ನೌಕರರಿಗೆ 35 ಲಕ್ಷ ರೂ ಬೋನಸ್ ನೀಡಿದ ಅಮೆರಿಕ ಕಂಪನಿ
ವಾಷಿಂಗ್ಟನ್, ಡಿಸೆಂಬರ್ 13: ಪ್ರಮುಖ ಹಬ್ಬ ಹರಿದಿನಗಳು ಬಂದಾಗ ಸಾವಿರಾರು ರುಪಾಯಿ ಬೋನಸ್ ನೀಡುವುದು ಸಾಮಾನ್ಯ ಆದರೆ, ಅಮೆರಿಕದ ಕಂಪನಿಯೊಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತನ್ನ ಸಿಬ್ಬಂದಿಗೆ ಬರೋಬ್ಬರಿ 35.50 ಲಕ್ಷ ರುಪಾಯಿ ಬೋನಸ್ ನೀಡಿದೆ.
ಕಂಪನಿಯ ನಿರ್ಧಾರವನ್ನು ನೋಡಿ ಸಿಬ್ಬಂದಿ ಹೌಹಾರಿದ್ದಾರೆ.ಒಟ್ಟು ಬೋನಸ್ಗಾಗಿಯೇ ಕಂಪನಿಯು 71 ಕೋಟಿ ರೂವನ್ನು ತೆಗೆದಿರಿಸಿದೆ.
ಕಂಪನಿಯ ಈ ಕ್ರಮಕ್ಕೆ ಸಿಬ್ಬಂದಿ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಸೇಂಟ್ ಜಾನ್ ಪ್ರಾಪರ್ಟೀಸ್ ಇಂತಹದೊಂದು ವಿಶಿಷ್ಟ ನಿರ್ಧಾರ ಮಾಡಿದೆ.

ಈ ಕಂಪನಿಯಲ್ಲಿ ಒಟ್ಟು 198 ಸಿಬ್ಬಂದಿಯಿದ್ದು, ಎಲ್ಲರಿಗೂ ಸೇರಿ ಸುಮಾರು 7 ಕೋಟಿ ರೂ ಬೋನಸ್ ನೀಡಲು ನಿರ್ಧರಿಸಲಾಗಿತ್ತು. ಬಳಿಕ ಇದು 35 ಕೋಟಿಗೆ ಏರಿಕೆಯಾಯಿತು.
ಇದನ್ನು ವಿಂಗಡಿಸಿದಾಗ ಸಿಬ್ಬಂದಿಗೆ ದೊಡ್ಡ ಪ್ರಮಾಣದ ಹಣ ದೊರೆಯುವುದಿಲ್ಲ ಹೀಗಾಗಿ. ಪ್ರತಿ ಸಿಬ್ಬಂದಿಗೂ 35 ಲಕ್ಷಕ್ಕಿಂತಲೂ ಅಧಿಕ ಹಣ ಬರುವಂತೆ ಮಾಡಿ, ಬೋನಸ್ಗೆ 10 ಮಿಲಿಯನ್ ಡಾಲರ್ ವಿನಿಯೋಗಿಸಲು ಸಂಸ್ಥೆ ಮುಖ್ಯಸ್ಥ ಸೇಂಟ್ ಜಾನ್ ನಿರ್ಧರಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿ ವಾರ್ಷಿಕ ಟಾರ್ಗೆಟ್ನ್ನು ಮೀರಿ ಕೆಲಸ ಮಾಡಿದ್ದಾರೆ.
ಹೀಗಿರುವಾಗ ಅವರಿಗೆ ಖುಷಿಯಾಗುವ ರೀತಿಯಲ್ಲಿ ಬೋನಸ್ ನೀಡುವುದು ಹಾಗೂ ಸಿಬ್ಬಂದಿಯಲ್ಲಿ ಉತ್ಸಾಹ ಮೂಡಿಸುವುದು ಕಂಪನಿಯ ಕೆಲಸವಾಗಿದೆ ಎಂದು ಜಾನ್ ಹೇಳಿಕೊಂಡಿದ್ದಾರೆ.
ಕಂಪನಿಯ ನಿರ್ಧಾರದ ಬಗ್ಗೆ ಮಾತನಾಡಿರುವ ಸಿಬ್ಬಂದಿ ಡೇನಿಯಲ್ ವೆಲೆಂಜಿಯಾ ಇಷ್ಟೊಂದು ದೊಡ್ಡ ಮೊತ್ತವನ್ನು ಮೊದಲಿಗೆ ಆಶ್ಚರ್ಯಚಕಿತವಾಗಿದ್ದೆವು. ನಂಬಲು ಕೂಡ ಸಾಧ್ಯವಾಗಿರಲಿಲ್ಲ ಆದರೆ ಬಳಿಕ ಇದು ನಿಜವೆಂದು ಗೊತ್ತಾದಾಗ ಆನಂದ ಭಾಷ್ಪವೇ ಹರಿಯಿತು ಎಂದು ಹೇಳಿದ್ದಾರೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications