3 ವರ್ಷದ ಹಿಂದೆ, ಮೋದಿ ಗೆಲುವನ್ನು ಪತ್ರಿಕೆಗಳು ಸಾರಿದ್ದು ಹೀಗೆ
2014ರ ಮೇ 16ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಮರುದಿನ ದೇಶದ ಪ್ರಮುಖ ಪತ್ರಿಕೆಗಳು ನೀಡಿದ ತಲೆಬರಹಗಳು ಒಂದಕ್ಕಿಂತ ಒಂದು ವಿಶೇಷವಾಗಿದ್ದವು. ಅವುಗಳ ಒಂದಷ್ಟು ಸ್ಯಾಂಪಲ್ ಇಲ್ಲಿವೆ.
ಬೆಂಗಳೂರು, ಮೇ 16: ಸರಿಯಾಗಿ ಮೂರು ವರ್ಷಗಳ ಕೆಳಗೆ ಇದೇ ದಿನ ಲೋಕಸಭೆ ಚುನಾವಣೆಯ ಫಲಿತಾಂಶ ಬಂದಿತ್ತು. ಇದರಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸುವುದರೊಂದಿಗೆ ಕೇಸರಿ ಪಕ್ಷ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು.
ಮರುದಿನ ದೇಶದ ಪ್ರಮುಖ ಪತ್ರಿಕೆಗಳು ನೀಡಿದ ತಲೆಬರಹಗಳು ಒಂದಕ್ಕಿಂತ ಒಂದು ವಿಶೇಷವಾಗಿದ್ದವು. ಅವುಗಳ ಒಂದಷ್ಟು ಸ್ಯಾಂಪಲ್ ಇಲ್ಲಿವೆ.[ನರೇಂದ್ರ ಮೋದಿ ಸರಕಾರಕ್ಕೆ ಮೂರು ವರ್ಷ: ಸಮೀಕ್ಷೆ ಏನು ಹೇಳುತ್ತೆ?]
2014ರ ಮೇ 16ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಇದರಲ್ಲಿ ಯುಪಿಎಯ ಹತ್ತು ವರ್ಷಗಳ ಆಡಳಿತದ ನಂತರ ಜನ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದರು. 2-3 ದಶಕಗಳ ನಂತರ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಜನ ದಯಪಾಲಿಸಿದ್ದರು.
ಅದಾದ ಮರುದಿನ ತಮ್ಮ ಓದುಗರಿಗೆ ಮತ ಎಣಿಕೆಯಲ್ಲಿ ನಡೆದಿದ್ದೇನು ಎಂಬುದನ್ನು ಅರ್ಥಪಡಿಸಲು ಪತ್ರಿಕೆಗಳು ತೀವ್ರ ಪೈಪೋಟಿ ನಡೆಸಿದ್ದವು.

ಮೋದಿ (MODI)
ಪ್ರತಿಷ್ಠಿತ ಇಂಡಿಯನ್ ಎಕ್ಸ್ ಪ್ರೆಸ್ ತನ್ನ ತಲೆ ಬರಹವನ್ನು ಕೇವಲ ಮೋದಿ ಎಂದಷ್ಟೇ ಇಟ್ಟಿತ್ತು. ಜನರಿಗೆ ಒಂದೇ ಶಬ್ದ ಹಲವು ಸಂದೇಶಗಳನ್ನು ತಲುಪಿಸುವಂತಿತ್ತು. ಆದರೆ ಇಂಗ್ಲೀಷ್ ಭಾಷೆಯಲ್ಲಿ 'MODI' ಬರೆಯುವಾಗ 'I' ಜಾಗದಲ್ಲಿ ಮತದಾನ ಮಾಡಿದ ಬೆರಳಿನ ಗುರುತನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಜನ ಮೋದಿಗೆ ಮತ ಹಾಕಿದ್ದಾರೆ ಎಂಬುದನ್ನು ಇದು ಹೇಳುತ್ತಿತ್ತು.

