ಸುಷ್ಮಾ ಸ್ವರಾಜ್ ನಿಧನಕ್ಕೆ 'ರೆಸ್ಟ್ ಇನ್ ಹೆಲ್' ಎಂದ ಪಾಕ್ ನಟಿ
ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬಿನಿ ಮಿಡಿಯುತ್ತಿದ್ದರೆ, ಪಾಕಿಸ್ತಾನದ ನಟಿಯೊಬ್ಬಳು ಟ್ವಿಟ್ಟರ್ ನಲ್ಲಿ ಲೇವಡಿ ಮಾಡಿದ್ದಾರೆ.
ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ
ಯಾರಾದರೂ ನಿಧನ ಹೊಂದಿದಾಗ, RIP (ರೆಸ್ಟ್ ಇನ್ ಪೀಸ್) ಎಂದು ಕಾಮೆಂಟ್ ಮಾಡುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ನಟಿ ವೀಣಾ ಮಲಿಕ್. RIH (ರೆಸ್ಟ್ ಇನ್ ಹೆಲ್) ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ, ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪಾಕಿಸ್ತಾನದ ನಟಿ, ಟಿವಿ ನಿರೂಪಕಿ, ಮಾಡೆಲ್ ಆಗಿರುವ ವೀಣಾ ಮಲಿಕ್, 2012ರಲ್ಲಿ 'ಗಲಿ ಗಲೀ ಮೇ ಚೋರ್ ಹೇ' ಎನ್ನುವ ಬಾಲಿವುಡ್ ಐಟಂ ಸಾಂಗಿಗೆ ಹೆಜ್ಜೆಹಾಕಿದ್ದರು.

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಆರ್ಟಿಕಲ್ 370 ರದ್ದತಿ ವಿಚಾರದಲ್ಲೂ, ಭಾರತದ ವಿರುದ್ದ ವೀಣಾ ಆಕ್ರೋಶ ಹೊರಹಾಕಿದ್ದರು. 'ಇದು ಜಿನಿವಾ ಒಪ್ಪಂದದ ಉಲ್ಲಂಘನೆ, ಕಾಶ್ಮೀರವನ್ನು ಬಲಾತ್ಕಾರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ' ಎಂದು ವೀಣಾ ಟ್ವೀಟ್ ಮಾಡಿದ್ದಳು.
'ಕೆಲಸ ಬೇಡಿಕೊಂಡು ಮತ್ತೆ ಬಾಲಿವುಡ್ ಗೆ ಬರಬೇಡ', 'ಬಲೂಚಿಸ್ಥಾನ್ ನಲ್ಲಿ ಪಾಕಿಸ್ತಾನದ ಆರ್ಮಿ ಮಾಡುತ್ತಿರುವುದು ಏನು, ಎನ್ನುವುದನ್ನು ಮೊದಲು ಅರಿತುಕೊ', 'ಗೃಹಸಚಿವರೇ ಇಂತವರಿಗೆ ಭಾರತದ ವೀಸಾ ಯಾಕೆ ನೀಡುತ್ತೀರಾ' ಎಂದು ನೆಟ್ಟಿಗರು ಪ್ರತ್ಯುತ್ತರ ನೀಡಿದ್ದರು.
ಸುಷ್ಮಾ ಸ್ವರಾಜ್ ನಿಧನದ ಬಗ್ಗೆ ವೀಣಾ ಮಾಡಿರುವ ಟ್ವೀಟಿಗೆ, ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ಬಂದಿದೆ. 'ಸುಷ್ಮಾ ಮೇಡಂ ಸ್ವರ್ಗದಲ್ಲಿ ಇರುತ್ತಾರೆ, ನೀನು ಯಾವತ್ತಿದ್ದರೂ ನರಕಕ್ಕೇ ಹೋಗುವುದು', 'ಕಡಿಮೆಯೆಂದರೂ ಹದಿನೈದು ಪಾಕಿಸ್ತಾನಿಗಳಿಗೆ ಸುಷ್ಮಾ ಮೆಡಿಕಲ್ ವೀಸಾ ಕೊಡಿಸಿದ್ದರು, ಈಗ, ಕೆಲವರು ಅವರ ನಿಧನಕ್ಕೆ ಕುಹುಕವಾಡುತ್ತಿರುವುದು ವಿಷಾದನೀಯ', ಈ ರೀತಿಯ ರಿಪ್ಲೈಗಳು ವೀಣಾ ಮಲಿಕ್ ಟ್ವೀಟಿಗೆ ಬಂದಿವೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications