Get Updates
Get notified of breaking news, exclusive insights, and must-see stories!

ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?

ಈ ಸಂವತ್ಸರಕ್ಕೆ 'ಪರಾಭವ' ಅದರ ನಿಜವಾದ ಅರ್ಥವೇನು? ಎಂಬ ಪ್ರಶ್ನೆಗಳು ಅನೇಕರ ಮನಸ್ಸಿನಲ್ಲಿ ಮೂಡುತ್ತದೆ. 'ಪರಾಭವ' ಎಂದರೆ ಸೋಲು ಎಂಬ ಅರ್ಥವಲ್ಲವೇ ಎಂಬ ಗೊಂದಲವೂ ಕೊಡ ಇದೆ. ಆದರೆ ಇದರ ಹಿಂದೆ ಇರುವ ಸಂಸ್ಕೃತ ಮತ್ತು ಜ್ಯೋತಿಷ್ಯ ಶಾಸ್ತ್ರದ ಅರ್ಥ ತುಂಬಾ ಆಳವಾಗಿದೆ. ಈ ಕುರಿತು ಶ್ರೀಪ್ರಸಾದ್ ಬೆಳಕವಾಡಿ ವಿವರಿಸುತ್ತಾರೆ.

ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ - 'ಈ ಸಂವತ್ಸರಕ್ಕೆ 'ಪರಾಭವ' ಎಂಬ ಹೆಸರೇಕೆ ? ಪರಾಭವ ಅಂದ್ರೆ ಸೋಲು ಅಂತ ಅರ್ಥವಲ್ಲವೇ? ಯಾಕೋ ಯುಗಾದಿ ಶುಭಾಶಯ ಹೇಳುವಾಗ ಕಸಿವಿಸಿ ಆಗುತ್ತದೆ.' ನಿಜ, 'ಪರಾಭವ' ಎಂದರೆ ನಮಗೆ 'ಸೋಲು' ಅಥವಾ 'ಅವಮಾನ' ಎಂಬ ಅರ್ಥವೇ ಮೊದಲು ನೆನಪಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಈ ಹೆಸರಿನಲ್ಲಿ ಅಡಗಿರುವ ಅರ್ಥವೇ ಬೇರೆ. ಹಿಂದೂ ಕಾಲಗಣನೆಯ 60 ಸಂವತ್ಸರಗಳಲ್ಲಿ 'ಪರಾಭವ' ಎಂಬುದು 40ನೇ ಸಂವತ್ಸರ. ಸಂಸ್ಕೃತದಲ್ಲಿ 'ಪರಾಭವ' ಎಂದರೆ ಕೇವಲ ಸೋಲು ಎಂದಲ್ಲ. ಪರ ಎಂದರೆ ಶ್ರೇಷ್ಠ ಅಥವಾ ಉನ್ನತ ಎಂಬ ಅರ್ಥವೂ ಇದೆ. ಭವ ಎಂದರೆ ಜನ್ಮ ಅಥವಾ ಉಗಮ.

SriPrasad Belakavadi

ಈ ದೃಷ್ಟಿಕೋನದಿಂದ ನೋಡಿದಾಗ, ಯಾವುದೋ ಒಂದು ಹಂತವನ್ನು ದಾಟಿ 'ಹೊಸದಾಗಿ ಉದಯಿಸುವುದು' ಅಥವಾ 'ರೂಪಾಂತರಗೊಳ್ಳುವುದು' ಎಂಬ ಅರ್ಥ ಬರುತ್ತದೆ. ಹಳೆಯದರ ಅಂತ್ಯ ಮತ್ತು ಹೊಸದರ ಆರಂಭದ ಸಂಕೇತವಾಗಿ ಇದನ್ನು ನೋಡಬಹುದು.

ಕರ್ನಾಟಕದಲ್ಲಿ ಯುಗಾದಿ ಪಾಡ್ಯ, ವರ್ಷತೊಡಕು ಯಾವತ್ತು? ಮಾರ್ಚ್‌ -19 ಅಥವಾ 20: ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ
ಕರ್ನಾಟಕದಲ್ಲಿ ಯುಗಾದಿ ಪಾಡ್ಯ, ವರ್ಷತೊಡಕು ಯಾವತ್ತು? ಮಾರ್ಚ್‌ -19 ಅಥವಾ 20: ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ

ನಮ್ಮ ಶಾಸ್ತ್ರಗಳ ಪ್ರಕಾರ, ಅಹಂಕಾರದ ನಾಶವೇ ನಿಜವಾದ ಪರಾಭವ. ಒಬ್ಬ ವ್ಯಕ್ತಿ ತನ್ನ ಅಹಂಕಾರವನ್ನು ಸೋಲಿಸಿದಾಗ (ಪರಾಭವಗೊಳಿಸಿದಾಗ) ಮಾತ್ರ ಜ್ಞಾನೋದಯ ಸಾಧ್ಯ. ಆದ್ದರಿಂದ, ಈ ಸಂವತ್ಸರವು ಮನುಷ್ಯನು ತನ್ನ ಕೆಟ್ಟ ಗುಣಗಳನ್ನು ಮೆಟ್ಟಿ ನಿಂತು ಜಯಶಾಲಿಯಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

ಜ್ಯೋತಿಷ್ಯ ಶಾಸ್ತ್ರದ 'ವರಾಹಮಿಹಿರ'ನ ಸಂಹಿತೆಗಳ ಪ್ರಕಾರ, ಪರಾಭವ ಸಂವತ್ಸರದಲ್ಲಿ ಜನಿಸಿದವರು ಅಥವಾ ಈ ವರ್ಷದ ಪ್ರಭಾವವು ಹೀಗಿರುತ್ತದೆ - ಇದು ಅನಿಶ್ಚಿತತೆಯ ಕಾಲವೆಂದು ಪರಿಗಣಿಸಲ್ಪಟ್ಟರೂ, ಸತ್ಯವಂತರಿಗೆ ಮತ್ತು ಕಠಿಣ ಪರಿಶ್ರಮಿಗಳಿಗೆ ಇದು ಶುಭಫಲವನ್ನೇ ನೀಡುತ್ತದೆ ಹಾಗೂ ಹಳೆಯ ವ್ಯವಸ್ಥೆಗಳು ಪರಾಜಯಗೊಂಡು (ಸೋತು), ಹೊಸ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ.

ಮೀನ ರಾಶಿ ಯುಗಾದಿ ವರ್ಷ ಭವಿಷ್ಯ; ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
ಮೀನ ರಾಶಿ ಯುಗಾದಿ ವರ್ಷ ಭವಿಷ್ಯ; ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಅರವತ್ತು ವರ್ಷಗಳ ಚಕ್ರದಲ್ಲಿ ಬರುವ ಹೆಸರುಗಳು ಕೇವಲ ಶುಭ-ಅಶುಭಗಳ ಮೇಲೆ ನಿಂತಿಲ್ಲ. ಅವು ಪ್ರಕೃತಿಯ ವಿವಿಧ ಸ್ಥಿತ್ಯಂತರಗಳನ್ನು ಸೂಚಿಸುತ್ತವೆ. ಉದಾಹರಣೆಗೆ, 'ಕ್ಷಯ' ಎಂಬ ಹೆಸರಿನ ಸಂವತ್ಸರವೂ ಇದೆ, ಅದರರ್ಥ ಎಲ್ಲವೂ ನಾಶವಾಗುತ್ತದೆ ಎಂದಲ್ಲ, ಬದಲಾಗಿ ಒಂದು ಚಕ್ರ ಮುಗಿಯಿತು ಎಂದರ್ಥ.

ಒಟ್ಟಾರೆಯಾಗಿ, ಇಲ್ಲಿ 'ಪರಾಭವ' ಎಂದರೆ ಸೋತು ಮಲಗುವುದಲ್ಲ, ಬದಲಾಗಿ ದೋಷಗಳನ್ನು ಸೋಲಿಸಿ ವಿಜಯದತ್ತ ಮುನ್ನಡೆಯುವುದು.

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+