ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಮೂರು ಬೇಡಿಕೆ ಇಟ್ಟ ಜೆಡಿಎಸ್
ಬೆಂಗಳೂರು, ಸೆಪ್ಟೆಂಬರ್, 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಇತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆಗಳು ಆರಂಭವಾಗಿದ್ದು, ಮೂರು ಸ್ಥಾಯಿ ಸಮಿತಿಗಳ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ.
ಜೆಡಿಎಸ್
ಶಾಸಕರಾದ
ಜಮೀರ್
ಅಹಮದ್
ಖಾನ್,
ಕೆ.ಗೋಪಾಲಯ್ಯ
ಮತ್ತು
ಅಖಂಡ
ಶ್ರೀನಿವಾಸಮೂರ್ತಿ
ಅವರು
ಗುರುವಾರ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರನ್ನು
ಭೇಟಿ
ಮಾಡಿದ್ದರು.
ಈ
ಸಮಯದಲ್ಲಿ
ಮೂರು
ಸ್ಥಾಯಿ
ಸಮಿತಿಗಳ
ಸ್ಥಾನಕ್ಕೆ
ಬೇಡಿಕೆ
ಇಟ್ಟಿದ್ದಾರೆ
ಎಂದು
ಪಕ್ಷದ
ಮೂಲಗಳು
ತಿಳಿಸಿವೆ.
[ಹೇಗೆ
ನಡೆಯಲಿದೆ
ಮೇಯರ್
ಚುನಾವಣೆ?]
ಮೈತ್ರಿ ಮತ್ತು ಸ್ಥಾನ ಹಂಚಿಕೆಯ ಕುರಿತು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ಚರ್ಚೆ ನಡೆಸಿ ಎಂದು ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಶಾಸಕರು ಇಂದು ಸಂಜೆ ರಾಮಲಿಂಗಾ ರೆಡ್ಡಿ ಅವರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ. [ಮೈತ್ರಿ ಮಾಡಿಕೊಂಡರೆ ಯಾರಿಗೆ ಲಾಭ ಹೆಚ್ಚು]
ಯಾವ ಸ್ಥಾಯಿ ಸಮಿತಿಗಳು : ಶುಕ್ರವಾರ ಮೇಯರ್ ಆಯ್ಕೆ ಜೊತೆಗೆ 12 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. 12 ಸಮಿತಿಗಳ ಪೈಕಿ ಜೆಡಿಎಸ್ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ನಗರಾಭಿವೃದ್ಧಿ ಮತ್ತು ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದೆ.
ಸ್ಥಾಯಿ
ಸಮಿತಿಗಳು
*
ತೆರಿಗೆ
ಮತ್ತು
ಆರ್ಥಿಕ
*
ಸಾರ್ವಜನಿಕ
ಆರೋಗ್ಯ
*
ನಗರ
ಯೋಜನೆ
ಮತ್ತು
ಅಭಿವೃದ್ಧಿ
*
ಬೃಹತ್
ಸಾರ್ವಜನಿಕ
ಕಾಮಗಾರಿ
*
ವಾರ್ಡ್
ಮಟ್ಟದ
ಸಾರ್ವಜನಿಕ
ಕಾಮಗಾರಿ
*
ಲೆಕ್ಕಪತ್ರ
*
ಶಿಕ್ಷಣ
*
ಸಾಮಾಜಿಕ
ನ್ಯಾಯ
*
ಅಪೀಲುಗಳ
ಸಮಿತಿ
*
ತೋಟಗಾರಿಕೆ
*
ಮಾರುಕಟ್ಟೆ
*
ಸಿಬ್ಬಂದಿ
ಮತ್ತು
ಆಡಳಿತ
ಸುಧಾರಣೆ