ಪ್ರಧಾನ ಮಂತ್ರಿ ಮೋದಿ
ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಪ್ರಸಾರ ಹೊಂದಿರುವ 'ದಿ ಹಿಂದೂ' ಪತ್ರಿಕೆ 'ಪ್ರಧಾನ ಮಂತ್ರಿ ಮೋದಿ' ಎಂದಷ್ಟೇ ಹೆಡ್ಲೈನ್ ಇಟ್ಟಿತ್ತು. ತಾಂತ್ರಿಕವಾಗಿ ಈ ಪದ ಸರಿಯಲ್ಲ; ಕಾರಣ ಅವರಿನ್ನೂ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಆದರೆ ಫಲಿತಾಂಶ ಏನು ಎಂಬುದನ್ನು ಅದು ಜನರಿಗೆ ತಲುಪಿಸಿತ್ತು. ಸಾಮಾನ್ಯವಾಗಿ ಸಾಂಪ್ರದಾಯಿಕ ಹೆಡ್ಲೈನ್ ಗಳನ್ನು ನೀಡುತ್ತಾ ಬಂದ 'ದಿ ಹಿಂದೂ' ಪತ್ರಿಕೆ ಅವತ್ತಿನ ದಿನ ತನ್ನ ಸಂಪ್ರದಾಯ ಮುರಿದು ತಲೆ ಬರಹ ನೀಡಿತ್ತು.[ಚಿದು ಬಗ್ಗೆ ಸುಬ್ರಮಣ್ಯಂ ಸ್ವಾಮಿ, ಮೋದಿಗೆ ಬರೆದ ಪತ್ರದಲ್ಲೇನಿದೆ?]

ಹೂಂಕಾರ್ ಟ್ಯಾಲಿ
ಉತ್ತರ ಭಾರತದ ಮತ್ತೊಂದು ಪ್ರಮುಖ ಪತ್ರಿಕೆ ಹಿಂದೂಸ್ಥಾನ್ ಟೈಮ್ಸ್ ಅವತ್ತು ಪೂರ್ತಿ ಟ್ಯಾಬ್ಲಾಯ್ಡ್ ಶೈಲಿಗೆ ಬದಲಾಗಿತ್ತು. ಮೋದಿ ಮುಖ ಪಕ್ಕದಲ್ಲಿ ಕೇಸರಿ ಬಣ್ಣದ ಮೇಲೆ ಹೂಂಕಾರ್ ಟ್ಯಾಲಿ ಎಂಬುದಾಗಿ ತಲೆ ಬರಹ ಕೊಟ್ಟಿತ್ತು ಪತ್ರಿಕೆ.
ಇನ್ನು ಒಳಪುಟದಲ್ಲಿ 'ಮೋದಿ ಭೂಕುಸಿತಕ್ಕೆ ಮಣ್ಣಾದ ಕಾಂಗ್ರೆಸ್' ಎಂಬ ಅರ್ಥದಲ್ಲಿ ತಲೆ ಬರಹ ನೀಡಲಾಗಿತ್ತು. ಕಾಂಗ್ರೆಸ್ ಪಾಲಿಗೆ ಫಲಿತಾಂಶ ಏನಾಗಿದೆ ಎಂಬುದನ್ನು ಈ ಹೆಡ್ಲೈನ್ ಹೇಳುತ್ತಿತ್ತು.

ಭಾರತವನ್ನು ಬಲದಾರಿಗೆ ಬದಲಾಯಿಸಿದ ನಮೋ
ಉಳಿದೆಲ್ಲಾ ಪತ್ರಿಕೆಗಳಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕೂಡಾ ಅತ್ಯುತ್ತಮ ಹೆಡ್ಲೈನ್ ನೀಡಿತ್ತು. ಬಿಜೆಪಿ ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವುದರಿಂದ ನರೇಂದ್ರ ಮೋದಿ ಗೆಲುವಿನೊಂದಿಗೆ ಭಾರತದ ರಾಜಕೀಯ ಬಲಪಂಥದತ್ತ ಹೊರಳಿದೆ ಎಂಬುದನ್ನು ಪತ್ರಿಕೆಯ ಹೆಡ್ಲೈನ್ ಸೂಚಿಸುತ್ತಿತ್ತು.[ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?]

