ಬೆಂಗಳೂರು: ಪ್ರಮುಖ ಬಸ್ ಟರ್ಮಿನಲ್ ನಿರ್ಮಾಣ ಪೂರ್ಣ, ಉದ್ಘಾಟನೆ ಶೀಘ್ರ
ನಿತ್ಯ ಲಕ್ಷಾಂತರ ಮಂದಿಯ ಪ್ರಯಾಣಕ್ಕೆ ಆಸರೆಯಾದ, ನಗರದ ಹೃದಯಭಾಗದಿಂದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಒದಗಿಸುವ ಬೆಂಗಳೂರಿನ ಬಸ್ ನಿಲ್ದಾಣ ಟರ್ಮಿನಲ್ ಉದ್ಘಾಟನೆಗೆ ಸಜ್ಜಾಗಿದೆ. ಯಾವ ನಿಲ್ದಾಣ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 08: ನಿತ್ಯ ಲಕ್ಷಾಂತರ ಮಂದಿಯ ಪ್ರಯಾಣಕ್ಕೆ ಆಸರೆಯಾದ, ನಗರದ ಹೃದಯಭಾಗದಿಂದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಒದಗಿಸುವ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣದ ಟರ್ಮಿನಲ್ ಉದ್ಘಾಟನೆಗೆ ಸಜ್ಜಾಗಿದೆ.
ಸುಮಾರು ಆರು ವರ್ಷಗಳ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಶಂಕುಸ್ಥಾಪನೆ ಆಗಿದ್ದ ಸಿಲಿಕಾನ್ ಸಿಟಿಯ ಬೆಂಗಳೂರಿಗೆ ವಿವಿಧ ಅಷ್ಟ ದಿಕ್ಕುಗಳಿಂದಲೂ ಸಂರ್ಪಕ ಹೊಂದುವ ಕಲಾಸಿಪಾಳ್ಯ ಬಸ್ ನಿಲ್ದಾಣ ಟರ್ಮಿನಲ್ ಕೆಲಸ ಪೂರ್ಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯು ಆಗಲಿದೆ. ಈ ನಿಲ್ದಾಣಕ್ಕೆ ಬರುವ ಬಸ್ಗಳು ಕೇವಲ ಬೆಂಗಳೂರಿಗೆ ಮಾತ್ರ ಸಿಮೀತವಾಗಿಲ್ಲ. ಬದಲಾಗಿ ನಗರದಿಂದ ದೇಶದ ವಿವಿಧ ನಗರಗಳು, ರಾಜ್ಯಗಳಿಗೆ ಇಲ್ಲಿಂದಲೂ ಬಸ್ಗಳು ತೆರಳುತ್ತವೆ.
ಖಾಸಗಿ ಬಸ್ಗಳ ನಿಲುಗಡೆ, ಸಾರ್ವಜನಿಕರ ನೆಚ್ಚಿನ ತಾಣವು ಆಗಿರುವ ಕಲಾಸಿಪಾಳ್ಯದಲ್ಲಿ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 4.13 ಎಕರೆ ಪ್ರದೇಶದಲ್ಲಿರುವ ಈ ಯೋಜನೆಗೆ ಒಟ್ಟು 60 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿರ್ಮಾಣ ಮಾಡಿಸಿದೆ. ಅನೇಕ ವರ್ಷಗಳಿಂದ ಇಂತದ್ದೊಂದು ವ್ಯವಸ್ಥೆಗೆ ಬೇಡಿಕಿ ಇತ್ತು ಎನ್ನಲಾಗಿದೆ.

2016ರ ಆಸುಪಾಸಿಗೆ ಆರಂಭವಾದ ಟರ್ಮಿನಲ್ ಯೋಜನೆ ನಿರ್ಮಾಣ ಯೋಜನೆಯು 2018ರ ಡಿಸೆಂಬರ್ನಲ್ಲಿಯೇ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸುಮಾರು ನಾಲ್ಕು ವರ್ಷ ನಂತರ ತಡವಾಗಿ ಪೂರ್ಣಗೊಂಡಿದೆ.
ಸಂಚಾರ, ನಿಲುಗಡೆ ಕಿರಿಕಿರಿ ತಪ್ಪಲಿದೆ
ಇದುವರೆಗೆ ಕಲಾಸಿಪಾಳ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಅಂತರ್ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಪಕ್ಕದ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿವೆ. ಅವುಗಳಿಗೆ ಆದಷ್ಟ ಶೀಘ್ರವೇ ಈ ನಿಲ್ದಾಣ ಸಹಾಯಕ್ಕೆ ಬರಲಿದೆ. ಒಟ್ಟು 60 ಕೋಟಿ ರೂ. ಪೈಕಿ ಕೇಂದ್ರ ಸರ್ಕಾರ ನಗರ ಭೂ ಸಾರಿಗೆ ನಿರ್ದೇಶನಾಲಯದಡಿ 25 ಕೋಟಿ ರೂಪಾಯಿಗಳನ್ನು ಭರಿಸಿದರೆ ಬಾಕಿ ಹಣವನ್ನು ಬೆಂಗಳೂರ ಮಹಾನಗರ ಸಾರಿಗೆ ಸಂಸ್ಥೆಯೇ ಒದಗಿಸಿ ಟರ್ಮಿನಲ್ ನಿರ್ಮಿಸಿದೆ.

ಸದಾ ಜನದಟ್ಟಣೆಯಿಂದ ಕೂಡಿರುವ ಕಲಾಸಿಪಾಳ್ಯ ಪ್ರದೇಶಕ್ಕೆ ನಿತ್ಯ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ. ಈ ನಿಲ್ದಾಣದಿಂದಲೇ ಅವರೆಲ್ಲ ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ಬೆಂಗಳೂರಿಗೆ ಹತ್ತಿರವಿರುವ ಪ್ರದೇಶಗಳು, ಹೊರವಲಯದ ಸ್ಥಳಗಳ ರೈತರು ತಾವು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಇನ್ನಿತರ ಕೃಷಿ ಉತ್ಪನ್ನಗಳನ್ನು ಬಸ್ಗಳಲ್ಲಿಯೇ ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅವರೆಲ್ಲ ಓಡಾಟಕ್ಕೆ ರಸ್ತೆಯಲ್ಲೇ ನಿಲ್ಲುವ ಬಸ್ಗಳಿಂದ ತೊಂದರೆ ಆಗುತ್ತಿತ್ತು, ಆದಷ್ಟು ಶೀಘ್ರವೇ ಇದೆಲ್ಲ ಕಿರಿಕಿರಿಗಳು ನಿವಾರಣೆ ಆಗಲಿವೆ.
ಈ ಟರ್ಮಿನಲ್ ಏಕಕಾಲದಲ್ಲಿ 18 ಬಿಎಂಟಿಸಿ, ಆರು ಕೆಎಸ್ಆರ್ಟಿಸಿ ಹಾಗೂ ಆರು ಖಾಸಗಿ ಬಸ್ಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications