ಜನಜಾತ್ರೆ ನಡುವೆ ವರುಣ್ ನ್ಯಾಯಾಂಗ ಬಂಧನಕ್ಕೆ

"ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗುವೆ. ನಾನು ಇಲ್ಲಿ ಬಂದಿರುವುದು ನನ್ನ ಜನರನ್ನು ಹುರಿದುಂಬಿಸಲು, ಯಾವ ಕುತಂತ್ರಕ್ಕೂ ನಾನು ಎದುರುವುದಿಲ್ಲ. ನನ್ನ ಆದರ್ಶವನ್ನು ಪಾಲಿಸುವೆ. ಸತ್ಯದ ಮಾರ್ಗಕ್ಕೆ ಸದಾ ಜಯ ಸಿಗುತ್ತದೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ " ಎಂದು ವರುಣ್ ಹೇಳಿದರು.
153(A) ಕೋಮು ಪ್ರಚೋದನೆ ಆರೋಪ, ಸೆಕ್ಷನ್ 188(ಭಾರತೀಯ ನೀತಿ ದಂಡ ಸಂಹಿತೆ ಉಲ್ಲಂಘನೆ), ಸೆಕ್ಷನ್ 125 ನಡಿಯಲ್ಲಿ ಪಿಲಿಭಿತ್ ನ ಬರ್ಖೆರಾ ಹಾಗೂ ಹರ್ಡೊಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವರುಣ್ ಗಾಂಧಿ ಅಭಿಮಾನಿಗಳು ಹಾಗೂ ಸ್ಥಳೀಯ ಪೊಲೀಸರ ನಡುವೆ ಕೊಂಚ ಕಾಲ ಘರ್ಷಣೆ ಉಂಟಾಗಿತ್ತು. ಲಕ್ನೋ ಇಂದ ಸುಮಾರು 50 ಕಿಮೀ ದೂರದಲ್ಲಿರುವ ಪಿಲಿಭಿತ್ ಗೆ ವರುಣ್ ಪ್ರಕರಣದಿಂದ ವಿಶ್ವಭೂಪಟದಲ್ಲಿ ತನ್ನ ಗುರುತನ್ನು ಮೂಡಿಸಿದೆ.
(ಏಜೇನ್ಸೀಸ್)
ವರುಣ್ ಗಾಂಧಿ ಬಂಧನ ಪ್ರಹಸನಕ್ಕೆ ಕ್ಷಣಗಣನೆ











Click it and Unblock the Notifications