ಇಂಡಿಯಾ ಮಾಡಿಫೈಡ್
ಮುಂಬೈನ ಖ್ಯಾತ ಪತ್ರಿಕೆ 'ಮಿಡ್-ಡೇ' ಇಂಡಿಯಾ ಮಾಡಿಫೈಡ್ ಎಂಬ ತಲೆ ಬರಹದೊಂದಿಗೆ ಮೋದಿ ಗೆಲುವಿನ ಸುದ್ದಿ ಪ್ರಕಟಿಸಿತ್ತು. ಮೋದಿ ಗೆಲುವಿನೊಂದಿಗೆ ಭಾರತದಲ್ಲೂ ಬದಲಾವಣೆ ಬರಲಿದೆ ಎಂಬುದನ್ನು ಹೆಡ್ಲೈನ್ ಸೂಚಿಸುತ್ತಿತ್ತು.

ಬಿಜೆಪಿ ಅಧಿಕಾರಕ್ಕೆ ಬೇಕಾದ ಬಹುಮತ ನೀಡಿದ ಸುನಮೋ
ಬಿಜೆಪಿಗೆ ಅಧಿಕಾರ ನಡೆಸಲು ಬೇಕಾದಷ್ಟು ಸ್ಥಾನಗಳನ್ನು ಮೋದಿ ಸುನಾಮಿ ಗೆದ್ದು ಕೊಟ್ಟಿದೆ ಎಂಬ ಅರ್ಥದಲ್ಲಿ 'ಟ್ರಿಬ್ಯೂನ್' ಹೆಡ್ಲೈನ್ ನೀಡಿತ್ತು. ಸುನಾಮಿ ಎಂಬ ಶಬ್ದವನ್ನೇ ಸ್ವಲ್ಪ ಬದಲಾಯಿಸಿ ಸು'ನಮೋ' ಎಂದು ಅರ್ಥವತ್ತಾದ ತಲೆ ಬರವನ್ನು ಅದು ನೀಡಿತ್ತು.

ಬಿಜೆಪಿ ಬಿರುಗಾಳಿಗೆ ತರಗೆಲೆಯಾದ ಗಾಂಧಿ ಕುಟುಂಬ
'ಬಿಜೆಪಿ ಆಂಧಿ ಫ್ಲಾಟನ್ಸ್ ಕ್ಲಾನ್ ಗಾಂಧಿ' ಎಂಬ ತಲೆ ಬರಹವನ್ನು ದೇಶದ ನಂಬರ್ ವನ್ ಇಂಗ್ಲೀಷ್ ಪತ್ರಿಕೆ 'ದಿ ಟೈಮ್ಸ್ ಆಫ್ ಇಂಡಿಯಾ'ನೀಡಿತ್ತು. ಜತೆಗೆ ಭಾರತ ಮೋದಿತ್ವದಲ್ಲಿ ನಂಬಿಕೆ ಇರಿಸಿದೆ ಎನ್ನು ಅರ್ಥ ಬರುವ ಇನ್ನೊಂದು ಹೆಡ್ಲೈನನ್ನೂ ಇದರ ಜತೆಗೆ ನೀಡಿತ್ತು.

ಮೋದಿ ಸರ್ಕಾರ್
ಸ್ಟೇಟ್ಸ್ ಮನ್ ಪತ್ರಿಕೆ ಸರಳ ಹೆಡ್ಲೈನ್ ನೀಡಿತ್ತು. 'ಆಪ್ ಕಿ ಬಾರ್ ಮೋದಿ ಸರ್ಕಾರ್' ಎಂಬ ಬಿಜೆಪಿ ಘೋಷವಾಕ್ಯದ ಅರ್ಧ ಸಾಲು ಕತ್ತರಿಸಿ 'ಮೋದಿ ಸರ್ಕಾರ್' ಎಂಬುದಾಗಿ ತಲೆ ಬರಹ ನೀಡಿತ್ತು.

ಬಿಜೆಪಿ ಬಹುಮತಕ್ಕೆ ಮೋದಿ ಶಕ್ತಿ
ಬಿಜೆಪಿಗೆ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳು ಬಂದಿವೆ. ಇದನ್ನು ಗೆದ್ದು ಕೊಟ್ಟಿದ್ದು ಮೋದಿ ಎಂಬುದುನ್ನು ಡೆಕ್ಕನ್ ಹೆರಾಲ್ಡ್ ನ ಸರಳ ಹೆಡ್ಲೈನ್ ಸಾರಿ ಹೇಳುತ್ತಿತ್ತು.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications