ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಿಎಂ ಸಾರಥ್ಯ!
ಬೆಂಗಳೂರು, ಸೆ.27 : ನೆವೆಂಬರ್ ತಿಂಗಳು ಹತ್ತಿರ ಬರುತ್ತಿದೆ. ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಾಧಕರನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳೇ ಸಮತಿಯ ಅಧ್ಯಕ್ಷರಾಗಿದ್ದಾರೆ.
ರಾಜ್ಯೋತ್ಸವ
ಪ್ರಶಸ್ತಿ
ಆಯ್ಕೆಗಾಗಿ
ಕಾನೂನು
ಮತ್ತು
ಸಂಸದೀಯ
ವ್ಯವಹಾರಗಳ
ಸಚಿವ
ಟಿ.ಬಿ.ಜಯಚಂದ್ರ
ಅವರನ್ನೊಳಗೊಂಡ
ಸಲಹಾ
ಸಮಿತಿಯನ್ನು
ಸರ್ಕಾರ
ರಚಿಸಿದೆ.
ಸಮಿತಿಗೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಅಧ್ಯಕ್ಷರಾಗಿದ್ದಾರೆ.
ಸಮಿತಿಯಲ್ಲಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಎಚ್.ಕೆ. ಪಾಟೀಲ್, ಕೆ.ಜೆ.ಜಾರ್ಜ್, ಉಮಾಶ್ರೀ, ಎಚ್.ಸಿ.ಮಹದೇವಪ್ಪ, ಅವರು ಸ್ಥಾನ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಶಿಲ್ಪಕಲೆ, ಲಲಿತಕಲಾ ಅಕಾಡೆಮಿಗಳ ಅಧ್ಯಕ್ಷರು ಸಮಿತಿ ಸದಸ್ಯರಾಗಿದ್ದಾರೆ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು 50ಜನರಿಗೆ ಮಾತ್ರ ನೀಡಬೇಕೆಂದು ಮಾರ್ಗಸೂಚಿ ರಚಿಸಲಾಗಿದೆ. ಪ್ರಶಸ್ತಿಗೆ ಶಿಫಾರಸು ಮಾಡುವ ಮುನ್ನ ಸಾಧಕರ ಸಾಮಾಜಿಕ ಹಿನ್ನೆಲೆ, ನಿಷ್ಕಳಂಕ ಸೇವೆ, ಸಾಮಾಜಿಕ ಕಳಕಳಿ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು ನಿಯಮ ರೂಪಿಸಲಾಗಿದೆ.
ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಹಾಗೂ ಕ್ಷೇತ್ರವಾರು ಪ್ರಾತಿನಿಧ್ಯದ ಆಧಾರದ ಮೇಲೆ ಸಾಧಕರ ಆಯ್ಕೆ ನಡೆಯಲಿದೆ. ಅರ್ಜಿಗಳ ಪರಿಷ್ಕರಣೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತರು ಪ್ರಶಸ್ತಿಗೆ ಬಂದ ಅರ್ಜಿಗಳ ಪರಿಷ್ಕರಣೆ ಮಾಡಿ ಪಟ್ಟಿ ಸಿದ್ಧಪಡಿಸಿ ಆಯ್ಕೆ ಸಮಿತಿಗೆ ನೀಡಲಿದ್ದಾರೆ.
ಸಮಿತಿಯು ಆಯುಕ್ತರು ನೀಡಿದ ಪಟ್ಟಿಯ ಬಗ್ಗೆ ಚರ್ಚಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ಅಂತಿಮ ಒಪ್ಪಿಗೆ ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪಡೆಯುವವರ ಹೆಸರುಗಳನ್ನು ಪ್ರಕಟಿಸಲಾಗುತ್ತದೆ.
ಮೊದಲ ಅಧ್ಯಕ್ಷರು : ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಸರ್ಕಾರದಲ್ಲಿರುವ ಹಿರಿಯ ಸಚಿವರು, ನಾಡು-ನುಡಿ, ಕಲೆ-ಸಾಹಿತ್ಯ ಸೇರಿದಂತೆ ಸಾಂಸ್ಕೃತಿಕ ವಲಯದ ಬಗ್ಗೆ ತಿಳಿದುಕೊಂಡವರು ಅಧ್ಯಕ್ಷರಾಗಿರುತ್ತಿದ್ದರು.
ಆದರೆ, ಸಿಎಂ ಸಿದ್ದರಾಮಯ್ಯ ಈ ಬಾರಿ ಸಮಿತಿಗೆ ತಾವೇ ಅಧ್ಯಕ್ಷರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಅರ್ಹರಿಗೂ ಪ್ರಶಸ್ತಿ ದೊರಕುತ್ತದೆಯೇ ಕಾದು ನೋಡಬೇಕು.