ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?
ಈ ಸಂವತ್ಸರಕ್ಕೆ 'ಪರಾಭವ' ಅದರ ನಿಜವಾದ ಅರ್ಥವೇನು? ಎಂಬ ಪ್ರಶ್ನೆಗಳು ಅನೇಕರ ಮನಸ್ಸಿನಲ್ಲಿ ಮೂಡುತ್ತದೆ. 'ಪರಾಭವ' ಎಂದರೆ ಸೋಲು ಎಂಬ ಅರ್ಥವಲ್ಲವೇ ಎಂಬ ಗೊಂದಲವೂ ಕೊಡ ಇದೆ. ಆದರೆ ಇದರ ಹಿಂದೆ ಇರುವ ಸಂಸ್ಕೃತ ಮತ್ತು ಜ್ಯೋತಿಷ್ಯ ಶಾಸ್ತ್ರದ ಅರ್ಥ ತುಂಬಾ ಆಳವಾಗಿದೆ. ಈ ಕುರಿತು ಶ್ರೀಪ್ರಸಾದ್ ಬೆಳಕವಾಡಿ ವಿವರಿಸುತ್ತಾರೆ.
ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ - 'ಈ ಸಂವತ್ಸರಕ್ಕೆ 'ಪರಾಭವ' ಎಂಬ ಹೆಸರೇಕೆ ? ಪರಾಭವ ಅಂದ್ರೆ ಸೋಲು ಅಂತ ಅರ್ಥವಲ್ಲವೇ? ಯಾಕೋ ಯುಗಾದಿ ಶುಭಾಶಯ ಹೇಳುವಾಗ ಕಸಿವಿಸಿ ಆಗುತ್ತದೆ.' ನಿಜ, 'ಪರಾಭವ' ಎಂದರೆ ನಮಗೆ 'ಸೋಲು' ಅಥವಾ 'ಅವಮಾನ' ಎಂಬ ಅರ್ಥವೇ ಮೊದಲು ನೆನಪಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಈ ಹೆಸರಿನಲ್ಲಿ ಅಡಗಿರುವ ಅರ್ಥವೇ ಬೇರೆ. ಹಿಂದೂ ಕಾಲಗಣನೆಯ 60 ಸಂವತ್ಸರಗಳಲ್ಲಿ 'ಪರಾಭವ' ಎಂಬುದು 40ನೇ ಸಂವತ್ಸರ. ಸಂಸ್ಕೃತದಲ್ಲಿ 'ಪರಾಭವ' ಎಂದರೆ ಕೇವಲ ಸೋಲು ಎಂದಲ್ಲ. ಪರ ಎಂದರೆ ಶ್ರೇಷ್ಠ ಅಥವಾ ಉನ್ನತ ಎಂಬ ಅರ್ಥವೂ ಇದೆ. ಭವ ಎಂದರೆ ಜನ್ಮ ಅಥವಾ ಉಗಮ.

ಈ ದೃಷ್ಟಿಕೋನದಿಂದ ನೋಡಿದಾಗ, ಯಾವುದೋ ಒಂದು ಹಂತವನ್ನು ದಾಟಿ 'ಹೊಸದಾಗಿ ಉದಯಿಸುವುದು' ಅಥವಾ 'ರೂಪಾಂತರಗೊಳ್ಳುವುದು' ಎಂಬ ಅರ್ಥ ಬರುತ್ತದೆ. ಹಳೆಯದರ ಅಂತ್ಯ ಮತ್ತು ಹೊಸದರ ಆರಂಭದ ಸಂಕೇತವಾಗಿ ಇದನ್ನು ನೋಡಬಹುದು.
ನಮ್ಮ ಶಾಸ್ತ್ರಗಳ ಪ್ರಕಾರ, ಅಹಂಕಾರದ ನಾಶವೇ ನಿಜವಾದ ಪರಾಭವ. ಒಬ್ಬ ವ್ಯಕ್ತಿ ತನ್ನ ಅಹಂಕಾರವನ್ನು ಸೋಲಿಸಿದಾಗ (ಪರಾಭವಗೊಳಿಸಿದಾಗ) ಮಾತ್ರ ಜ್ಞಾನೋದಯ ಸಾಧ್ಯ. ಆದ್ದರಿಂದ, ಈ ಸಂವತ್ಸರವು ಮನುಷ್ಯನು ತನ್ನ ಕೆಟ್ಟ ಗುಣಗಳನ್ನು ಮೆಟ್ಟಿ ನಿಂತು ಜಯಶಾಲಿಯಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ 'ವರಾಹಮಿಹಿರ'ನ ಸಂಹಿತೆಗಳ ಪ್ರಕಾರ, ಪರಾಭವ ಸಂವತ್ಸರದಲ್ಲಿ ಜನಿಸಿದವರು ಅಥವಾ ಈ ವರ್ಷದ ಪ್ರಭಾವವು ಹೀಗಿರುತ್ತದೆ - ಇದು ಅನಿಶ್ಚಿತತೆಯ ಕಾಲವೆಂದು ಪರಿಗಣಿಸಲ್ಪಟ್ಟರೂ, ಸತ್ಯವಂತರಿಗೆ ಮತ್ತು ಕಠಿಣ ಪರಿಶ್ರಮಿಗಳಿಗೆ ಇದು ಶುಭಫಲವನ್ನೇ ನೀಡುತ್ತದೆ ಹಾಗೂ ಹಳೆಯ ವ್ಯವಸ್ಥೆಗಳು ಪರಾಜಯಗೊಂಡು (ಸೋತು), ಹೊಸ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ.
ಅರವತ್ತು ವರ್ಷಗಳ ಚಕ್ರದಲ್ಲಿ ಬರುವ ಹೆಸರುಗಳು ಕೇವಲ ಶುಭ-ಅಶುಭಗಳ ಮೇಲೆ ನಿಂತಿಲ್ಲ. ಅವು ಪ್ರಕೃತಿಯ ವಿವಿಧ ಸ್ಥಿತ್ಯಂತರಗಳನ್ನು ಸೂಚಿಸುತ್ತವೆ. ಉದಾಹರಣೆಗೆ, 'ಕ್ಷಯ' ಎಂಬ ಹೆಸರಿನ ಸಂವತ್ಸರವೂ ಇದೆ, ಅದರರ್ಥ ಎಲ್ಲವೂ ನಾಶವಾಗುತ್ತದೆ ಎಂದಲ್ಲ, ಬದಲಾಗಿ ಒಂದು ಚಕ್ರ ಮುಗಿಯಿತು ಎಂದರ್ಥ.
ಒಟ್ಟಾರೆಯಾಗಿ, ಇಲ್ಲಿ 'ಪರಾಭವ' ಎಂದರೆ ಸೋತು ಮಲಗುವುದಲ್ಲ, ಬದಲಾಗಿ ದೋಷಗಳನ್ನು ಸೋಲಿಸಿ ವಿಜಯದತ್ತ ಮುನ್ನಡೆಯುವುದು.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
-
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Ugadi 2026 Movies: ಯುಗಾದಿ ದಿನವೇ ತೆರೆಕಾಣುತ್ತಿವೆ ಬಿಗ್ ಬಜೆಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
Ugadi Special Train: ವಿಶೇಷ ರೈಲು ಸಂಚಾರ, ಬೆಂಗಳೂರು-ಬೆಳಗಾವಿ ಪ್ರಯಾಣಿಕರೇ ಗಮನಿಸಿ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ













Click it and Unblock the Notifications