ರೆಡ್ಡಿ ವಿರುದ್ಧ FIR ದಾಖಲಿಸಿದ ಬೆಂಗಳೂರು ಸಿಬಿಐ
CEC ವರದಿ ಅನ್ವಯ ಸುಪ್ರೀಂಕೋರ್ಟ್ ಸೂಚನೆಯಂತೆ ಅಕ್ರಮ ಗಣಿಗಾರಿಕೆ ಸಂಬಂಧ ಒಟ್ಟು 15 ಜನರ ವಿರುದ್ಧ ಈ FIR ದಾಖಲಿಸಿದೆ. ನ್ಯಾಯಾಲಯ ವ್ಯಾಪ್ತಿ ಅಡಚಣೆ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ ಈ ಪ್ರಕರಣವನ್ನು ಧಾರವಾಡ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ರಾಜ್ಯ ಸರಕಾರ ಈ FIRಗೆ ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜನ ಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್. ಹಿರೇಮಠ ಅವರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ತನಿಖೆ ನಡೆಸಿ, ವರದಿ ಸಲ್ಲಿಸಲು CECಗೆ ಸೂಚನೆ ನೀಡಿತ್ತು.
ಈ ಪ್ರಕಾರ CEC ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖಾ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು. ಆ ವರದಿಯಲ್ಲಿನ ಅಂಶಗಳ ಪ್ರಕಾರ ಅಕ್ರಮ ಗಣಿಗಾರಿಕೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ ಕಂಡಿ ಬಂದಿದ್ದು, ಈ ಬಗ್ಗೆ FIR ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿತ್ತು.
ಆ ಪ್ರಕಾರ ರಾಜ್ಯ ಸರಕಾರ RC 18 ಮತ್ತು 19ರ ಅನುಸಾರ FIR ದಾಖಲಿಸಿ, ಕ್ರಮ ತನಿಖೆ ನಡೆಸುವಂತೆ ಸಿಬಿಐಗೆ ವಹಿಸಿದೆ. ಅದರಂತೆ ಬೆಂಗಳೂರು ಸಿಬಿಐ ಸೋಮವಾರ (ಫೆ. 27) ಜನಾರ್ಧನ ರೆಡ್ಡಿ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.