ಮಾಜಿ ಉಪಸಭಾಪತಿಗೂ ಕೈಕೊಟ್ಟ ಮಾಹಿತಿ ಹಕ್ಕು ಕಾಯ್ದೆ

ನಾನು ಮಾಹಿತಿ ಹಕ್ಕು ಕಾನೂನು ಅಡಿ 23.12.2009 ರಲ್ಲಿ ಆಳಂದ ತಾಲ್ಲೂಕಿನ 39 ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ 7 ಅಂಶಗಳ ವಿವರಗಳನ್ನು ಕೇಳಿದೆ. ಅದೇ ತರಹ 17.11.2009 ರಲ್ಲಿ ಆಳಂದ ಪುರಸಭೆ ಮುಖ್ಯಾಧಿಕಾರಿಗಳಿಗೆ 13 ಅಂಶಗಳ ವಿವರವನ್ನು ಕೇಳಿದ್ದೆ.
ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಿಗದ ಕಾರಣ ಜಿಲ್ಲಾ ಮಟ್ಟದಲ್ಲಿ ನಂತರ ಆಯುಕ್ತರು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೂ ಮೇಲ್ಮನವಿ ಸಲ್ಲಿಸಿ 2010 ವರ್ಷ ಕಳೆದು 2011 ಆರಂಭವಾದರು ಸಕಾಲಕ್ಕೆ ಮಾಹಿತಿ ಸಿಗದಿದ್ದಕ್ಕಾಗಿ ಈ ಕಾಯ್ದೆ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಹಲವು ಸಲ ರಾಜ್ಯ ಮಾಹಿತಿ ಹಕ್ಕು ಆಯುಕ್ತರಿಗೆ ಭೇಟಿ ಮಾಡಿದರು ಯಾವುದೇ ಫಲ ಸಿಕ್ಕಿಲ್ಲ ಇದರಿಂದ ನಿರಾಶೆ ಉಂಟಾಗಿದೆ. ಇದೇ ತರಹ ಅನುಭವ ಇನ್ನೂ ಹಲವರಿಗೆ ಆಗಿರುವುದು ಕೂಡಾ ತಿಳಿದುಬಂದಿದೆ. ಅವ್ಯವಹಾರ, ಅನ್ಯಾಯ, ತಡೆಗಟ್ಟಲು ಪ್ರಮುಖ ಅಸ್ತ್ರವಾದಂತಹ ಈ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಮಯಕ್ಕೆ ತಕ್ಕ ಹಾಗೇ ಮಾಹಿತಿ ಸಿಗದಿದ್ದರೆ ಈ ಕಾಯ್ದೆ ಮುಖ್ಯ ಗುರಿ ಮತ್ತು ಉದ್ದೇಶ ವಿಫಲವಾದಂತೆ ಆಗುತ್ತಿದೆ.
ಮಾಹಿತಿ ಪಡೆದು ಅನ್ಯಾಯ, ಅವ್ಯವಹಾರ ತಡೆಗಟ್ಟಲು ತಕ್ಷಣ ಮಾಹಿತಿ ಸಿಗದೆ ಅನೇಕ ಅಧಿಕಾರಿಗಳು ಈ ಅವಧಿಯಲ್ಲಿ ವರ್ಗಾವಣೆಯಾಗಿ ಕೈತೊಳೆದುಕೊಳ್ಳುತ್ತಿದ್ದಾರೆ. ಬರೀ 25 ಸಾವಿರ ದಂಡ ಕೊಡುವುದು ಅಧಿಕಾರಿಗಳಿಗೆ ಮಹಾ ದೊಡ್ಡ ಶಿಕ್ಷೆ ಅಥವಾ ಹಾನಿಯಾಗುವುದಿಲ್ಲ. ಲೂಟಿ ಹೊಡೆಯುವವರು ವಿಳಂಬ ನೀತಿ ಅನುಸರಿಸಿ ಪಾರಾಗುವುದು ಸಾಧ್ಯವಿದೆ ಎಂಬುವುದು ಸಾಬೀತಾಗಿದೆ.
ಅರ್ಜಿದಾರರ ಮೂಲ ಉದ್ದೇಶ ಸಾಧಿಸಲು ಆಗುತ್ತಿಲ್ಲಾ. ಆದ ಕಾರಣ ಈ ಕಾನೂನಿನಲ್ಲಿ ಬದಲಾವಣೆ ತರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವೆಂಬುದು, ಈ ತರಹದ ಅನುಭವಗಳ ಮುಖಾಂತರ ಗೊತ್ತಾಗುತ್ತದೆ.
ಶಾಸಕಾಂಗ ಮತ್ತು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು, ಅಧಿಕಾರಿಗಳಿಗೆ ಪಾಠ ಕಲಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಸಿಗಬೇಕು, ಅರ್ಜಿದಾರರಿಗೆ ಸಕಾಲದಲ್ಲಿ ಕೇಳಿದ ಮಾಹಿತಿ ಸಿಗುವಂತಾಗುವಲ್ಲಿ ಇನ್ನಾದರು ಸಂಬಂಧಿತರು ಕ್ರಮ ಕೈಗೊಳ್ಳುವರೇ?
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications