233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg193213ndaಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg193213ndaಮೂರು ದಿನದಲ್ಲಿ ಪೋಟಾ ಕಾಯ್ದೆ ಜಾರಿ, ಬಿಜೆಪಿ/news/2009/03/13/pota-within-three-days-if-nda-comes-to-power-bjp.htmlಬೆಂಗಳೂರು, ಮಾ. 13 : ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೂರೇ ಮೂರು ದಿನದಲ್ಲಿ ಪೋಟಾ ಕಾಯ್ದೆಯನ್ನು ಮರು ಜಾರಿಗೆ ತರಲಿದೆ ಎಂದು ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಭರವಸೆ ನೀಡಿದರು. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಯುಪಿಎ ಸರ್ಕಾರ ಪೋಟಾ ಕಾಯ್ದೆಯನ್ನು ರದ್ದುಗೊಳಿಸಿತು ಎಂದು ಆರೋಪಿಸಿದರು. ಯಪಿಎ 35204http://kannada.oneindia.com/img/2009/03/13-dhananjay-kumar1.jpg193213ndaಹೆಣ್ಣುಮಕ್ಕಳು'ಲಕ್ಷಾಧಿಪತಿ'ಆಗ್ಬೇಕು : ಆಡ್ವಾಣಿ/news/2009/03/18/advani-vows-to-make-every-girl-a-lakhpati.htmlನವದೆಹಲಿ, ಮಾ. 18 : ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ಹೊಸ ಆಶ್ವಾಸನೆ ನೀಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಹುಡುಗಿಗೆ 18 ವರ್ಷ ತುಂಬುವ ವೇಳೆ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ. ದೇಶದಲ್ಲಿ ಸುಮಾರು 714 ಮಿಲಿಯನ್ ಮತದಾರರಲ್ಲಿ 340 ಮಿಲಿಯನ್ ಮಹಿಳಾ ಮತದಾರರಿದ್ದಾರೆ.ದೇಶದ 35307http://kannada.oneindia.com/img/2009/03/18-advanilk2.jpg193213ndaಲೋಕಸಭೆ ಚುನಾವಣೆ, ಯುಪಿಎಗೆ 257 ಕ್ಷೇತ್ರ /news/2009/03/23/upa-could-get-257lok-sabha-seats-survey.htmlನವದೆಹಲಿ, ಮಾ. 23 : ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ? ಗೊತ್ತಿಲ್ಲ. ಆದರೆ ನೀಲ್ ಸನ್ ಕಂಪನಿ ಹಾಗೂ ವಾರ್ತಾವಾಹಿನಿಯೊಂದು ನಡೆಸಿದ ಪ್ರಕಾರ ಯುಪಿಎ ಒಕ್ಕೂಟಕ್ಕೆ 257 ಸಂಸದರು ಆಯ್ಕೆಯಾಗಲಿದ್ದಾರೆ. ಸರ್ಕಾರ ರಚನೆಗೆ ಬೇಕಿರುವ 272 ಮ್ಯಾಜಿಕ್ ಸಂಖ್ಯೆಗೆ ಕೇವಲ 15 ಸಂಸದರು ಕಡಿಮೆಯಾಗಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಯುಪಿಎ ಅಂಗಪಕ್ಷಗಳಾದ 35427http://kannada.oneindia.com/img/2009/03/23-m-m-singh1.jpg193213ndaತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ/news/2009/03/31/there-is-no-third-front-lk-advani.htmlನವದೆಹಲಿ, ಮಾ. 