ಜೂನ್ 15 ರೊಳಗೆ ದೆಹಲಿ ಕೇಂದ್ರ ಕಚೇರಿ ಖಾಲಿ ಮಾಡಿ: ಎಎಪಿಗೆ ಸುಪ್ರೀಂ ಕೋರ್ಟ್ ಆದೇಶ!
ನವದೆಹಲಿ, ಮಾರ್ಚ್ 04: ದೆಹಲಿಯ ರೋಸ್ ಅವೆನ್ಯೂ ಪ್ರದೇಶದಲ್ಲಿ ದೆಹಲಿ ಹೈಕೋರ್ಟ್ನ ಮೂಲಸೌಕರ್ಯ ವಿಸ್ತರಣೆಗೆ ಭೂಮಿಯನ್ನು ಮಂಜೂರು ಮಾಡಿರುವುದರಿಂದ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಕಚೇರಿಯನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ದೆಹಲಿಯ ರೋಸ್ ಅವೆನ್ಯೂ ಪ್ರದೇಶದಲ್ಲಿ ತನ್ನ ಕಚೇರಿಯನ್ನು ಮುಂದುವರಿಸಲು ಎಎಪಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಜಾಗವನ್ನು ಖಾಲಿ ಮಾಡಲು ಆಮ್ ಆದ್ಮಿ ಪಕ್ಷಕ್ಕೆ ಜೂನ್ 15 ರವರೆಗೆ ಕಾಲಾವಕಾಶ ನೀಡಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಆಡಳಿತರೂಢ ಪಕ್ಷಕ್ಕೆ ಆವರಣವನ್ನು ಖಾಲಿ ಮಾಡಲು ನ್ಯಾಯಾಲಯವು ಹೆಚ್ಚುವರಿ ಸಮಯವನ್ನು ನೀಡಿದೆ.

ಜಿಲ್ಲಾ ನ್ಯಾಯಾಲಯವನ್ನು ವಿಸ್ತರಿಸುವ ಉದ್ದೇಶದಿಂದ ದೆಹಲಿ ಹೈಕೋರ್ಟ್ಗೆ ಮಂಜೂರು ಮಾಡಲಾದ ಪ್ಲಾಟ್ನಲ್ಲಿರುವುದರಿಂದ ಕಚೇರಿಯನ್ನು ತೆರವು ಮಾಡಲು ಆದೇಶ ಬಂದಿದೆ. ತನ್ನ ಕಚೇರಿಗಳಿಗೆ ಭೂಮಿ ಮಂಜೂರು ಮಾಡಲು ಭೂಮಿ ಮತ್ತು ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಲು ಎಎಪಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಪಕ್ಷದ ಮನವಿಯನ್ನು ನಾಲ್ಕು ವಾರಗಳಲ್ಲಿ ಪ್ರಕ್ರಿಯೆಗೊಳಿಸುವಂತೆ ಭೂ ಮತ್ತು ಅಭಿವೃದ್ಧಿ ಕಚೇರಿಗೆ ನಿರ್ದೇಶನ ನೀಡಿದ್ದು, ನಿಗದಿತ ಸಮಯದೊಳಗೆ ತನ್ನ ನಿರ್ಧಾರವನ್ನು ತಿಳಿಸುವಂತೆ ಇಲಾಖೆಗೆ ತಿಳಿಸಿದೆ. ಇನ್ನು, ಆಮ್ ಆದ್ಮಿ ಪಕ್ಷವು ರೂಸ್ ಅವೆನ್ಯೂ ನ್ಯಾಯಾಲಯದ ಬಳಿಯಿರುವ ತನ್ನ ಪಕ್ಷದ ಕಚೇರಿ ಅತಿಕ್ರಮಣವಲ್ಲ ಎಂದು ವಾದಿಸಿದೆ. ಅದನ್ನು ನ್ಯಾಯಾಲಯದ ವಿಸ್ತರಣೆಗೆ ಹಂಚುವ ಮೊದಲೇ ಪಕ್ಷಕ್ಕೆ ಹಂಚಲಾಗಿತ್ತು ಎಂದು ವಾದಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಎಎಪಿ ಪರ ವಕೀಲ ಎಎಂ ಸಿಂಘ್ವಿ, 1993 ಮತ್ತು 2015ರ ನಡುವೆ ಈ ಭೂಮಿಯನ್ನು ಎನ್ಸಿಟಿ ಬಳಸಿಕೊಂಡಿದ್ದು, ಆ ಭೂಮಿಯನ್ನು ಎಎಪಿಗೆ ಹಂಚಿಕೆ ಮಾಡಲಾಗಿದೆ. ಎಎಪಿ ಭಾರತದ 6 ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಬಿಜೆಪಿಗೆ ಕಚೇರಿ ಇದೆ. ಆದರೂ, ಚುನಾವಣೆಗೆ 2 ತಿಂಗಳ ಮೊದಲು, ಪಕ್ಷವನ್ನು ರಸ್ತೆಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.
ಬಾದರ್ಪುರದಲ್ಲಿ ತನ್ನ ಕಚೇರಿಯನ್ನು ನಿರ್ಮಿಸಲು ಎಎಪಿಗೆ ಹೇಳಲಾಗಿದೆ ಎಂದು ಎಎಪಿ ಪರ ವಕೀಲ ಎಎಂ ಸಿಂಘ್ವಿ ಹೇಳಿದ್ದಾರೆ. ಆ ಪ್ರದೇಶದಲ್ಲಿ ಎಲ್ಎನ್ಡಿಒ ಎರಡು ಪ್ಲಾಟ್ಗಳನ್ನು ಹೊಂದಿದ್ದು ಅದನ್ನು ಎಎಪಿಗೆ ಹಂಚಬಹುದು. ಆದರೆ, ಬಾದರ್ಪುರಕ್ಕೆ ಆಫೀಸ್ ಶಿಫ್ಟ್ ಮಾಡುವಂತೆ ಎಎಪಿಗೆ ಸೂಚಿಸಿದರೆ, ಇತರ ಎಲ್ಲ ಪಕ್ಷಗಳಿಗೂ ಕೂಡ ಅದೇ ರೀತಿ ಮಾಡಬೇಕು. ಕೇಂದ್ರ ದೆಹಲಿಯಲ್ಲಾದರೂ ಪಕ್ಷಕ್ಕೆ ಜಾಗ ಸಿಗಬೇಕು ಎಂದಿದ್ದಾರೆ.
-
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications