ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆಯೇರಿಕೆ ವಿರೋಧಿ ಮೆರವಣಿಗೆಯಲ್ಲಿ ದೇವೇಗೌಡ

By Srinath
|
Google Oneindia Kannada News

devegowda
ಬೆಂಗಳೂರು, ಫೆ.8- ಬೆಲೆಯೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನಗರದಲ್ಲಿ ಮಂಗಳವಾರ ಬೃಹತ್ ರ‌್ಯಾಲಿ ನಡೆಸಿದರು.

ಜೆಡಿಎಸ್ ಮತ್ತು ಎಡರಂಗ ಹಮ್ಮಿಕೊಂಡಿದ್ದ ರ‌್ಯಾಲಿ ನೇತೃತ್ವ ವಹಿಸಿದ್ದ ದೇವೇಗೌಡ, ಜನ ಬೆಲೆಯೇರಿಕೆಯಿಂದ ತತ್ತರಿಸಿದ್ದಾರೆ. ಜನಪರ ಹೋರಾಟಕ್ಕೆ ನಾನು ಸದಾ ಸಿದ್ಧ. ಎರಡೂ ಸರಕಾರಗಳು ತಕ್ಷಣ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು ಎಂದು ಗುಡುಗಿದ್ದಾರೆ.

ಬೆಳಗ್ಗೆ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯಿಂದ ಆರಂಭವಾದ ರ‌್ಯಾಲಿಯಲ್ಲಿ ದೇವೇಗೌಡ ಅವರು ಕಾರ್ಯಕರ್ತರೊಂದಿಗೆ ರಾಜಭವನದವರೆಗೂ ಹೆಜ್ಜೆ ಹಾಕಿದರು. ಬೆಲೆಯೇರಿಕೆ ವಿರೋಧಿಸಿ ಬುಧವಾರ ದೆಹಲಿಯಲ್ಲೂ ಪ್ರತಿಭಟನೆ ನಡೆಸುವುದಾಗಿ ಗೌಡರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

English summary
Demanding to bring down the prices of essential items former Prime Minister Devegowda on Tuesday held a big rally in Banglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X