31:"ಹಲವು ಸಣ್ಣ ಪುಟ್ಟ ಪಕ್ಷಗಳು ಸೇರಿ ಮಾಡಿರುವ ತೃತೀಯ ರಂಗಕ್ಕೆ ಅಸ್ತಿತ್ವವಿಲ್ಲ. ಎನ್ ಡಿಎ ಅಧಿಕಾರಿಕ್ಕೆ ಬಂದರೆ, ಸರ್ಕಾರ ರಚನೆಗೆ ಇದೇ ಸಣ್ಣ ಪಕ್ಷಗಳು ಸಹಾಯ ಮಾಡಲಿವೆ " ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.ದೇಶದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಹೊರತು ಪಡಿಸಿ 35629http://kannada.oneindia.com/img/2009/03/31-advani-lk2.jpg124510upaಸಾಂಗ್ಲಿಯಾನಾ, ಕುನ್ನೂರು ಕಾಂಗ್ರೆಸ್ ಸೇರ್ಪಡೆ/news/2009/01/21/expelled-ktaka-bjp-leaders-join-congress.htmlನವದೆಹಲಿ, ಜ. 21 : ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಅಮಾನತುಗೊಂಡಿದ್ದ ಮನೋರಮಾ ಮಧ್ವರಾಜ್, ಎಚ್ ಟಿ ಸಾಂಗ್ಲಿಯನಾ ಮತ್ತು ಮಂಜುನಾಥ್ ಕುನ್ನೂರು ಇಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು.ಕಳೆದ ವರ್ಷ ಜುಲೈ 22 ರಂದು ಲೋಕಸಭೆಯಲ್ಲಿ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದರು. ಮನೋರಮಾ ಮಧ್ವರಾಜ್ 34195http://kannada.oneindia.com/img/2009/01/21-sangliyana-congress.jpg124510upaಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg124510upa8 ಆಸ್ಕರ್ ಪ್ರಶಸ್ತಿ ಯಪಿಎ ಸರಕಾರದ ಸಾಧನೆ, ಕಾಂಗ್ರೆಸ್/news/2009/02/24/congress-counts-8oscars-as-part-of-upa-achievement.htmlನವದೆಹಲಿ, ಫೆ. 24 : ಪ್ರಶಸ್ತಿ ಗೆಲ್ಲಲು ಉತ್ತಮ ಕತೆ, ಚಿತ್ರಕತೆ, ಸಂಗೀತ, ನಿರ್ದೇಶನ ಮಾತ್ರ ಇದ್ದರೆ ಸಾಕೇ ಕೇಂದ್ರದಲ್ಲಿ ಉತ್ತಮ ಸರ್ಕಾರವೂ ಬೇಕು ? ಸೋಮವಾರ ಸ್ಲಂಡಾಗ್ ಮಿಲೇನಿಯರ್ ಚಿತ್ರ ಎಂಟು ಆಸ್ಕರ್ ಪ್ರಶಸ್ತಿ ಗಳಿಸಿದ್ದನ್ನು ಕಾಂಗ್ರೆಸ್ ತನ್ನ ಪಕ್ಷದ ಸಾಧನೆ ಎಂದು ಬಿಂಬಿಸತೊಡಗಿದೆ. ಕಳೆದ ಎನ್ ಡಿ ಎ ಸರಕಾರ ಲೋಕಸಭಾ ಚುನಾವಣೆಯ ಸಮಯದಲ್ಲಿ 34835http://kannada.oneindia.com/img/2009/02/24-abhishek-singhvi1.jpg124510upaಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg124510upaಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpgnews"> ಎನ್.ಡಿ.ಎ.ಗೆ ಚುನಾವಣೆ ಪ್ರಾಯೊಜಿಸಿದ 'ರಿಯಾಲಿಟಿ ಶೊ' | Voter teaches a lesson to NDA - ಎನ್.ಡಿ.ಎ.ಗೆ ಚುನಾವಣೆ ಪ್ರಾಯೊಜಿಸಿದ 'ರಿಯಾಲಿಟಿ ಶೊ' - Kannada Oneindia

ಎನ್.ಡಿ.ಎ.ಗೆ ಚುನಾವಣೆ ಪ್ರಾಯೊಜಿಸಿದ 'ರಿಯಾಲಿಟಿ ಶೊ'

Madhu Krishnamurthy, California
ಮೊನ್ನೆ ಚುನಾವಣೆಯಲ್ಲಿ ಯುಪಿಎ ನಿರೀಕ್ಷೆಗೂ ಮೀರಿ ಜಯಭೇರಿ ಹೊಡೆದ್ದದ್ದು ಅಪೇಕ್ಷಿತ ರೀತಿಯಲ್ಲೇ 'ಎನ್.ಡಿ.ಎ' ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಉಂಟುಮಾಡಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು. ಅರವತ್ತು ವರ್ಷಗಳ ಕಾಲ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ಸಿಗೆ ಮತ್ತೆ ಮತ ನೀಡಿದ್ದಾರೆ. ಎಲ್ಲಿಯವರೆಗೆ ನಮ್ಮ 'ಅನಕ್ಷರಸ್ತ ಮತ್ತು ಅವಿವೇಕಿ' ಮತದಾರರು ತಮ್ಮ ಮತವನ್ನು ಈ ರೀತಿ ಮಾರಿಕೊಳ್ಳುತ್ತಾರೊ ಅಲ್ಲಿವರೆಗೂ ನಮ್ಮ ದೇಶ ಉದ್ಧಾರ ಆಗಲ್ಲ. ಇನ್ನು ಟೆರರಿಸ್ಟ್ ಅಟ್ಯಾಕ್ ಒಂದರ ಮೇಲೆ ಒಂದರಂತೆ ಶುರುವಾಗತ್ತೆ ನೋಡ್ತಾ ಇರಿ". ಈ ಮಾತು ಕೇಳಿದಾಗ ನನಗನ್ನಿಸಿದ್ದು ಹೀಗೆ.

ಎನ್ ಡಿಎ ಬೆಂಬಲಿಗರಿಗೆ ಭಾರತದ ಪ್ರೌಢ ಮತದಾರರ ಮತ ಬೇಕಿದ್ದಲ್ಲಿ ಅವರ ಸಮಸ್ಯೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ, ಗೆದ್ದು ಬಂದಲ್ಲಿ ಮಾತಿಗೆ ತಪ್ಪದೆ ಪಾಲಿಸಬೇಕು. ಎನ್.ಡಿ.ಎದ ಪ್ರಮುಖ ಅಂಗಪಕ್ಷ ಭಾಜಪ ಚುನಾವಣೆಗೆ ಮುನ್ನ ಮಾಡಿದ್ದು ಏನೆಂದರೆ ಇಡಿ ಭಾರತದ ಹೆಚ್ಚಿನ ಜನಸಮೂಹದ ಹಿತದ ಬಗ್ಗೆ ಯೋಚಿಸುವ ಬದಲು ಚುನಾವಣೆಯಲ್ಲಿ ಜಯಗಳಿಸಲು ಹಿಂದುಗಳನ್ನೆಲ್ಲ ಒಂದೆಡೆ ಸೇರಿಸಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ತಂತ್ರ ಬಳಸಿದರು. ಹಿಂದುಗಳ ಅಭಿಮಾನ ಮತ್ತು ರಾಮಮಂದಿರ - ಇಂತಹ ಸಮಸ್ಯೆಗಳು ದೇಶದ ಬಹುಜನರ ಸಮಸ್ಯೆಯಾಗದೆ ಹಿಂದುಗಳನ್ನು ಒಂದೆಡೆಗೆ ಆಕರ್ಷಿಸಲು ಬಳಸಿದ ತಂತ್ರವೆಂದು ನಾನು ಹೇಳಬೇಕಿಲ್ಲ. ಅಷ್ಟೇಕೆ ಅವರು ಅಧಿಕಾರಕ್ಕೆ ಬಂದಾಗ ಈ ವಿಷಯಗಳನ್ನು ಮೂಲೆಗೆ ನೂಕಿದ್ದು ಇದಕ್ಕೆ ಸಾಕ್ಷಿಯಾಗಿವೆ. ಈ ಮಧ್ಯೆ ಆಗಾಗ ನಡೆಯುತ್ತಿದ್ದ ಆತಂಕವಾದಿಗಳ ಹೇಯ ಕೃತ್ಯಗಳು ಭಾಜಪಕ್ಕೆ ಇನ್ನೊಂದು ಅಸ್ತ್ರವನ್ನು ನೀಡಿತು.

'ದೇಶದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ಅಶಕ್ತವಾದುದು. ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ಪಕ್ಷ, ವೋಟ್-ಬ್ಯಾಂಕ್ ರಾಜಕಾರಣದಿಂದಾಗಿ ದೇಶದ್ರೋಹ ಎಸಗಿದವರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ನಾವಾದರೆ ದೇಶದ್ರೋಹಿ ಎಂದು ಅನುಮಾನಿಸಲು ಒಂದು ಸಣ್ಣ ಸಾಕ್ಷಿ ಸಿಕ್ಕರೂ ಸಾಕು ಅವರನ್ನು ಒದ್ದು ಜೈಲಿಗೆ ಹಾಕಲು ಮುಲಾಜು ನೋಡುವುದಿಲ್ಲ. ಅದ್ದರಿಂದ ನಮಗೆ ಮತ ಹಾಕಿ.' ಮುಂಬೈ ಧಾಳಿ ಆದಮೇಲಂತೂ ತಮಗೆ ಜಯ ದೊರಕುವುದರಲ್ಲಿ ಸಂದೇಹವೇ ಇಲ್ಲ ಎಂದುಕೊಂಡು ಭಾಜಪ ಚುನಾವಣೆಗೆ ಹೋಯಿತು.

ಆದರೆ ಚುನಾವಣೆಯ ಪಲಿತಾಂಶ ತೋರಿದ ವಾಸ್ತವಿಕತೆಯೇ ಬೇರೆಯಾಗಿತ್ತು. ಮತದಾರರು ಎನ್.ಡಿ.ಎ. ಬಳಸಿದ್ದ ತಂತ್ರಗಳ ಜಾಲಕ್ಕೆ ಸಿಕ್ಕಿಬೀಳದೆ ಅದರ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಇದಕ್ಕೆ ಕಾರಣಗಳು ಅನೇಕ.

ಈ ಚುನಾವಣೆಯಲ್ಲಿ ಭಾರತದಾದ್ಯಂತ ಸರಾಸರಿ ಹೆಚ್ಚಿನ ಮತದಾರರು ನೀಡಿರುವ ತೀರ್ಪು ಇದು. 'ಇಂದಿನ ಸಂದರ್ಭದಲ್ಲಿ ನಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಲು ಹೆಚ್ಚು ಸಮರ್ಥರಾದವರು 'ಯುಪಿಎ'. ಇದಕ್ಕೆ ಕಾರಣ, 'ಎನ್.ಡಿ.ಎ' ಬೆಂಬಲಿಗರ ಕಣ್ಣಿಗೆ ಕಾಣುವ ದೇಶದ ಸಮಸ್ಯೆಗಳು, ಭಾರತದ ಬಹು ಪಾಲು ಜನರ ಕಣ್ಣಿನಲ್ಲಿ ಪ್ರಧಾನವಾದ ಸಮಸ್ಯೆಗಳೇ ಆಗಿರಲ್ಲಿಲ್ಲ. ಆದ್ದರಿಂದ ಅವರು ಎನ್.ಡಿ.ಎ ಕಡೆ ಆಕರ್ಷಿತರಾಗಲಿಲ್ಲ. ಇಂಗ್ಲೀಶ್ ಭಾಷೆಯಲ್ಲಿ ಬಳಸುವ ಒಂದು ಮಾತು "ಕಲೆಕ್ಟೀವ್ ವಿಸ್ಡಂ". ಅಂದರೆ ಹೆಚ್ಚು ಜನರು ಸೇರಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತವೂ ಮತ್ತು ಪಕ್ವವೂ ಆಗಿರುತ್ತದೆ. ಈ ಪದಗಳು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವನ್ನು ಬೇರೆ ರೀತಿಯಲ್ಲಿ ಹೇಳಿವೆ ಅಷ್ಟೇ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೇ ಆದ್ಯತೆ. ಅತಿ ಹೆಚ್ಚು ಜನರು, ಯಾರು ಮತ್ತು ಯಾವ ರೀತಿ ತಮ್ಮ ದೇಶದ ಆಡಳಿತ ನಡೆಸಬೇಕು ಎಂದು ಅಪೇಕ್ಷಿಸುತ್ತಾರೋ ಅದೇ ಸರಿಯಾದ ಮಾರ್ಗ. ಮತದಾರರು ನೀಡಿದ ಈ ತೀರ್ಪನ್ನು ಹಿಯಾಳಿಸದೇ ಆ ನಿರ್ಧಾರಕ್ಕೆ ಮನ್ನಣೆ ನೀಡುವುದು ಮತ್ತು ಮುಂದಿನ ಬಾರಿ ಹೀಗಾಗದಂತೆ ಎಚ್ಚರವಹಿಸುವುದು ತಿರಸ್ಕೃತಗೊಂಡ ಗುಂಪು ಮಾಡಬೇಕಾದ ಕೆಲಸ. ಹೀಗೆ ಮಾಡದೆ "ಮತದಾರನ ಹೆಂಡದ ಅಮಲು, ಹಣದ ಆಸೆ ಮತ್ತು ಅವಿವೇಕವೇ ನಮ್ಮ ಸೋಲಿಗೆ ಕಾರಣ" ಎಂದು ಸಬೂಬು ನೀಡುವುದು ದಡ್ಡತನವಷ್ಟೇ ಅಲ್ಲದೆ ಭಾರತೀಯ ಮತದಾರನ/ಳನ್ನು ಅವಹೇಳನ ಮಾಡುವಂತಹ ಮಾತು. ಪರಾಭವಗೊಂಡ ಎನ್.ಡಿ.ಎ. ನಾಯಕರು ಈ ರೀತಿ ಮಾಡದೆ ಸೋಲಿಗೆ ಕಾರಣಗಳನ್ನು ಹುಡುಕುವುದಾಗಿ ಹೇಳಿಕೆ ನೀಡಿರುವುದು ಭಾರತದಲ್ಲಿ ಪ್ರಜಾಪ್ರಭುತ್ವ ಹೊಂದುತ್ತಿರುವ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ನನಗೆ ಅನಿಸಿರುವುದು ಮತ್ತು ಅನೇಕ ವಾರ್ತಾ ಪತ್ರಿಕೆಗಳಲ್ಲಿ ಉಲ್ಲೇಖಿಸಿರುವಂತಹ ಒಂದು ವಿಷಯ ಇದು. ಚುನಾವಣೆಗೆ ಮುನ್ನ ಅಡ್ವಾಣಿ ಅವರು ಮನಮೋಹನ್ ಸಿಂಗರ ಮೇಲೆ ನಡೆಸಿದ ವೈಯಕ್ತಿಕ ವಾಗ್ದಾಳಿ ಅಡ್ಡಗೋಡೆ ಮೇಲೆ ಕೂತಿದ್ದ ಮತದಾರರನ್ನು ಮನಮೋಹನ್ ಸಿಂಗರ ಬೆಂಬಲಕ್ಕೆ ಓಡಿಹೋಗುವಂತೆ ಮಾಡಿತು. ಅಡ್ವಾಣಿ ಪ್ರಧಾನ ಮಂತ್ರಿಗಳನ್ನು 'ನಿಕಮ್ಮ' (ಕೈಲಾಗದವರು) ಎಂದು ಕರೆದಾಗ ನನಗಂತು ಬೇಜಾರಾಯಿತು. ಸಿಂಗ್ ಕೂಡ ಅಡ್ವಾಣಿಯವರಿಗೆ ಭಾರಿ ತಿರುಗೇಟು ನೀಡಿಯೆಬಿಟ್ಟರು. ಅದೂ ಸಿಂಗ್ ಕೊಟ್ಟಿದ್ದು ಲೆಫ್ಟ್-ರೈಟ್ ಪಂಚು. ಮೊದಲು "ಪುಂಡರು ಮಸೀದಿ ಕೆಡುವುತ್ತಿದಾಗ ನಾನು ಮೂಲೆಯಲ್ಲಿ ಕಣ್ಣೀರು ಸುರಿಸುತ್ತಿರಲಿಲ್ಲ" ಎಂದರು. ಅದರ ಒತ್ತೊಟ್ಟಿಗೆ ಇನ್ನೊಂದು ಮುಷ್ಠಿ ಪ್ರಹಾರ -"ಇವರು ಗೃಹ ಮಂತ್ರಿಯಾಗಿದ್ದಾಗಲೆ ಅಲ್ಲವೆ ಕಂದಾಹಾರ್ ನಡೆದಿದ್ದು. ಈ ಉಕ್ಕಿನ ನಾಯಕ ಅಂದು ಕರಗಿ ಹೋಗಿದ್ದು ನೆನಪಿಲ್ಲವೆ" ಎಂದು ಅಡ್ವಾಣಿಜಿ ಬಗ್ಗೆ ಸಿಂಗ್ ತಮ್ಮ ತಗ್ಗಿದ ಧ್ವನಿಯಲ್ಲಿಯೆ ಹೇಳಿದರೂ ಮತದಾರನಿಗೆ ಅದು ಸಿಂಹದ ಘರ್ಜನೆಯಂತೆ ಕೇಳಿಸಿತು. ಮ.ಮೋ. ಸಿಂಗ್ ಇಲ್ಲಿ ಅಂಡರ್ ಡಾಗ್. ಅಡ್ವಾಣಿಯಾದರೋ ನಾಲ್ಕೈದು ದಶಕಗಳಿಂದ ರಾಜಕೀಯ ಕಣದಲ್ಲಿ ಹೊಡೆದು-ಬಡೆದು ಪಳಗಿದ ಹೆಬ್ಬುಲಿ. ಅಡ್ವಾಣಿ ನಮ್ಮ ದೇಶದ ರಾಜಕಾರಣಿಗಳ ಆಟಗಾರ. ಸಿಂಗ್ ಆದರೋ ಹೊಲಸು ರಾಜಕೀಯದಲ್ಲಿ ಹುಟ್ಟಿಬರದೇ, ಸಮಾಜದಲ್ಲಿ ಗೌರವಿಸಲ್ಪಟ್ಟ ಸಂಭಾವಿತ ಆದರ್ಶಪ್ರಾಯ ಪ್ರೊಫೆಶನಲ್. ಸಿಂಗ್ ತಿರುಗೇಟು ನೀಡಿದ್ದರಿಂದ ಹಿಗ್ಗಿದ ಮತದಾರನಿಗೆ ಸಿಂಗರ ಬಗ್ಗೆ ಮೆಚ್ಚುಗೆ ಮತ್ತು ವಿಶ್ವಾಸ ಗಟ್ಟಿಯಾಯಿತು. ಮತದಾರನಲ್ಲಿ ಈ ಬದಲಾವಣೆ ಮೂಡಿಸಿದ ಕೀರ್ತಿ ಅಡ್ವಾಣಿಜಿ ಮತ್ತು ಅವರ ಆಪ್ತ ಸಲಹೆಗಾರರಿಗೇ ಸಲ್ಲಬೇಕು. ಈ ಕಾರ್ಯಕ್ಕೆ ಬೆನ್ನುತಟ್ಟಿಕೊಳ್ಳುತ್ತಾರೊ ಅಥವ ಕೈಕೈ ಹಿಸುಕಿಕೊಳ್ಳುತ್ತಾರೊ ಅವರಿಗೆ ಬಿಟ್ಟಿದ್ದು. ಸಿಂಗ್ ನೇತೃತ್ವದ ಯೂ.ಪಿ.ಎ ಜಯಕ್ಕೆ ಇದೂ ಒಂದು ಕಾರಣ. ಇದಿಷ್ಟೇ ಕಾರಣ ಎಂದು ಖಂಡಿತ ಇಲ್ಲಿ ಹೇಳುತ್ತಿಲ್ಲ. ಇದರಜೊತೆಗೆ ಬೇರೆ ಅನೇಕ ವಿದ್ಯಮಾನಗಳು ಈ ಸಲದ ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿವೆ. ಕರ್ನಾಟಕ, ಬಿಹಾರ, ಅಂಧ್ರಪ್ರದೇಶ, ಓರಿಸ್ಸ, ದೆಹೆಲಿ ಇವೇ ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಪಕ್ಷಗಳ ಜನಪ್ರಿಯತೆ ಅಲ್ಲಿನ ಫಲಿತಾಂಶಗಳಿಗೆ ಕಾರಣವಾಗಿದೆ. ಅಯೋಧ್ಯೆಪಟ್ಟಣ ಇರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ವರುಣ್ ಗಾಂಧಿ ತಾವು ಗೆದ್ದರೂ, ಅವರ ಆವೇಶಭರಿತ ಭಾಷಣ ಎನ್.ಡಿ.ಎ.ಗೆ ಕುತ್ತು ತಂದಿರುವುದನ್ನು ನೋಡಬಹುದು.

ಈ ಎಲ್ಲ ಕಾರಣಗಳನ್ನು ಎನ್.ಡಿ.ಎ. ಅರ್ಥಮಾಡಿಕೊಂಡರೆ ಮುಂದಿನ ಚುನಾವಣೆಗಳಲ್ಲಿ ಮತದಾರಳ/ನ ಮನ ಓಲೈಸುವುದರಲ್ಲಿ ಯಶಸ್ವಿ ಆಗಬಹುದು. ಅಥವ 'ಈ ರೀತಿಯ ಮಧ್ಯಪಥದ ಸಹವಾಸವೇ ಬೇಡ. ಹಿಂದುತ್ವವಾದವನ್ನು ತೀವ್ರವಾಗಿ ಬಳಸಿದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ' ಎಂದು ಯೋಚಿಸಿ ಎನ್.ಡಿ.ಎ. ಆ ದಿಕ್ಕಿನಲ್ಲಿ ಹೋಗತೊಡಗಿದರೆ ಅದೊಂದು ದೊಡ್ಡ ದುರಂತ. ಜವಾಬ್ದಾರಿಯುತ ರಾಜಕರಣದ ಮೂಲಕ ರಾಷ್ಟ್ರಹಿತವನ್ನು ಕಾಯುವ ಕೆಲಸವನ್ನು ಎನ್.ಡಿ.ಎ. ತನ್ನದಾಗಿಸಿಕೊಳ್ಳುವುದು ಎಂದು ಇಲ್ಲಿ ಆಶಿಸಬಹುದಷ್ಟೆ.

ಇಲ್ಲಿ ಗಮನಿಸಬಹುದಾದ ಒಂದು ವಿಷಯ ಏನೆಂದರೆ ಭಾರತೀಯ ಮತದಾರರು ದೂರದೂರ ಪ್ರದೇಶಗಳಲ್ಲಿದ್ದರೂ, ಬೇರೆ ಬೇರೆ ಸಮಯಗಳಲ್ಲಿ ಮತ ಚಲಾಯಿಸಿದರೂ ಸಮಾನ ಮನಸ್ಕರಾಗಿ ಮತ ಚಲಾಯಿಸಿದ್ದಾರೆ. ಇದು ವಿಸ್ಮಯಕಾರಿ ಅಂಶ ಸಂಭ್ರಮ ಮೂಡಿಸುವಂತಹುದು ಎಂದರೆ ತಪ್ಪೆನಿಸುವುದಿಲ್ಲ. ಇದು ಭಾರತೀಯರು 'ಅನೇಕತೆಯಲ್ಲಿ ಏಕತೆಯನ್ನು' ಮೆರೆಸುತ್ತಿರುವ ಒಂದು ದೃಷ್ಟಾಂತ. ಮತದಾರ ಪ್ರಭುವಿಗೆ ಅಭಿನಂದನೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+