ಜಲಪಾತ, ಶಿರಸಿ
ಶಿರಸಿ ಸಮೀಪದ ದಟ್ಟ ಕಾಡಿನಲ್ಲಿರುವ ಉಂಚಳ್ಳಿ ಜಲಪಾತವು ಅಘನಾಶಿನಿ ನದಿಯಿಂದ ಸೃಷ್ಟಿಯಾಗಿದೆ. ಸುಮಾರು 380 ಅಡಿ ಎತ್ತರದಿಂದ ಕಣಿವೆಗೆ ಧುಮ್ಮಿಕ್ಕುವ ಈ ಜಲಪಾತದ ಸದ್ದು ಕಾಡಿನುದ್ದಕ್ಕೂ ಪ್ರತಿಧ್ವನಿಸುತ್ತದೆ. ಟ್ರೆಕ್ಕಿಂಗ್ ಪ್ರಿಯರಿಗೆ ಇದೊಂದು ಹೇಳಿಮಾಡಿಸಿದ ತಾಣ.
7. ಮಾಗೋಡು ಜಲಪಾತ, ಯಲ್ಲಾಪುರ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿರುವ ಮಾಗೋಡು ಜಲಪಾತವು ಬೇಡ್ತಿ ನದಿಯಿಂದ ರೂಪುಗೊಂಡಿದೆ. ಒಟ್ಟು 650 ಅಡಿ ಎತ್ತರದಿಂದ ಬಂಡೆಗಳ ಕಣಿವೆಗೆ ಧುಮ್ಮಿಕ್ಕುವ ಇದು ಕರ್ನಾಟಕದ ಅತ್ಯಂತ ಸುಂದರ ಜಲಪಾತಗಳಲ್ಲಿ ಒಂದಾಗಿದೆ. ಇಲ್ಲಿನ ಜನಸಂದಣಿ ಕಡಿಮೆ ಇರುವುದರಿಂದ ನೆಮ್ಮದಿಯಾಗಿ ಸಮಯ ಕಳೆಯಬಹುದು.
8. ಶಿವನಸಮುದ್ರ ಜಲಪಾತ, ಮಂಡ್ಯ
ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಶಿವನಸಮುದ್ರವು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಅವಳಿ ಜಲಪಾತಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಹಳೆಯ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ವಾರಾಂತ್ಯದ ಪ್ರವಾಸಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
9. ಕಲ್ಲತ್ತಿಗಿರಿ ಜಲಪಾತ, ಚಿಕ್ಕಮಗಳೂರು
ಕೆಮ್ಮಣ್ಣುಗುಂಡಿ ಸಮೀಪವಿರುವ ಕಲ್ಲತ್ತಿಗಿರಿ ಜಲಪಾತವು ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಸೌಂದರ್ಯದ ಸಂಗಮ. ಕೇವಲ 120 ಅಡಿ ಎತ್ತರವಿದ್ದರೂ, ಇಲ್ಲಿನ ನೀರು ಐತಿಹಾಸಿಕ ವೀರಭದ್ರ ದೇವಸ್ಥಾನದ ಮೇಲಿನಿಂದ ಹರಿಯುವುದು ಇದರ ವಿಶೇಷತೆಯಾಗಿದೆ.
10. ಚುಂಚಿ ಜಲಪಾತ, ಕನಕಪುರ
ಬೆಂಗಳೂರಿನಿಂದ ಕೇವಲ 90 ಕಿ.ಮೀ ದೂರದಲ್ಲಿರುವ ಚುಂಚಿ ಜಲಪಾತವು ಅರ್ಕಾವತಿ ನದಿಯಲ್ಲಿದೆ. ಬಂಡೆಗಳು ಮತ್ತು ಕಾಡಿನಿಂದ ಆವೃತವಾಗಿರುವ ಈ ಜಲಪಾತವು ಪ್ರವಾಸಿಗರಿಗೆ ಸುಲಭವಾಗಿ ತಲುಪಬಹುದಾದ ತಾಣವಾಗಿದೆ. ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಪಿಕ್ನಿಕ್ ಹೋಗಲು ಇದು ಉತ್ತಮ ಆಯ್ಕೆಯಾಗಿದೆ.
ಈ ಬೇಸಿಗೆಯಲ್ಲಿ ನಿಮ್ಮ ಬಿಡುವಿನ ವೇಳೆಯನ್ನು ಈ ಸುಂದರ ಜಲಪಾತಗಳ ಭೇಟಿಗಾಗಿ ಮೀಸಲಿಡಿ ಮತ್ತು ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಿರಿ. ಪ್ರಯಾಣಿಸುವಾಗ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮರೆಯದಿರಿ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ












Click it and Unblock the Notifications