2013ರ ಅಸೆಂಬ್ಲಿ ಚುನಾವಣೆ: ಅಲ್ಪ ಅಂತರದಿಂದ ಗೆದ್ದವರು, ಸೋತು ಗೆದ್ದವರು
Recommended Video

2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಕರೆಸಿದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಕರೆಸಿ ಹಲವು ಸುತ್ತಿನ ಪ್ರಚಾರ ಆರಂಭಿಸಿದೆ.
ಇನ್ನು ಜೆಡಿಎಸ್ ಪರವಾಗಿ ದೇವೇಗೌಡ್ರು, ಕುಮಾರಸ್ವಾಮಿ ಮತಬೇಟೆ ಆರಂಭಿಸಿದ್ದಾರೆ ಜೊತೆಗೆ ಮಾಯಾವತಿಯವರನ್ನೂ ಕರೆಸಿ ಒಂದು ರೌಂಡಿನ ಪ್ರಚಾರ ಮಾಡಿಸಿದ್ದಾರೆ. ಜೆಡಿಎಸ್ ಪರ ಓವೈಸಿ ಬರುತ್ತಾರೋ, ಇನ್ನೂ ಅಂತಿಮವಾಗಿಲ್ಲ.
ಕಳೆದ ಅಸೆಂಬ್ಲಿ ಚುನಾವಣೆ ಹಲವು ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ ಬಿಜೆಪಿಯಿಂದ ಹೊರಬಂದು ತೆಂಗಿನಕಾಯಿ ಪಕ್ಷ (ಕೆಜೆಪಿ) ಕಟ್ಟಿದ್ದ ಯಡಿಯೂರಪ್ಪನವರ 'ಚಾರ್ಮ್' ಯಾವರೀತಿ ರಾಜ್ಯದಲ್ಲಿರುತ್ತದೆ ಎನ್ನುವುದೂ ಒಂದು ಕಾರಣವಾಗಿತ್ತು.
2013ರ ಚುನಾವಣೆಯಲ್ಲಿ ಕೆಜೆಪಿ ಆರು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಶಕ್ತವಾಯಿತು, ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮತವನ್ನು ಡಿವೈಡ್ ಮಾಡುವಲ್ಲಿ ಅಲ್ಲಲ್ಲಿ ಯಶಸ್ವಿಯಾಗಿತ್ತು. ಕೆಜೆಪಿ ಜೊತೆಗೆ ಶ್ರೀರಾಮುಲು ಕೂಡಾ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಾರ್ಟಿ (ಬಿಎಸ್ಆರ್) ಸ್ಥಾಪಿಸಿ, ಅದೇ ಪಕ್ಧದ ಚಿಹ್ನೆಯಿಂದ ನಾಲ್ಕು ಸ್ಥಾನವನ್ನು ಗೆದ್ದಿದ್ದರು.
ಹೋದ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ, ಕಾಂಗ್ರೆಸ್ 122, ಬಿಜೆಪಿ 40, ಬಿಎಸ್ಆರ್ 4, ಕೆಜೆಪಿ 6, ಜೆಡಿಎಸ್ 40 ಮತ್ತು ಇತರರು 12ಸ್ಥಾನಗಳಲ್ಲಿ ಗೆದ್ದಿದ್ದರು. ಹನ್ನೊಂದು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ವಿಜೇತ ಅಭ್ಯರ್ಥಿಗಳ ಮತಗಳ ಅಂತರ 900ಕ್ಕೂ ಕಮ್ಮಿಯಿತ್ತು.
ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡಿ, ಕಾರ್ಯಕರ್ತರನ್ನು ಒಗ್ಗೂಡಿಸಿ, ಕೋಟ್ಯಾಂತರ ರೂಪಾಯಿ ವ್ಯಯಿಸಿ, ಸಾವಿರ ಓಟಿಗಿಂತಲೂ ಕಮ್ಮಿ ಅಂತರದಿಂದ ಸೋತರೆ ಅಂಥವರ ಮನಸ್ಥಿತಿ ಹೇಗಿರಬೇಡ. ಆ ಹನ್ನೊಂದು ಅಭ್ಯರ್ಥಿಗಳು ಯಾರು? ಸೋಲಲ್ಲೂ ಸಾರ್ಥಕತೆ ಮರೆದವರು ಯಾವ ಪಕ್ಷದವರು? ಮುಂದೆ ಓದಿ..

ಅಸೆಂಬ್ಲಿ ಕ್ಷೇತ್ರ: ಹಗರಿಬೊಮ್ಮನಹಳ್ಳಿ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 89
ಅಸೆಂಬ್ಲಿ ಕ್ಷೇತ್ರ: ಹಗರಿಬೊಮ್ಮನಹಳ್ಳಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಭೀಮಾ ನಾಯಕ, ಜೆಡಿಎಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಕೆ ನೇಮರಾಜ ನಾಯಕ, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 51,972
ಸೋತ ಅಭ್ಯರ್ಥಿ ಪಡೆದ ಮತ: 51,847
ಗೆಲುವಿನ ಅಂತರ: 125

ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 113
ಅಸೆಂಬ್ಲಿ ಕ್ಷೇತ್ರ: ಶಿವಮೊಗ್ಗ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಕೆ ಬಿ ಪ್ರಸನ್ನ ಕುಮಾರ್, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎಸ್ ರುದ್ರೇಗೌಡ, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 39,355
ಸೋತ ಅಭ್ಯರ್ಥಿ ಪಡೆದ ಮತ: 39,077
ಗೆಲುವಿನ ಅಂತರ: 278

ಅಸೆಂಬ್ಲಿ ಕ್ಷೇತ್ರ: ಶಿರಹಟ್ಟಿ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 65
ಅಸೆಂಬ್ಲಿ ಕ್ಷೇತ್ರ: ಶಿರಹಟ್ಟಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ದೊಡ್ಡಮನಿ ರಾಮಕೃಷ್ಣ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಆರ್ ಎಸ್ ಲಮಾಣಿ, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 44,738
ಸೋತ ಅಭ್ಯರ್ಥಿ ಪಡೆದ ಮತ: 44,423
ಗೆಲುವಿನ ಅಂತರ: 315

ಅಸೆಂಬ್ಲಿ ಕ್ಷೇತ್ರ: ಟಿ ನರಸೀಪುರ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 220
ಅಸೆಂಬ್ಲಿ ಕ್ಷೇತ್ರ: ಟಿ ನರಸೀಪುರ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಎಚ್ ಸಿ ಮಹಾದೇವಪ್ಪ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎಂ ಸಿ ಸುದರ್ಶನ್, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 53,219
ಸೋತ ಅಭ್ಯರ್ಥಿ ಪಡೆದ ಮತ: 52,896
ಗೆಲುವಿನ ಅಂತರ: 323

ಅಸೆಂಬ್ಲಿ ಕ್ಷೇತ್ರ: ಕುಮಟಾ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 78
ಅಸೆಂಬ್ಲಿ ಕ್ಷೇತ್ರ: ಕುಮಟಾ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಶಾರದ ಮೋಹನ್ ಶೆಟ್ಟಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ದಿನಕರ್ ಕೇಶವ್ ಶೆಟ್ಟಿ, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 36,756
ಸೋತ ಅಭ್ಯರ್ಥಿ ಪಡೆದ ಮತ: 36,336
ಗೆಲುವಿನ ಅಂತರ: 420

ಅಸೆಂಬ್ಲಿ ಕ್ಷೇತ್ರ: ಮಳವಳ್ಳಿ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 186
ಅಸೆಂಬ್ಲಿ ಕ್ಷೇತ್ರ: ಮಳವಳ್ಳಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪಿ ಎಂ ನರೇಂದ್ರಸ್ವಾಮಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಕೆ ಅನ್ನದಾನಿ, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 61,869
ಸೋತ ಅಭ್ಯರ್ಥಿ ಪಡೆದ ಮತ: 61,331
ಗೆಲುವಿನ ಅಂತರ: 538

ಅಸೆಂಬ್ಲಿ ಕ್ಷೇತ್ರ: ಮೂಡಿಗೆರೆ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 124
ಅಸೆಂಬ್ಲಿ ಕ್ಷೇತ್ರ: ಮೂಡಿಗೆರೆ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಬಿ ಬಿ ನಿಂಗಯ್ಯ, ಜೆಡಿಎಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬಿ ಎನ್ ಚಂದ್ರಪ್ಪ, ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಮತ: 32,417
ಸೋತ ಅಭ್ಯರ್ಥಿ ಪಡೆದ ಮತ: 31,782
ಗೆಲುವಿನ ಅಂತರ: 635

ಅಸೆಂಬ್ಲಿ ಕ್ಷೇತ್ರ: ನಾಗಠಾಣ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 31
ಅಸೆಂಬ್ಲಿ ಕ್ಷೇತ್ರ: ನಾಗಠಾಣ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ರಾಜು ಅಲಗೂರು, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ದೇವಾನಂದ್ ಪಿ ಚವಾಣ್, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 45,570
ಸೋತ ಅಭ್ಯರ್ಥಿ ಪಡೆದ ಮತ: 44,903
ಗೆಲುವಿನ ಅಂತರ: 667

ಅಸೆಂಬ್ಲಿ ಕ್ಷೇತ್ರ: ಮಾಯಕೊಂಡ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 108
ಅಸೆಂಬ್ಲಿ ಕ್ಷೇತ್ರ: ಮಾಯಕೊಂಡ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಕೆ ಶಿವಮೂರ್ತಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎನ್ ನಿಂಗಣ್ಣ, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 32,435
ಸೋತ ಅಭ್ಯರ್ಥಿ ಪಡೆದ ಮತ: 31,741
ಗೆಲುವಿನ ಅಂತರ: 694

ಅಸೆಂಬ್ಲಿ ಕ್ಷೇತ್ರ: ರಾಯಭಾಗ್
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 6
ಅಸೆಂಬ್ಲಿ ಕ್ಷೇತ್ರ: ರಾಯಭಾಗ್
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಬಿಜೆಪಿ
ಸೋತ ಅಭ್ಯರ್ಥಿ ಮತ್ತು ಪಕ್ಷ: ಪ್ರದೀಪ್ ಮಾಳಗಿ, ಪಕ್ಷೇತರ
ವಿಜೇತ ಅಭ್ಯರ್ಥಿ ಪಡೆದ ಮತ: 37,535
ಸೋತ ಅಭ್ಯರ್ಥಿ ಪಡೆದ ಮತ: 36,706
ಗೆಲುವಿನ ಅಂತರ: 829

ಅಸೆಂಬ್ಲಿ ಕ್ಷೇತ್ರ: ತರೀಕೆರೆ
ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 126
ಅಸೆಂಬ್ಲಿ ಕ್ಷೇತ್ರ: ತರೀಕೆರೆ
ಅಭ್ಯರ್ಥಿ ಮತ್ತು ಪಕ್ಷ: ಜಿ ಎಚ್ ಶ್ರೀನಿವಾಸ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಡಿ ಎಸ್ ಸುರೇಶ್, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 35,817
ಸೋತ ಅಭ್ಯರ್ಥಿ ಪಡೆದ ಮತ: 34,918
ಗೆಲುವಿನ ಅಂತರ: 899
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ












Click it and Unblock the Notifications