ಮಾಜಿ ಉಪಸಭಾಪತಿಗೂ ಕೈಕೊಟ್ಟ ಮಾಹಿತಿ ಹಕ್ಕು ಕಾಯ್ದೆ

ನಾನು ಮಾಹಿತಿ ಹಕ್ಕು ಕಾನೂನು ಅಡಿ 23.12.2009 ರಲ್ಲಿ ಆಳಂದ ತಾಲ್ಲೂಕಿನ 39 ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ 7 ಅಂಶಗಳ ವಿವರಗಳನ್ನು ಕೇಳಿದೆ. ಅದೇ ತರಹ 17.11.2009 ರಲ್ಲಿ ಆಳಂದ ಪುರಸಭೆ ಮುಖ್ಯಾಧಿಕಾರಿಗಳಿಗೆ 13 ಅಂಶಗಳ ವಿವರವನ್ನು ಕೇಳಿದ್ದೆ.
ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಿಗದ ಕಾರಣ ಜಿಲ್ಲಾ ಮಟ್ಟದಲ್ಲಿ ನಂತರ ಆಯುಕ್ತರು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೂ ಮೇಲ್ಮನವಿ ಸಲ್ಲಿಸಿ 2010 ವರ್ಷ ಕಳೆದು 2011 ಆರಂಭವಾದರು ಸಕಾಲಕ್ಕೆ ಮಾಹಿತಿ ಸಿಗದಿದ್ದಕ್ಕಾಗಿ ಈ ಕಾಯ್ದೆ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಹಲವು ಸಲ ರಾಜ್ಯ ಮಾಹಿತಿ ಹಕ್ಕು ಆಯುಕ್ತರಿಗೆ ಭೇಟಿ ಮಾಡಿದರು ಯಾವುದೇ ಫಲ ಸಿಕ್ಕಿಲ್ಲ ಇದರಿಂದ ನಿರಾಶೆ ಉಂಟಾಗಿದೆ. ಇದೇ ತರಹ ಅನುಭವ ಇನ್ನೂ ಹಲವರಿಗೆ ಆಗಿರುವುದು ಕೂಡಾ ತಿಳಿದುಬಂದಿದೆ. ಅವ್ಯವಹಾರ, ಅನ್ಯಾಯ, ತಡೆಗಟ್ಟಲು ಪ್ರಮುಖ ಅಸ್ತ್ರವಾದಂತಹ ಈ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಮಯಕ್ಕೆ ತಕ್ಕ ಹಾಗೇ ಮಾಹಿತಿ ಸಿಗದಿದ್ದರೆ ಈ ಕಾಯ್ದೆ ಮುಖ್ಯ ಗುರಿ ಮತ್ತು ಉದ್ದೇಶ ವಿಫಲವಾದಂತೆ ಆಗುತ್ತಿದೆ.
ಮಾಹಿತಿ ಪಡೆದು ಅನ್ಯಾಯ, ಅವ್ಯವಹಾರ ತಡೆಗಟ್ಟಲು ತಕ್ಷಣ ಮಾಹಿತಿ ಸಿಗದೆ ಅನೇಕ ಅಧಿಕಾರಿಗಳು ಈ ಅವಧಿಯಲ್ಲಿ ವರ್ಗಾವಣೆಯಾಗಿ ಕೈತೊಳೆದುಕೊಳ್ಳುತ್ತಿದ್ದಾರೆ. ಬರೀ 25 ಸಾವಿರ ದಂಡ ಕೊಡುವುದು ಅಧಿಕಾರಿಗಳಿಗೆ ಮಹಾ ದೊಡ್ಡ ಶಿಕ್ಷೆ ಅಥವಾ ಹಾನಿಯಾಗುವುದಿಲ್ಲ. ಲೂಟಿ ಹೊಡೆಯುವವರು ವಿಳಂಬ ನೀತಿ ಅನುಸರಿಸಿ ಪಾರಾಗುವುದು ಸಾಧ್ಯವಿದೆ ಎಂಬುವುದು ಸಾಬೀತಾಗಿದೆ.
ಅರ್ಜಿದಾರರ ಮೂಲ ಉದ್ದೇಶ ಸಾಧಿಸಲು ಆಗುತ್ತಿಲ್ಲಾ. ಆದ ಕಾರಣ ಈ ಕಾನೂನಿನಲ್ಲಿ ಬದಲಾವಣೆ ತರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವೆಂಬುದು, ಈ ತರಹದ ಅನುಭವಗಳ ಮುಖಾಂತರ ಗೊತ್ತಾಗುತ್ತದೆ.
ಶಾಸಕಾಂಗ ಮತ್ತು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು, ಅಧಿಕಾರಿಗಳಿಗೆ ಪಾಠ ಕಲಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಸಿಗಬೇಕು, ಅರ್ಜಿದಾರರಿಗೆ ಸಕಾಲದಲ್ಲಿ ಕೇಳಿದ ಮಾಹಿತಿ ಸಿಗುವಂತಾಗುವಲ್ಲಿ ಇನ್ನಾದರು ಸಂಬಂಧಿತರು ಕ್ರಮ ಕೈಗೊಳ್ಳುವರೇ?
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications