2021 ರ ಕೋಟ್ಯಾಧಿಪತಿಗಳ ಪಟ್ಟಿ: 10 ಯುವ, ಸ್ವಯಂ ಉದ್ಯಮಿಗಳ ಬಗ್ಗೆ ತಿಳಿಯಿರಿ
ನವದೆಹಲಿ, ಅಕ್ಟೋಬರ್ 13: ಇತ್ತೀಚೆಗೆ 2021 ತನ್ನ ಶ್ರೀಮಂತರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಇಂಡಿಯಾ ಇನ್ಫೋಲಿನ್ ಲಿಮಿಟೆಡ್ (ಐಐಎಫ್ಎಲ್) ಈಗ ಬುಧವಾರ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾದ 40 ವರ್ಷ ಹಾಗೂ ಅದಕ್ಕಿಂತ ಸಣ್ಣ ವಯಸ್ಸಿನ ಸ್ವಯಂ ಉದ್ಯಮಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಸುಮಾರು 40 ವರ್ಷ ಹಾಗೂ ಅದಕ್ಕಿಂತ ಕೆಳ ವಯಸ್ಸಿನ ಸುಮಾರು ಸಾವಿರ ಕೋಟಿ ಸಂಪತ್ತನ್ನು ಹೊಂದಿರುವ ಸ್ವಯಂ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಟಾಪ್ 10 ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಐವರು ಬೆಂಗಳೂರು ಮೂಲದವರು ಆಗಿದ್ದಾರೆ.
ಹಾಗಾದರೆ ಈ ಪಟ್ಟಿಯಲ್ಲಿ ಟಾಪ್ 10 ಕೋಟ್ಯಾಧಿಪತಿಗಳು ಯಾರು, ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಟಾಪ್ 10 ಯುವ, ಸ್ವಯಂ ಉದ್ಯಮಿಗಳು
* ಮೀಡಿಯಾ.ನೆಟ್ ನ ದಿವ್ಯಾಂಕ್ ತುರಾಖಿಯಾ: 39 ವರ್ಷ ಪ್ರಾಯದ ದಿವ್ಯಾಂಕ್ ತುರಾಖಿಯಾ ಈ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 12,500 ಕೋಟಿ ಆಗಿದೆ. ದಿವ್ಯಾಂಕ್ ತುರಾಖಿಯಾ ದುಬೈನಲ್ಲಿ ವಾಸವಿರುವವರು ಆಗಿದ್ದಾರೆ.
* ಬ್ರೌಸರ್ಸ್ಟ್ಯಾಕ್ಸ್ನ ನಕುಲ್ ಅಗರ್ವಾಲ್: 36 ವರ್ಷ ಪ್ರಾಯದ ನಕುಲ್ ಅಗರ್ವಾಲ್ ಈ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ನಕುಲ್ ಅಗರ್ವಾಲ್ ಬ್ರೌಸರ್ಸ್ಟ್ಯಾಕ್ಸ್ನ ಸಹ ಸಂಸ್ಥಾಪಕ ಆಗಿದ್ದಾರೆ. ಇವರ ಒಟ್ಟು ಸಂಪತ್ತು 12,400 ಕೋಟಿ ಆಗಿದೆ. ನಕುಲ್ ಅಗರ್ವಾಲ್ ಮುಂಬೈ ಮೂಲದವರು ಆಗಿದ್ದಾರೆ.
* ಬ್ರೌಸರ್ಸ್ಟ್ಯಾಕ್ಸ್ನ ರಿತೇಶ್ ಅರೋರಾ: 37 ವರ್ಷ ಪ್ರಾಯದ ರಿತೇಶ್ ಅರೋರಾ ಈ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ರಿತೇಶ್ ಅರೋರಾ ಕೂಡಾ ಬ್ರೌಸರ್ಸ್ಟ್ಯಾಕ್ಸ್ನ ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಇವರ ಒಟ್ಟು ಸಂಪತ್ತು 12,400 ಕೋಟಿ ಆಗಿದೆ. ರಿತೇಶ್ ಅರೋರಾ ಕೂಡಾ ಮುಂಬೈ ಮೂಲದವರು ಆಗಿದ್ದಾರೆ.
* ನೇಹಾ ನರಖೇಡೆ ಮತ್ತು ಕುಟುಂಬ: 36 ವರ್ಷ ಪ್ರಾಯದ ನೇಹಾ ನರಖೇಡೆ, ಕಂಫ್ಲೌಂಟ್ನಲ್ಲಿ ಸಹ-ಸಂಸ್ಥಾಪಕರು ಆಗಿದ್ದಾರೆ ಹಾಗೂ ಈ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ನೇಹಾ ನರಖೇಡೆ ಮತ್ತು ಕುಟುಂಬವು ನಾಲ್ಕನೇ ಸ್ಥಾನದಲ್ಲಿ ಇದೆ. ಈ ಕುಟುಂಬದ ಒಟ್ಟು ಸಂಪತ್ತು 12,200 ಕೋಟಿ ಆಗಿದೆ. ನೇಹಾ ನರಖೇಡೆ ಮತ್ತು ಕುಟುಂಬವು ಕ್ಯಾಲಿಫೋನಿರ್ಯಾದಲ್ಲಿ ವಾಸವಿರುವವರು ಆಗಿದ್ದಾರೆ.
* ಜೆರೋಧಾದ ನಿಖಿಲ್ ಕಾಮತ್: 35 ವರ್ಷ ಪ್ರಾಯದ ನಿಖಿಲ್ ಕಾಮತ್ ಜೆರೋಧಾದ ಸಹ ಸಂಸ್ಥಾಪಕರು ಆಗಿದ್ದಾರೆ. ಭಾರತದ ಅತಿದೊಡ್ಡ ವ್ಯಾಪಾರ ವೇದಿಕೆ ಜೆರೋಧಾ ಆಗಿದೆ. ನಿಖಿಲ್ ಕಾಮತ್ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಐದನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 11,100 ಕೋಟಿ ಆಗಿದೆ. ನಿಖಿಲ್ ಕಾಮತ್ ಬೆಂಗಳೂರು ಮೂಲದವರು ಆಗಿದ್ದಾರೆ.
* ಥಿಂಕ್ ಆಂಡ್ ಲರ್ನ್ನ ರಿಜು ರವೀಂದ್ರನ್: ಆನ್ಲೈನ್ ಶಿಕ್ಷಣ ವೇದಿಕೆಯ ಬೈಜುನ ಸಹ ಸಂಸ್ಥಾಪಕ 40 ವರ್ಷ ಪ್ರಾಯದ ರಿಜು ರವೀಂದ್ರನ್ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಆರನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 8,100 ಕೋಟಿ ಆಗಿದೆ. ರಿಜು ರವೀಂದ್ರನ್ ಬೆಂಗಳೂರು ಮೂಲದವರು ಆಗಿದ್ದಾರೆ.
* ಫ್ಲಿಫ್ಕಾರ್ಟ್ನ ಬಿನ್ನಿ ಬನ್ಸಾಲ್: 38 ವರ್ಷ ಪ್ರಾಯದ ಬಿನ್ನಿ ಬನ್ಸಾಲ್ ಫ್ಲಿಫ್ಕಾರ್ಟ್ನ ಸಹ ಸಂಸ್ಥಾಪಕರು ಆಗಿದ್ದಾರೆ. ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಬಿನ್ನಿ ಬನ್ಸಾಲ್ ಏಳನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 8,000 ಕೋಟಿ ಆಗಿದೆ. ಬಿನ್ನಿ ಬನ್ಸಾಲ್ ಬೆಂಗಳೂರಿನಲ್ಲಿ ವಾಸವಿದ್ದಾರೆ.
* ಫ್ಲಿಫ್ಕಾರ್ಟ್ನ ಸಚಿನ್ ಬನ್ಸಾಲ್: 40 ವರ್ಷ ಪ್ರಾಯದ ಸಚಿನ್ ಬನ್ಸಾಲ್ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಎಂಟನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 7,800 ಕೋಟಿ ಆಗಿದೆ. ಸಚಿನ್ ಬನ್ಸಾಲ್ ಕೂಡಾ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ.
* ಎಎನ್ಐ ಟೆಕ್ನಾಲಜೀಸ್ ನ ಭವಿಶ್ ಅಗರ್ವಾಲ್: ಒಲಾದ ಭವಿಶ್ ಅಗರ್ವಾಲ್ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ. 36 ವರ್ಷ ಪ್ರಾಯದ ಭವಿಶ್ ಅಗರ್ವಾಲ್ ಅವರ ಸಂಪತ್ತು ಈ ವರ್ಷದಲ್ಲಿ ಶೇಕಡ 114 ರಷ್ಟು ಏರಿಕೆ ಕಂಡಿತೆ. ಇವರ ಒಟ್ಟು ಸಂಪತ್ತು 7,500 ಕೋಟಿ ಆಗಿದೆ. ಭವಿಶ್ ಅಗರ್ವಾಲ್ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ.
* ಒರೆವೆಲ್ ಸ್ಟೇಸ್ ನ ರಿತೇಶ್ ಅಗರ್ವಾಲ್: ಓಯೋ ರೋಮ್ಸ್ನ ರಿತೇಶ್ ಅಗರ್ವಾಲ್ ಹುರುನ್ ಶ್ರೀಮಂತರ ಪಟ್ಟಿ 2021 ರಲ್ಲಿ ಹತ್ತನೇ ಸ್ಥಾನದಲ್ಲಿ ಇದ್ದಾರೆ. 27 ವರ್ಷ ಪ್ರಾಯದ ರಿತೇಶ್ ಅಗರ್ವಾಲ್ ಅವರ ಸಂಪತ್ತಿನಲ್ಲಿ ಶೇಕಡ 40 ರಷ್ಟು ಏರಿಕೆ ಕಂಡಿದೆ. ಇವರ ಒಟ್ಟು ಸಂಪತ್ತು 6,300 ಕೋಟಿ ಆಗಿದೆ. ರಿತೇಶ್ ಅಗರ್ವಾಲ್ ನವದೆಹಲಿಯಲ್ಲಿ ಉದ್ಯಮ ನಡೆಸುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion












Click it and Unblock the Notifications