ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ, ಮೂರು ಸೂತ್ರ
ಬೆಂಗಳೂರು, ನ.14 : ಕರ್ನಾಟಕದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಹೋರಾಟ ಆರಂಭಿಸಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮೂರು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಿಎಂ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಲಿದೆ.
ಬೆಂಗಳೂರಿನ
ಪಕ್ಷದ
ಕಚೇರಿಯಲ್ಲಿ
ನಡೆದ
ರಾಜ್ಯ
ಪದಾಧಿಕಾರಿಗಳು,
ಜಿಲ್ಲಾಧ್ಯಕ್ಷರು,
ಪ್ರಧಾನ
ಕಾರ್ಯದರ್ಶಿಗಳ
ಸಭೆಯಲ್ಲಿ
ಈ
ಬಗ್ಗೆ
ತೀರ್ಮಾನ
ಕೈಗೊಳ್ಳಲಾಗಿದೆ.
ಸಭೆಯ
ಬಳಿಕ
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಸಭೆಯ
ಪ್ರಮುಖ
ತೀರ್ಮಾನಗಳನ್ನು
ಮಾಧ್ಯಮಗಳಿಗೆ
ತಿಳಿಸಿದ್ದಾರೆ.
[ಸಚಿವರ
ರಾಜೀನಾಮೆಗೆ
ಬಿಜೆಪಿ
ಒತ್ತಾಯ]
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಯನ್ನು ಬೆಳಗಾವಿಯ ಅಧಿವೇಶನದಲ್ಲಿ ಕೇಳದಿರಲು ಬಿಜೆಪಿ ನಿರ್ಧರಿಸಿದೆ. ನಾಲ್ವರು ಸಚಿವರ ಕಾರ್ಯಕ್ರಮವಿರುವ ಕಡೆ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಲೇಔಟ್ ಡಿನೋಟಿಫಿಕೇಷನ್ ಪ್ರಕರಣದಲ್ಲಿ ದೂರು ದಾಖಲಿಸಲು ಬಿಜೆಪಿ ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯಪಾಲರ ಒಪ್ಪಿಗೆ ಪಡೆಯಲಿದೆ. ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಮುಂತಾದವರು ಸಭೆಯಲ್ಲಿ ಪಾಳ್ಗೊಂಡಿದ್ದರು.
ಮೂರು ಪ್ರಮುಖ ತೀರ್ಮಾನಗಳು
* ನ.20ರ ನಂತರ ಭ್ರಷ್ಟಾಚಾರ ಆರೋಪ ಹೊತ್ತಿರುವ ಈ ನಾಲ್ವರು ಸಚಿವರು ಪಾಲ್ಗೊಳ್ಳುವ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ತೆರಳಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸುವುದು.
*
ನಾಲ್ವರು
ಸಚಿವರ
ರಾಜಿನಾಮೆಗೆ
ಆಗ್ರಹ,
ಹದಗೆಟ್ಟಿರುವ
ಕಾನೂನು
ಸುವ್ಯವಸ್ಥೆ,
ಕಬ್ಬು
ಬೆಳೆಗಾರರ
ಬಾಕಿ
ಪಾವತಿ
ವಿಳಂಬ
ಸೇರಿದಂತೆ
ಹಲವು
ವೈಫಲ್ಯಗಳನ್ನು
ಮುಂದಿಟ್ಟುಕೊಂಡು
ಬೆಳಗಾವಿಯಲ್ಲಿ
ನಡೆಯಲಿರುವ
ವಿಧಾನಮಂಡಲದ
ಅಧಿವೇಶನ
ಮೊದಲ
ದಿನವಾದ
ಡಿ.9ರಂದು
ಸುವರ್ಣಸೌಧಕ್ಕೆ
ಮುತ್ತಿಗೆ
ಹಾಕುವುದು.
* 'ಭ್ರಷ್ಟ ಸಚಿವರನ್ನು ತೊಲಗಿಸಿ, ಕರ್ನಾಟವನ್ನು ಉಳಿಸಿ' ಎಂಬ ಘೋಷವಾಕ್ಯದಡಿ ಸಚಿವರಾದ ಕೆ.ಜೆ.ಜಾರ್ಜ್, ಖಮರುಲ್ ಇಸ್ಲಾಂ, ದಿನೇಶ್ ಗುಂಡೂರಾವ್ ಹಾಗೂ ಎಚ್.ಎಸ್.ಮಹದೇವಪ್ರಸಾದ್ ಅವರ ರಾಜಿನಾಮೆಗೆ ಒತ್ತಾಯಿ ನ.20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದು.