ಎಂಎಲ್ಎ ಕಟ್ಟೆಯ ಮೇಲೆ ಕುಂತವರಿಗೆ ಗೆಲುವು

ಶಿರಹಟ್ಟಿ ಮತ್ತು ರೋಣ ಕ್ಷೇತ್ರಗಳ ಮಧ್ಯೆ ಇರುವ ಹೇಮರೆಡ್ಡಿ ಸರ್ಕಲ್ ಎಂಎಲ್ಎ ಕಟ್ಟೆ ಎಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ನೋಡಲು ಅಂತಹ ಆಕರ್ಷಣೆಯಿಲ್ಲ, ಇರುವುದು ಕೇವಲ ಒಂದು ಕಲ್ಲುಬೆಂಚು ಮತ್ತು ಹುಣಸೇ ಮರ. ಆದರೆ, ಈ ಕಟ್ಟೆ ಹತ್ತಿಳಿದ ಅಭ್ಯರ್ಥಿ ಇದುವರೆಗೂ ಚುನಾವಣೆ ಸೋತಿಲ್ಲ ಎಂಬುದು ವಿಶೇಷ.
ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆಗೆ ವರೆಗೆ ಸ್ಪರ್ಧಿಸಿದ ಹುರಿಯಾಳುಗಳು ಈ ಕಟ್ಟೆಯ ಮೇಲೆ ಕೆಲಕಾಲ ಕೂತು ಗೆಲುವು ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳು ಚುನಾವಣಾ ಸಭೆ, ಪ್ರಚಾರ, ಜನರೊಂದಿಗಿನ ಮಾತುಕತೆಗೆ ಈ ಕಟ್ಟೆಯನ್ನು ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಈ ಹಾದಿಯಲ್ಲಿ ಸಾಗುವ ವಿವಿಧ ಪಕ್ಷದ ಅಭ್ಯರ್ಥಿಗಳು ಇಲ್ಲಿ ಕ್ಷಣಕಾಲ ಕೂರದೇ ಪ್ರಯಾಣ ಮುಂದುವರೆಸಿದ ಉದಾಹರಣೆಗಳೇ ಇಲ್ಲವೆನ್ನಬಹುದು. ಇಲ್ಲೊಮ್ಮೆ ಕುಳಿತು ನಂತರ ವಿಧಾನಸಭೆ ಮಟ್ಟಿಲೇರಿದ ಅನೇಕ ನಾಯಕರ ಉದಾಹರಣೆಗಳಿವೆ. ಆದ್ದರಿಂದಲೇ ಇದು ಎಂಎಲ್ಎ ಕಟ್ಟೆ ಎಂದೇ ಪ್ರಸಿದ್ದವಾಗಿದೆ.
ಎಂಎಲ್ಎ ಕಟ್ಟೆ ಆಗಿದ್ದು ಯಾವಾಗ : ಸಾಮಾನ್ಯ ಹುಣಸೇಮರ ಮತ್ತು ಕಲ್ಲು ಬೆಂಚಿನ ಕಟ್ಟೆ ಎಂಎಲ್ಎ ಕಟ್ಟೆ ಆಗಿದ್ದು ಒಂದು ಕುತೂಹಲ ಭರಿತ ಕಥೆ. 1994ರಲ್ಲಿ ಎಸ್.ಎಸ್.ಪಾಟೀಲ್ ಜನತಾದಳ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.
ಪ್ರಚಾರದ ನಡುವೆ ಈ ಕಟ್ಟೆಯ ಮೇಲೆ ಕುಳಿತು ಜನರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಕೆಲವು ಸಲ ಕಟ್ಟೆಯ ಮೇಲಿಂದಲೇ ಪ್ರಚಾರ ಮಾಡಿದ್ದರು. ನಂತರ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದರು. ಕೇವಲ ಒಮ್ಮೆಯಲ್ಲ ಮೂರು ಬಾರಿ ಅವರು ವಿಧಾನಸಭೆ ಚುನಾವಣೆಯನ್ನು ಗೆದ್ದು ಬಂದರು.
ಪಾಟೀಲರು ಮೊದಲ ಚುನಾವಣೆ ಗೆದ್ದ ನಂತರ ಇದು ಎಂಎಲ್ಎ ಕಟ್ಟೆ ಎಂದು ಪ್ರಸಿದ್ಧಿ ಪಡೆಯಿತು. ನಂತರ ಚುನಾವಣೆಯಲ್ಲಿಯೂ ಪಾಟೀಲರು ಪ್ರಚಾರ ಕಾರ್ಯಕ್ಕೆ ಕಟ್ಟೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ವಿಧಾನಸಭೆ ಪ್ರವೇಶಿಸಿದರು.
ಪಾಟೀಲರ ನಂತರ ವೈ.ಎನ್.ಗೌಡರು, ವಿರೂಪಾಕ್ಷ ಗೌಡ, ರವೀಂದ್ರ ಉಪ್ಪಿನ ಬೆಟಗೇರಿ ಮುಂತಾವರು ವಿವಿಧ ಚುನಾವಣೆಯಲ್ಲಿ ಈ ಕಟ್ಟೆಯ ಮೂಲಕ ಪ್ರಚಾರ ಮಾಡಿ ಗೆಲುವಿನ ಸಿಹಿ ಉಂಡಿದ್ದಾರೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎಂಎಲ್ಎ ಕಟ್ಟೆಯ ಹುಣಸೇಮರ ಅದೃಷ್ಟ ತರುವ ಸ್ಥಳ.
ಈಗಲೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದ್ದು, ಇಂದಿಗೂ ಚುನಾವಣಾ ಅಭ್ಯರ್ಥಿಗಳು ಈ ಕಟ್ಟೆಯನ್ನು ತಮ್ಮ ಅಡ್ಡವಾಗಿ ಪರಿರ್ತಿಸಿಕೊಂಡಿದ್ದಾರೆ. ಅದರಲ್ಲೂ ಶಿರಹಟ್ಟಿ ಮತ್ತು ರೋಣ ಕ್ಷೇತ್ರದ ಅಭ್ಯರ್ಥಿಗಳಿಗೆ ಇದು ಹಾಟ್ ಸ್ಟಾಟ್ ಸ್ಥಳ.(ಗದಗ ಜಿಲ್ಲಾ ವಿಧಾನಸಭೆ ಕ್ಷೇತ್ರಗಳ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications