ಮತ್ತೆ ನೆನಪಾಗುತ್ತಿದೆ ಆದರ್ಶ ದಂಪತಿ ಸುಷ್ಮಾ-ಸ್ವರಾಜ್ ಪ್ರೇಮಕಥೆ
ಪ್ರೇಮಕ್ಕೆ ಜಾತಿ, ಸಿದ್ಧಾಂತದ ಹಂಗಿಲ್ಲ ಎಂಬುದಕ್ಕೆ ಸುಷ್ಮಾ ಮತ್ತು ಸ್ವರಾಜ್ ಕೌಶಾಲ್ ಅವರ ಪ್ರೇಮಕಥೆ ಸಾಕ್ಷಿಯಾಗಿ ನಿಲ್ಲುತ್ತದೆ.
ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ
ಬಲಪಂಥೀಯವಾದಿಯಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಪಡಿಯಚ್ಚಾಗಿ ಬೆಳೆದ ಸುಷ್ಮಾ, ಪಕ್ಕಾ ಸಮಾಜವಾದಿ ಸ್ವರಾಜ್ ಅವರನ್ನು ವರಿಸಿದ್ದು ಒಂದು ಚೆಂದದ ಪ್ರೇಮಕಥೆ.
ದೆಹಲಿಯಲ್ಲಿ ಕಾನೂನು ಶಾಸ್ತ್ರ ಓದುವಾಗ ಪರಿಚಿತರಾದ ಈ ಜೋಡಿ ನಂತರ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿಯೂ ಒಟ್ಟಾಗಿಯೇ ಕೆಲಸ ಮಾಡಿದ್ದರು. ಪರಸ್ಪರ ಒಡನಾಟದಿಂದಾಗಿ ಹುಟ್ಟಿದ ಸ್ನೇಹವೇ, ಪ್ರೇಮವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದಾಗ ನಂಬಿದ್ದ ಭಿನ್ನ ಸಿದ್ಧಾಂತಗಳು ಅಡ್ಡಿ ಎನ್ನಿಸಲಿಲ್ಲ. ಏಕೆಂದರೆ ಇಬ್ಬರ ನಂಬಿಕೆ ಬೇರೆ ಬೇರೆಯಾದರೂ ಅವನ್ನು ಗೌರವಿಸುವ ಪ್ರಬುದ್ಧತೆ ಇಬ್ಬರಲ್ಲೂ ಇತ್ತು! ಆ ಪ್ರಬುದ್ಧತೆ, ಒಬ್ಬರಿಗೊಬ್ಬರ ಮೇಲಿದ್ದ ಗೌರವವೇ ಅವರನ್ನು 46 ವರ್ಷಗಳ ಯಶಸ್ವೀ ದಾಂಪತ್ಯದವರೆಗೆ ತಂದು ನಿಲ್ಲಿಸಿತ್ತು.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು
ಸ್ವರಾಜ್ ಅವರನ್ನು ವರಿಸಲು ಮುಂದಾದ ಸುಷ್ಮಾ ಅವರ ನಡೆಗೆ ಮೊದಲಿಗೆ ಸುಷ್ಮಾ ಅವರ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹರ್ಯಾಣದ ಸಾಂಪ್ರದಾಯಿಕ 'ಶರ್ಮಾ' ಕುಟುಂಬದಲ್ಲಿ ಹುಟ್ಟಿದ್ದ ಸುಷ್ಮಾ ಅವರು ಸಂಪ್ರದಾಯದ ಮೇಲೆ ಹೆಚ್ಚು ನಂಬಿಕೆ ಇಲ್ಲದ ಸಮಾಜವಾದಿ ಸ್ವರಾಜ್ ಅವರನ್ನು ಮದುವೆಯಾಗುವುದು ಬೇಡ ಎಂಬುದು ಮನೆಯವರ ನಿಲುವಾಗಿತ್ತು. ಆದರೆ 1975 ರ ಜುಲೈ 13 ರಂದು ತುರ್ತು ಪರಿಸ್ಥಿತಿಯ ಬಿಸಿ ಹೆಚ್ಚಿದ್ದ ಸಂದರ್ಭದಲ್ಲೇ ಸುಷ್ಮಾ-ಸ್ವರಾಜ್ ವಿವಾಹವಾದರು. ಈ ಜೋಡಿಯ ಪ್ರೀತಿಯೆದುರು ಕುಟುಂಬದ ಹಠ ಸೋತಿತ್ತು! ಆ ನಂತರ ಈ ದಂಪತಿಗೆ ಬಾನ್ಸುರಿ ಎಂಬ ಮಗಳೂ ಹುಟ್ಟಿದಳು.
ಮದುವೆಯಾದ 46 ವರ್ಷಗಳವರೆಗೂ ಪರಸ್ಪರ ಅಷ್ಟೇ ಗೌರವ, ಪ್ರೀತಿಯನ್ನು ಉಳಿಸಿಕೊಂಡು ಆದರ್ಶ ದಂಪತಿ ಎನ್ನಿಸಿಕೊಂಡಿದ್ದರು ಸುಷ್ಮಾ-ಸ್ವರಾಜ್. ದೆಹಲಿಯ ಸರ್ಕಾರಿ ಬಂಗಲೆ(ಹೊಸ ಸರ್ಕಾರ ರಚನೆಯಾದ ಮೇಲೆ)ಯಿಂದ ಜೂನ್ 30 ರಂದಷ್ಟೇ ಹೊಸ ಮನೆಗೆ ತೆರಳಿ, ರಾಜಕೀಯದ ತಲೆಬಿಸಿಯನ್ನೆಲ್ಲ ಮರೆತು ಕೆಲಕಾಲ ವೈಯಕ್ತಿಕ ಬದುಕಿನತ್ತ ಗಮನ ಹರಿಸಬೇಕು ಎಂದುಕೊಂಡಿದ್ದರು ಸುಷ್ಮಾ! ಪತ್ನಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಾಗ ಎಲ್ಲರಿಗಿಂತ ಖುಷಿ ಪಟ್ಟಿದ್ದು ಸ್ವರಾಜ್! "ನನಗೀಗ 19 ವರ್ಷವಲ್ಲ, ನಿನ್ನ ಹಿಂದೆ 46 ವರ್ಷಗಳಿಂದ ಓಡುತ್ತಿದ್ದೇನೆ. ಇನ್ನಾದರೂ ಈ ಜಂಜಾಟಗಳನ್ನೆಲ್ಲ ಮರೆತು ಹಾಯಾಗಿರೋಣ" ಎಂದು ಸ್ವರಾಜ್ ಸುಷ್ಮಾ ಅವರಿಗೆ ಸಂದೇಶ ಕಳಿಸಿದ್ದರು.
ಆದರೆ ವಿಧಿ ಬೇರೆ ಇತ್ತು. ಇಷ್ಟು ಕಾಲ ಆರೋಗ್ಯವನ್ನೂ ನಿರ್ಲಕ್ಷ್ಯಿಸಿ ನಿರಂತರವಾಗಿ ದೇಶಸೇವೆ ಮಾಡಿದ, ದಣಿವರಿಯದೆ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ಆಗಸ್ಟ್ 6 ರಂದು ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಸುಷ್ಮಾ ಅವರ ಎಂದೂ ಮಾಸದ ನಗು, ವಾತ್ಸಲ್ಯ, ಪ್ರೀತಿಯಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲೀಗ ಮೌನದ್ದೇ ಕಾರುಬಾರು... ಜೊತೆಗೆ ಗೋಡೆಯ ಮೇಲೆ ಮಾಲೆಯೆ ಹಿಂದಿರುವ ಚಿತ್ರದಲ್ಲಿ ಮಾತೃಪ್ರೀತಿ ಸ್ಪುರಿಸುವ ಅದೇ ನಗು...
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications