ಸುಪ್ರೀಂ ಕೋರ್ಟ್; ಒಂಬತ್ತು ನ್ಯಾಯಮೂರ್ತಿಗಳ ಪದೋನ್ನತಿಗೆ ಕೇಂದ್ರ ಒಪ್ಪಿಗೆ
ನವದೆಹಲಿ, ಆಗಸ್ಟ್ 26: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸೇರಿದಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದ ಎಲ್ಲಾ ಒಂಬತ್ತು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್ನ ಇಬ್ಬರು ಸೇರಿ ಒಟ್ಟು ಎಂಟು ನ್ಯಾಯಮೂರ್ತಿಗಳು ಹಾಗೂ ಒಬ್ಬರು ವಕೀಲರು ಈ ಪಟ್ಟಿಯಲ್ಲಿದ್ದರು. ಒಂಬತ್ತು ಮಂದಿಯಲ್ಲಿ ಮೂವರು ಮಹಿಳೆಯರು ಇದ್ದರು. ಎಲ್ಲರ ಹೆಸರುಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅನುಮತಿಗೆ ಕಳುಹಿಸಲಾಗಿದೆ.
ಶಿಫಾರಸು
ಪಟ್ಟಿಯಲ್ಲಿದ್ದ
ಹೆಸರುಗಳು:
ಕರ್ನಾಟಕ
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಅಭಯ್
ಶ್ರೀನಿವಾಸ
ಓಕಾ
ಹಾಗೂ
ನ್ಯಾಯಮೂರ್ತಿ
ಬಿ.ವಿ.
ನಾಗರತ್ನಾ,
ಕೇರಳ
ಹೈಕೋರ್ಟ್
ನ್ಯಾಯಮೂರ್ತಿ
ಸಿ.ಟಿ.
ರವಿಕುಮಾರ್,
ಮದ್ರಾಸ್
ಹೈಕೋರ್ಟ್
ನ್ಯಾಯಮೂರ್ತಿ
ಎಂ.ಎಂ.
ಸುಂದ್ರೇಶ್,
ಗುಜರಾತ್
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿ
ವಿಕ್ರಂನಾಥ್
ಹಾಗೂ
ನ್ಯಾಯಮೂರ್ತಿ
ಬೇಲಾ
ಎಂ
ತ್ರಿವೇದಿ,
ಸಿಕ್ಕಿಂ
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಜಿತೇಂದ್ರ
ಕುಮಾರ್
ಮಹೇಶ್ವರಿ,
ತೆಲಂಗಾಣ
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಹಿಮಾ
ಕೊಹ್ಲಿ
ಅವರ
ಹೆಸರನ್ನು
ಶಿಫಾರಸು
ಮಾಡಲಾಗಿತ್ತು.
ಇದೀಗ
ಎಲ್ಲಾ
ಹೆಸರುಗಳಿಗೂ
ಕೇಂದ್ರ
ಒಪ್ಪಿಗೆ
ಸೂಚಿಸಿದೆ.
ಬಿ.ವಿ.
ನಾಗರತ್ನ
ಮೊದಲ
ಮಹಿಳಾ
ಮುಖ್ಯ
ನ್ಯಾಯಮೂರ್ತಿಯಾಗುವ
ನಿರೀಕ್ಷೆ
ಪ್ರಸ್ತುತ
ಕರ್ನಾಟಕ
ಹೈಕೋರ್ಟ್
ನ್ಯಾಯಮೂರ್ತಿಯಾಗಿರುವ
ಬಿ.ವಿ.
ನಾಗರತ್ನ
ಅವರು
2027ರಲ್ಲಿ,
ಅಂದರೆ
ಅವರು
ನಿವೃತ್ತರಾಗುವ
ಕೆಲವು
ದಿನಗಳ
ಮುನ್ನ
ಸುಪ್ರೀಂ
ಕೋರ್ಟ್
ಮುಖ್ಯ
ನ್ಯಾಯಮೂರ್ತಿಯಾಗುವ
ನಿರೀಕ್ಷೆಯಿದೆ.
2027ರಲ್ಲಿ
ಸಿಜೆಐ
ಆಗಿ
ಇವರು
ನೇಮಕವಾದರೆ,
ಭಾರತದ
ಮೊದಲ
ಮಹಿಳಾ
ಮುಖ್ಯ
ನ್ಯಾಯಮೂರ್ತಿಯಾಗುವುದರೊಂದಿಗೆ,
ದೇಶದ
ನ್ಯಾಯಾಂಗ
ವ್ಯವಸ್ಥೆಯಲ್ಲಿ
ಇದು
ಐತಿಹಾಸಿಕ
ಕ್ಷಣವಾಗಲಿದೆ.
2027ರಲ್ಲಿ ಭಾರತದ ಪ್ರಥಮ ಮಹಿಳಾ ಸಿಜೆಐ ಆಗಲಿದ್ದಾರೆ ಬಿ.ವಿ. ನಾಗರತ್ನ
ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಇದುವರೆಗೂ ಮಹಿಳಾ ನ್ಯಾಯಮೂರ್ತಿ ಈ ಉನ್ನತ ಹುದ್ದೆಗೆ ಏರಿರಲಿಲ್ಲ. ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರೆ, ತಂದೆ ಹಾಗೂ ಮಗಳಿಬ್ಬರೂ ಸಿಜೆಐ ಆದ ಮತ್ತೊಂದು ದಾಖಲೆ ಸೃಷ್ಟಿಯಾಗಲಿದೆ. ಅವರ ತಂದೆ ಇಎಸ್ ವೆಂಕಟರಾಮಯ್ಯ ಅವರು 1989ರಲ್ಲಿ ಆರು ತಿಂಗಳ ಕಾಲ ಸಿಜೆಐ ಆಗಿದ್ದವರು.
ಇದರೊಂದಿಗೆ, ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಒಂದೇ ಬಾರಿ ಸುಪ್ರೀಂ ಕೋರ್ಟ್ಗೆ ನೇಮಿಸುತ್ತಿರುವುದು ಕೂಡ ಪ್ರಥಮವೆನಿಸಿಕೊಂಡಿದೆ.
ಸುಪ್ರೀಂಕೋರ್ಟ್ನ ಮುಂದಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು. ಆದರೆ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ಸಿಜೆಐ ಬೊಬ್ಡೆ ಯಾವುದೇ ಶಿಫಾರಸುಗಳನ್ನು ಮಾಡುವುದು ಸರಿಯಲ್ಲ ಎಂದು ಕೊಲಿಜಿಯಂನಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಸುಪ್ರೀಂ ನ್ಯಾಯಾಧೀಶರುಗಳ ನೇಮಕದ ಊಹಾತ್ಮಕ ವರದಿ: ಸಿಜೆಐ ಅಸಮಾಧಾನ
ಇದೀಗ ಸಿಜೆಐ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದ ಎಲ್ಲಾ 9 ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.
Centre Clears The Appointment Of Nine Supreme Court Judges Including Three Women, Media Reports pic.twitter.com/uVu6BgxJkf
— Live Law (@LiveLawIndia) August 26, 2021
ಈಚೆಗೆ ಈ ಶಿಫಾರಸಿನ ಸಂಬಂಧ ಮಾಧ್ಯಮ ವರದಿಗಳ ಕುರಿತು ಸಿಜೆಐ ಎನ್.ವಿ. ರಮಣ ಅಸಮಾಧಾನ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪದೋನ್ನತಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂಬ ಮಾಧ್ಯಮಗಳ ವರದಿಗಳ ಕುರಿತು ಮಾತನಾಡಿದ್ದ ಅವರು, ಈ ವರದಿಗಳು ಊಹಾಪೋಹ. ಇನ್ನೂ ಆಯ್ಕೆ ಪ್ರಕ್ರಿಯೆಯೇ ಮುಕ್ತಾಯವಾಗಿಲ್ಲ. ಮಾಧ್ಯಮಗಳು ಈ ರೀತಿ ಊಹೆ ಮಾಡಿ ವರದಿ ಮಾಡಿರುವುದು ತೀರಾ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದರು.
ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಅದರದ್ದೇ ಆದ ಘನತೆಯಿದೆ. ಈ ನೇಮಕಾತಿ ಪ್ರಕ್ರಿಯೆ ಬಹಳ ಪವಿತ್ರವಾದದ್ದು. ಮಾಧ್ಯಮಗಳು ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯ ಪಾವಿತ್ರತ್ಯೆ ಅರ್ಥೈಸಿಕೊಂಡು ಗೌರವ ನೀಡಬೇಕು ಎಂದು ಹೇಳಿದ್ದರು.