Get Updates
Get notified of breaking news, exclusive insights, and must-see stories!

Mahua Moitra: ಅರವಿಂದ್ ಕೇಜ್ರಿವಾಲ್ ಆಯ್ತು.. ಈಗ ಮಹುವಾ ಮೊಯಿತ್ರಾ ಮೇಲೆ ಸಿಬಿಐ ಕಣ್ಣು!

ಕೋಲ್ಕತ್ತಾ, ಮಾರ್ಚ್ 23: ಕ್ಯಾಶ್ ಫಾರ್ ಕ್ವೆರಿ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರ ಕೋಲ್ಕತ್ತಾದ ಮನೆಯ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) 23ರ ಶನಿವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಲೋಕಪಾಲ್ ವರದಿ ಆಧರಿಸಿ ಕೇಂದ್ರ ತನಿಖಾ ದಳ ಗುರುವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿತ್ತು. ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ ಒಂದು ದಿನದ ನಂತರ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ ಈ ವಾರದ ಆರಂಭದಲ್ಲಿ ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡಿ ಆರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿತ್ತು.

Cash For Query Case CBI Raids Trinamool s Mahua Moitra s Kolkata Hom

ಪ್ರತಿ ತಿಂಗಳು ತನಿಖೆಯ ಸ್ಥಿತಿಗತಿ ಕುರಿತು ನಿಯತಕಾಲಿಕ ವರದಿಗಳನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಲಾಗಿತ್ತು. "ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮತ್ತು ಪರಿಗಣನೆಯ ನಂತರ, ಪ್ರತಿಕ್ರಿಯಿಸಿದ ಸಾರ್ವಜನಿಕ ಸೇವಕ (RPS) ವಿರುದ್ಧದ ಆರೋಪಗಳು ಪುರಾವೆಗಳಿಂದ ಬೆಂಬಲಿತವಾಗಿದೆ, ವಿಶೇಷವಾಗಿ ಗಂಭೀರ ಸ್ವರೂಪದಲ್ಲಿವೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ" ಎಂದು ಲೋಕಪಾಲ್ ತನ್ನ ಆದೇಶದಲ್ಲಿ ತಿಳಿಸಿತ್ತು.

ಮಹುವಾ ಮೊಯಿತ್ರಾ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಿದ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಪಡೆದ ಆರೋಪದ ಮೇಲೆ ಮಾಜಿ ಸಂಸದೆಯನ್ನು ತೆಗೆದುಹಾಕಲು ನೈತಿಕ ಸಮಿತಿಯು ಶಿಫಾರಸು ಮಾಡಿದೆ.

Cash For Query Case CBI Raids Trinamool s Mahua Moitra s Kolkata Hom

ಪಾರ್ಲಿಮೆಂಟರಿ ವೆಬ್‌ಸೈಟ್‌ಗಾಗಿ ಗೌಪ್ಯ ಲಾಗ್-ಇನ್ ವಿವರಗಳನ್ನು ಒಪ್ಪಿಸಿದ್ದಾರೆ ಎಂಬ ಆರೋಪವೂ ಮಹುವಾ ಮೊಯಿತ್ರಾ ಮೇಲಿತ್ತು. ತೃಣಮೂಲ ಕಾಂಗ್ರೆಸ್ ನಾಯಕಿ ತನ್ನ ಲಾಗಿನ್ ರುಜುವಾತುಗಳನ್ನು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ "ಅನಧಿಕೃತವಾಗಿ" ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಮಹುವಾ ಮೊಯಿತ್ರಾ ಅವರ ಲಾಗಿನ್ ವಿವರಗಳನ್ನು ನೀಡಿ, ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾ. ಅವರು ಕೇಳಿದ ಎಲ್ಲಾ 58 ಆನ್‌ಲೈನ್ ಪ್ರಶ್ನೆಗಳನ್ನು ಅವರು ಟೈಪ್ ಮಾಡಿದ್ದಾರೆ ಎಂದು ದೃಢಪಡಿಸುವ ಪ್ರಮಾಣ ಪತ್ರವನ್ನು ದರ್ಶನ್ ಹಿರಾನಂದನಿ ನೀಡಿದ್ದಾರೆ ಎಂದು ಸಿಬಿಐ ವಿಚಾರಣೆಯಿಂದ ತಿಳಿದುಬಂದಿದೆ. ತನ್ನ ವಿಪಿಎನ್ ಬಳಸಿ ದುಬೈ, ಬೆಂಗಳೂರು ಮತ್ತು ಯುಎಸ್‌ನಿಂದ ಲಾಗಿನ್ ಮಾಡಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

ತೃಣಮೂಲ ನಾಯಕಿ ದರ್ಶನ್ ಹಿರಾನಂದನಿಯಿಂದ 2 ಕೋಟಿ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಿಬಿಐ ಲೋಕಪಾಲ್‌ಗೆ ಸಲ್ಲಿಸಿದ ತನ್ನ ಪಿಇ ವರದಿಯಲ್ಲಿ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಈ ಆರೋಪದ ಸತ್ಯವನ್ನು ಬಹಿರಂಗಪಡಿಸಲು ತನಿಖೆ ಅಗತ್ಯವಿದೆ ಎಂದು ಹೇಳಿದೆ.

ದೆಹಲಿಯಿಂದ ಯುಎಇ ಪ್ರವಾಸಕ್ಕೆ ದರ್ಶನ್ ಹಿರಾನಂದನಿ ಅವರ ಕ್ರೆಡಿಟ್ ಕಾರ್ಡ್‌ನಿಂದ 1.69 ಲಕ್ಷ ಪಾವತಿಸಿದ್ದಾರೆ ಎಂದು ಸಿಬಿಐ ಹೇಳಿಕೊಂಡಿದೆ. 2018 ರಲ್ಲಿ ಹರ್ಮ್ಸ್ ಸ್ಕಾರ್ಫ್ ಮತ್ತು ಬಾಬಿ ಬ್ರೌನ್ ಮೇಕಪ್ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ. ಇದಕ್ಕೆ ಮಹುವಾ ಮೊಯಿತ್ರಾ ಅವರ ಕಾನೂನು ತಂಡವು ಲೋಕಪಾಲ್‌ನ ಮುಂದೆ ಇದು ಸ್ನೇಹಿತರ ನಡುವಿನ ಸಾಮಾನ್ಯ ಗಿಫ್ಟ್ ಎಂದು ವಾದಿಸಿದೆ.

ಲೋಕಪಾಲ್‌ಗೆ ಸಲ್ಲಿಸಿದ ಪ್ರಾಥಮಿಕ ತನಿಖೆಯ (ಪಿಇ) ವರದಿಯಲ್ಲಿ ಸಿಬಿಐ ಈ ಸಂಗತಿಗಳನ್ನು ಬಹಿರಂಗಪಡಿಸಿದೆ. ಅದರ ಆಧಾರದ ಮೇಲೆ ಮಂಗಳವಾರ ಟಿಎಂಸಿ ನಾಯಕನ ವಿರುದ್ಧದ ಆರೋಪಗಳನ್ನು ಮತ್ತಷ್ಟು ತನಿಖೆ ಮಾಡಲು ಆದೇಶಿಸಿದೆ. ಸಿಬಿಐ ಸಂಶೋಧನೆಗಳನ್ನು ಉಲ್ಲೇಖಿಸಿ, ಲೋಕಪಾಲ್ ತೀರ್ಪು ನೀಡಿದೆ.

ಮಹುವಾ ಮೊಯಿತ್ರಾ ಲಂಚದ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ, ಲಾಗ್-ಇನ್ ವಿವರಗಳನ್ನು ಹಂಚಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ವಿವರಗಳನ್ನು ಹಂಚಿಕೊಳ್ಳುವುದು ಸಂಸದರಲ್ಲಿ ಸಾಮಾನ್ಯ ಅಭ್ಯಾಸವಾಗಿದೆ ಎಂದು ವಾದಿಸಿದ್ದಾರೆ. ತನ್ನನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+