ನಿಷ್ಕಾಮಕರ್ಮ ಚಿಂತನೆಯ ಭಗವದ್ಗೀತೆಗಾಗಿ ಕಚ್ಚಾಟ. ಹಹಾ

ಸಾಮಾನ್ಯವಾಗಿ ನಂಬಿಕೊಂಡಂತೆ ಮಹಾಭಾರತ, ರಾಮಾಯಣದ ನಂತರದ ಕೃತಿ ಅಲ್ಲ. ಒಂದು ಅಂದಾಜಿನ ಪ್ರಕಾರ ರಾಮಾಯಾಣ ಉಪನಿಷತ್ ಕಾಲದ ಅಂದರೆ ಕ್ರಿ. ಪೂ. 5 ನೇ ಶತಮಾನದ ರಚನೆಯಾಗಿರಬಹುದಾದರೆ, ಮೂಲ ಮಹಾಭಾರತದ ಕಾಲ ಕನಿಷ್ಠ 2 ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಅಂದರೆ ಮಹಾಭಾರತವನ್ನು ಕ್ರಿ. ಪೂ. 8 ಅಥವಾ 9 ನೇ ಶತಮಾನದಲ್ಲಿ ವ್ಯಾಸರು ರಚಿಸಿರಬಹುದು ಎಂದು ಅಂದಾಜು ಮಹಾಭಾರತ ವೇದ ಪೂರ್ವ ಕಾಲದ ಕಥೆ.
ಆ ದೃಷ್ಟಿಯಿಂದ ನೋಡುವುದಾದಲ್ಲಿ ಜಗತ್ತಿನ ಅತ್ಯಂತ ಸುಂದರ ಸಂಯೋಜನೆಯಾದ ಭಗವದ್ಗೀತೆ ಮೂಲ ಭಾರತದ ಭಾಗವಲ್ಲ. ಯಾರೋ ಜಾಣರು ಅದನ್ನು ಕ್ರಿ.ಶ 4ನೇ ಶತಮಾನದ ಆಜುಬಾಜಿನಲ್ಲಿ ಸೇರ್ಪಡೆ ಮಾಡಿರಬಹುದೆಂಬ ಅಂದಾಜಿದೆ.
ಭಗವದ್ಗೀತೆಯಲ್ಲಿ ಬಳಕೆಯಾಗಿರುವ ಭಾಷೆ ಅತೀ ಮಧುರವಾದದ್ದು, ವಿಷಯ ಮಂಡಿಸುವ ಕ್ರಮ ಕೂಡ ಅತ್ಯಂತ ವಿನೂತನ. ಇಡೀ ಭಗವದ್ಗೀತೆಯ ಸಾರವನ್ನು ಒಂದೇ ಒಂದು ಪದದಲ್ಲಿ ಹೇಳಿ ಎಂದು ನಿರ್ಬಂಧಿಸುವುದಾದರೆ ಆ ಪದ 'ನಿಷ್ಕಾಮಕರ್ಮ' ವಲ್ಲದೆ ಬೇರೆಯಾಗಿರಲು ಸಾಧ್ಯವಿಲ್ಲ.
ನಿಷ್ಕಾಮಕರ್ಮ ಸಿದ್ಧಾಂತ ಲ್ಯಾಟಿನ್ ಫಿಲಾಸಫರುಗಳಿಗೂ ಸಮಾನವಾದುದು. ಆ ಪರಿಕಲ್ಪನೆಯನ್ನು ಭಗವದ್ಗೀತೆಯನ್ನು ರಚಿಸಿದಾತ ಲ್ಯಾಟಿನ್ ಮೂಲದ ಎಫಿಕ್ಯೂರಿಯನ್ ಪರಂಪರೆಯಿಂದ ಪಡೆದಿರಬಹುದು ಎಂದು ಕೆಲವರು ಅಂದಾಜು ಮಾಡುತ್ತಾರೆ. ಗ್ರೀಕ್ನ ಪೈಥಾಗೊರಸ್ ಉಪನಿಷತ್ತುಗಳಿಂದಲೂ ಪ್ರಭಾವಿತನಾಗಿರಬಹುದು ಎಂಬ ಮಾತಿದೆ. ಆ ಕಾರಣ ಯಾರನ್ನು ಯಾರು ಪ್ರಭಾವಿಸಿದರು ಎಂಬ ವಿಚಾರದಲ್ಲಿ ಇಷ್ಟೆ ಸರಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಒಂದು ಮಾತಂತೂ ಸತ್ಯ. ನಿಷ್ಕಾಮಕರ್ಮ ಸಿದ್ಧಾಂತ ಸಂಪೂರ್ಣ ಭಾರತದ್ದೇನಲ್ಲ. ಆದರೆ ಅದನ್ನು ಭಗವದ್ಗೀತೆಯಲ್ಲಿ ಮಂಡಿಸುವ ರೀತಿ ಮಾತ್ರ ಇಂದಿಗೂ ಅತ್ಯಂತ ವಿನೂತನವಾದುದು. ನಿಷ್ಕಾಮಕರ್ಮ ಮತ್ತು ನಿರ್ಭಾವುಕ ಚಿಂತನಕ್ರಮವನ್ನು ಪ್ರೇರೇಪಿಸುವ ಭಗವದ್ಗೀತೆಯ ಹೆಸರಿನಲ್ಲಿ ಕಚ್ಚಾಡುವುದು ಎಷ್ಟು ಸರಿ?
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications