ರಾಮುಲುಗೆ 'ರೌಡಿ ಥರಹ ಇದ್ದೀಯಾ' ಎಂದಿದ್ರು ಸುಷ್ಮಾ ಸ್ವರಾಜ್
ಬೆಂಗಳೂರು, ಅಕ್ಟೋಬರ್ 10: ವಿಧಾನಸಭೆ ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಅಂಗೀಕರಿಸುವ ವೇಳೆ ಮಾತನಾಡಿದ ಶ್ರೀರಾಮುಲು ಸುಷ್ಮಾ ಸ್ವರಾಜ್ ಅವರ ಕುರಿತು ಮಾತನಾಡುತ್ತಾ ಭಾವುಕರಾದರು.
ಸುಷ್ಮಾ ಸ್ವರಾಜ್ ಅವರನ್ನು ಅಮ್ಮ ಎಂದೇ ಸಂಭೋದಿಸಿದ ಶ್ರೀರಾಮುಲು, ಸುಷ್ಮಾ ಸ್ವರಾಜ್ ಹಾಗೂ ರಾಮುಲು ಅವರ ನಡುವೆ ಇದ್ದ ಸಲುಗೆಯ ಬಗ್ಗೆಯೂ ಮಾತನಾಡಿದರು.
ರಾಮುಲು ಅವರು ಲೋಕಸಭೆ ಚುನಾವಣೆಗೆ ಬಳ್ಳಾರಿಯಿಂದ ಸ್ಪರ್ಧೆ ಮಾಡಿದಾಗ ನಾನೂ ಚುನಾವಣೆಗೆ ಸ್ಪರ್ಧಿಸಿದ್ದೆ ಇಬ್ಬರೂ ಸೋತೆವು ನಾನು ಅಳುತ್ತಿದ್ದೆ ಆದರೆ ಅವರು ನನಗೆ ಧೈರ್ಯ ತುಂಬಿದರು ಮತ್ತು ನನ್ನನ್ನು ಮಗನೆಂದೇ ಸ್ವೀಕರಿಸಿದರು ಎಂದು ರಾಮುಲು ಹೇಳಿದರು.

'ನಾನಾಗ ಉದ್ದುದ್ದ ಕೂದಲು ಬಿಟ್ಟು ಒರಟಾಗಿದ್ದೆ, ಆದರೆ ತಾಯಿ ಸುಷ್ಮಾ ಸ್ವರಾಜ್ ನನ್ನನ್ನು ಬೈದರು, ''ನೋಡಲು ರೌಡಿ ರೀತಿ ಕಾಣುತ್ತಿದ್ದೀಯಾ, ಮೊದಲು ಕೂದಲು ಕತ್ತರಿಸಿಕೋ'' ಎಂದರು' ಎಂದು ನೆನಪು ಮಾಡಿಕೊಂಡರು.
ಜನಾರ್ದನ ರೆಡ್ಡಿ ಹಾಗೂ ತಮ್ಮನ್ನು ಬಹುವಾಗಿ ನಂಬಿದ್ದರು ಮತ್ತು ಮಕ್ಕಳೆಂದೇ ಪರಿಗಣಿಸಿದ್ದರು. ಬಳ್ಳಾರಿ ಚುನಾವಣೆ ಮುಗಿದ ನಂತರ ಸತತವಾಗಿ ಎಂಟು ವರ್ಷಗಳ ಕಾಲ ಅವರು ಬಳ್ಳಾರಿಗೆ ಲಕ್ಷ್ಮೀ ಪೂಜೆಗೆ ಆಗಮಿಸಿದ್ದರು ಎಂದರು.
-
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications