ನಿಷ್ಕಾಮಕರ್ಮ ಚಿಂತನೆಯ ಭಗವದ್ಗೀತೆಗಾಗಿ ಕಚ್ಚಾಟ. ಹಹಾ

ಸಾಮಾನ್ಯವಾಗಿ ನಂಬಿಕೊಂಡಂತೆ ಮಹಾಭಾರತ, ರಾಮಾಯಣದ ನಂತರದ ಕೃತಿ ಅಲ್ಲ. ಒಂದು ಅಂದಾಜಿನ ಪ್ರಕಾರ ರಾಮಾಯಾಣ ಉಪನಿಷತ್ ಕಾಲದ ಅಂದರೆ ಕ್ರಿ. ಪೂ. 5 ನೇ ಶತಮಾನದ ರಚನೆಯಾಗಿರಬಹುದಾದರೆ, ಮೂಲ ಮಹಾಭಾರತದ ಕಾಲ ಕನಿಷ್ಠ 2 ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಅಂದರೆ ಮಹಾಭಾರತವನ್ನು ಕ್ರಿ. ಪೂ. 8 ಅಥವಾ 9 ನೇ ಶತಮಾನದಲ್ಲಿ ವ್ಯಾಸರು ರಚಿಸಿರಬಹುದು ಎಂದು ಅಂದಾಜು ಮಹಾಭಾರತ ವೇದ ಪೂರ್ವ ಕಾಲದ ಕಥೆ.
ಆ ದೃಷ್ಟಿಯಿಂದ ನೋಡುವುದಾದಲ್ಲಿ ಜಗತ್ತಿನ ಅತ್ಯಂತ ಸುಂದರ ಸಂಯೋಜನೆಯಾದ ಭಗವದ್ಗೀತೆ ಮೂಲ ಭಾರತದ ಭಾಗವಲ್ಲ. ಯಾರೋ ಜಾಣರು ಅದನ್ನು ಕ್ರಿ.ಶ 4ನೇ ಶತಮಾನದ ಆಜುಬಾಜಿನಲ್ಲಿ ಸೇರ್ಪಡೆ ಮಾಡಿರಬಹುದೆಂಬ ಅಂದಾಜಿದೆ.
ಭಗವದ್ಗೀತೆಯಲ್ಲಿ ಬಳಕೆಯಾಗಿರುವ ಭಾಷೆ ಅತೀ ಮಧುರವಾದದ್ದು, ವಿಷಯ ಮಂಡಿಸುವ ಕ್ರಮ ಕೂಡ ಅತ್ಯಂತ ವಿನೂತನ. ಇಡೀ ಭಗವದ್ಗೀತೆಯ ಸಾರವನ್ನು ಒಂದೇ ಒಂದು ಪದದಲ್ಲಿ ಹೇಳಿ ಎಂದು ನಿರ್ಬಂಧಿಸುವುದಾದರೆ ಆ ಪದ 'ನಿಷ್ಕಾಮಕರ್ಮ' ವಲ್ಲದೆ ಬೇರೆಯಾಗಿರಲು ಸಾಧ್ಯವಿಲ್ಲ.
ನಿಷ್ಕಾಮಕರ್ಮ ಸಿದ್ಧಾಂತ ಲ್ಯಾಟಿನ್ ಫಿಲಾಸಫರುಗಳಿಗೂ ಸಮಾನವಾದುದು. ಆ ಪರಿಕಲ್ಪನೆಯನ್ನು ಭಗವದ್ಗೀತೆಯನ್ನು ರಚಿಸಿದಾತ ಲ್ಯಾಟಿನ್ ಮೂಲದ ಎಫಿಕ್ಯೂರಿಯನ್ ಪರಂಪರೆಯಿಂದ ಪಡೆದಿರಬಹುದು ಎಂದು ಕೆಲವರು ಅಂದಾಜು ಮಾಡುತ್ತಾರೆ. ಗ್ರೀಕ್ನ ಪೈಥಾಗೊರಸ್ ಉಪನಿಷತ್ತುಗಳಿಂದಲೂ ಪ್ರಭಾವಿತನಾಗಿರಬಹುದು ಎಂಬ ಮಾತಿದೆ. ಆ ಕಾರಣ ಯಾರನ್ನು ಯಾರು ಪ್ರಭಾವಿಸಿದರು ಎಂಬ ವಿಚಾರದಲ್ಲಿ ಇಷ್ಟೆ ಸರಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಒಂದು ಮಾತಂತೂ ಸತ್ಯ. ನಿಷ್ಕಾಮಕರ್ಮ ಸಿದ್ಧಾಂತ ಸಂಪೂರ್ಣ ಭಾರತದ್ದೇನಲ್ಲ. ಆದರೆ ಅದನ್ನು ಭಗವದ್ಗೀತೆಯಲ್ಲಿ ಮಂಡಿಸುವ ರೀತಿ ಮಾತ್ರ ಇಂದಿಗೂ ಅತ್ಯಂತ ವಿನೂತನವಾದುದು. ನಿಷ್ಕಾಮಕರ್ಮ ಮತ್ತು ನಿರ್ಭಾವುಕ ಚಿಂತನಕ್ರಮವನ್ನು ಪ್ರೇರೇಪಿಸುವ ಭಗವದ್ಗೀತೆಯ ಹೆಸರಿನಲ್ಲಿ ಕಚ್ಚಾಡುವುದು ಎಷ್ಟು ಸರಿ?
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications